|

ಅದಿಸ ಅಬಾಬ (ಇಥಿಯೋಪಿಯಾ) – ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿ ನಾಲ್ಕೂವರೆ ತಿಂಗಳಾಗಿದೆ. ಇದರಲ್ಲಿ ಇದುವರೆಗೂ ೨೮ ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರೀಕರು ಸಾವನ್ನಪ್ಪಿದ್ದಾರೆ. ಈ ಕುರಿತು ಬ್ರೆಜಿಲ್ ಅಧ್ಯಕ್ಷ ಲುಲಾ ದ ಸಿಲ್ವಾ ಅವರು ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರನ್ನು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ಗೆ ಹೋಲಿಸಿದ್ದಾರೆ. ದ ಸಿಲ್ವಾ ಮಾತನಾಡುತ್ತಾ, ನೇತನ್ಯಾಹು ಗಾಜಾದಲ್ಲಿ ನರಸಂಹಾರ ಮಾಡುತ್ತಿದ್ದಾರೆ. ಹಿಟ್ಲರ್ ಯಹೂದಿಗಳ ಮೇಲೆ ಮಾಡಿದ್ದಂತೆ ಅವರು ಪ್ಯಾಲೆಸ್ಟೀನಿಯನ್ನರ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲ್ನ ಕ್ರಮವು ಯಹೂದಿಗಳ ‘ಹೋಲೋಕಾಸ್ಟ‘ ಹತ್ಯಾಕಾಂಡದಂತಿದೆ. ಇಥಿಯೋಪಿಯಾದ ರಾಜಧಾನಿ ಅದಿಸ ಅಬಾಬಾದಲ್ಲಿ ನಡೆದ ಆಫ್ರಿಕನ್ ಯೂನಿಯನ್ ಶೃಂಗಸಭೆಯಲ್ಲಿ ಲುಲಾ ಮೇಲಿನ ಹೇಳಿಕೆ ನೀಡಿದ್ದಾರೆ.
(ಸೌಜನ್ಯ – TRT World)
ಯಹೂದಿ ‘ಹೊಲೊಕಾಷ್ಟ’ದಲ್ಲಿ ೬ ವರ್ಷಗಳಲ್ಲಿ ಅಂದಾಜು ೬೦ ಲಕ್ಷಕ್ಕೂ ಹೆಚ್ಚು ಯಹೂದಿಗಳು ಸಾವನ್ನಪ್ಪಿದ್ದರು. ಇದರಲ್ಲಿ ೧೫ ಲಕ್ಷ ಮಕ್ಕಳು ಸೇರಿದ್ದಾರೆ.
ಇಸ್ರೇಲ್ನ ಪ್ರತ್ಯುತ್ತರ!
ಬೆಂಜಮಿನ್ ನೆತನ್ಯಾಹು ಬ್ರೆಜಿಲ್ ಅಧ್ಯಕ್ಷರ ಹೇಳಿಕೆಯನ್ನು ‘ನಾಚಿಕೆಗೇಡು‘ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಖಂಡಿಸಲು ಇಸ್ರೇಲ್ ಸರಕಾರ ಇಸ್ರೇಲ್ನಲ್ಲಿರುವ ಬ್ರೆಜಿಲ್ ರಾಯಭಾರಿಯನ್ನು ಕರೆಸಲಾಯಿತು. ಭಯೋತ್ಪಾದಕ ಸಂಘಟನೆ ಹಮಾಸ ನಾಶವಾಗುವವರೆಗೂ ಗಾಜಾ ಮೇಲಿನ ದಾಳಿ ನಿಲ್ಲುವುದಿಲ್ಲ ಎಂದು ನೆತನ್ಯಾಹು ಹೇಳಿದ್ದಾರೆ.
Prime Minister Benjamin Netanyahu:
“By comparing Israel’s war in Gaza against Hamas, a genocidal terrorist organization, to the Holocaust,
— Prime Minister of Israel (@IsraeliPM) February 18, 2024
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!