ಪ್ರಸಿದ್ಧ ಫ್ರೆಂಚ್ ಪತ್ರಕರ್ತ ಫ್ರಾಂನ್ಸುವಾ ಗೊತಿಯೆ ಇವರು ವೀಡಿಯೊವನ್ನು ಪ್ರಸಾರ ಮಾಡಿ ಮತಾಂಧರ ಸ್ವರೂಪವನ್ನು ಬಹಿರಂಗಪಡಿಸಿದರು !

ನವದೆಹಲಿ – ವಿಶ್ವಸಂಸ್ಥೆಯಂತಹ ಪಾಶ್ಚಿಮಾತ್ಯ ಸಂಸ್ಥೆಗಳು 2 ಕಾರಣಗಳಿಗಾಗಿ ಜಿಹಾದಿ ಭಯೋತ್ಪಾದಕರ ಪರವಾಗಿ ನಿಂತಿವೆ. ‘ತಖಿಯಾ’ ಮೊದಲ ಕಾರಣ ಮತ್ತು ಇದರ ಪ್ರಕಾರ, ಮುಸಲ್ಮಾನನ ಜೀವಕ್ಕೆ ಅಪಾಯ ಬಂದಾಗ, ಅವನು ತನ್ನ ಮನಸ್ಸಿನ ಮೂಲ ಪರಿಕಲ್ಪನೆಗಳು, ಆಲೋಚನೆಗಳು ಅಥವಾ ಆಸೆಗಳನ್ನು ಮಾತನಾಡಬಾರದು. ‘ತಕಿಯಾ’ ಪರಿಕಲ್ಪನೆಯನ್ನು ಕುರಾನ್ನಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅದರ ಮೇಲೆ ಕಾರ್ಯನಿರ್ವಹಿಸುವುದು ಪಾಪವಲ್ಲ. ಆದ್ದರಿಂದ, ಮುಸ್ಲಿಮರು ಅಲ್ಪಸಂಖ್ಯಾತರಾದಾಗ, ಅವರು ಎಂದಿಗೂ ‘ಮುಸ್ಲಿಮೇತರರು ನಮ್ಮ ಶತ್ರುಗಳು’ ಎಂದು ಹೇಳುವುದಿಲ್ಲ ಎಂದು ಫ್ರೆಂಚ್ ಪತ್ರಕರ್ತ ಫ್ರಾಂನ್ಸುವಾ ಗೊತಿಯೆ ಇವರು ಹೇಳಿದರು. ಈ ಸಂಬಂಧ ಅವರು ಯೂಟ್ಯೂಬ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಇತ್ತೀಚೆಗೆ ‘ಸನಾತನ ಪ್ರಭಾತ’ಕ್ಕೆ ತಿಳಿಸಿದರು.
(ಸೌಜನ್ಯ – Francois Gautier)
1. ಈ ವಿಡಿಯೋದಲ್ಲಿ ಗೊತಿಯೆ ಇವರು, ಜಿಹಾದಿ ಮುಸ್ಲಿಮರು ಪಾಶ್ಚಿಮಾತ್ಯರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುವುದು ಮತ್ತೊಂದು ಕಾರಣ ಎಂದು ಹೇಳಿದ್ದಾರೆ. ಅವರು ಆತಿಥ್ಯಪ್ರಿಯರು. ಈ ಪ್ರಯತ್ನ ಹಿಂದೂಗಳ ಸಂದರ್ಭದಲ್ಲಿ ಆಗುವುದಿಲ್ಲ. ಜಿಹಾದಿಗಳ ಈ ಕೃತಿಯಿಂದ ಪಾಶ್ಚಿಮಾತ್ಯ ಸಂಸ್ಥೆಗಳು ಅವರ ಪರವಾಗಿ ನಿಲ್ಲುವಂತೆ ಮಾಡಿದೆ. ಫ್ರೆಂಚ್ ಪತ್ರಕರ್ತನಾಗಿದ್ದ ನಾನು ತೊಂಬತ್ತರ ದಶಕದಲ್ಲಿ ಕಾಶ್ಮೀರದಲ್ಲಿದ್ದಾಗ ಇದನ್ನು ಚೆನ್ನಾಗಿ ಅನುಭವಿಸಿದೆ.
2. ಈ ಎರಡೂ ಪರಿಕಲ್ಪನೆಗಳ ಹಿಂದಿನ ಹಿನ್ನೆಲೆಯನ್ನು ಗೊತಿಯೆ ಇವರು ವಿವರಿಸಿದರು. ಅವರು, ಹಮಾಸ್ ಭಯೋತ್ಪಾದಕರು ಇಸ್ರೇಲಿಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದರೂ, ವಿಶ್ವಸಂಸ್ಥೆ ಮತ್ತು ಇತರ ಪಾಶ್ಚಿಮಾತ್ಯ ಸಂಸ್ಥೆಗಳು ಆರಂಭದಲ್ಲಿ ಈ ಕಾರಣಗಳಿಗಾಗಿ ಹಮಾಸ್ ಪರವಾಗಿ ನಿಂತವು ಎಂದು ಅವರು ಹೇಳಿದರು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump