ಅಯೋಧ್ಯೆಯ ನಂತರ ಶೀಘ್ರದಲ್ಲೇ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣವಾಗಲಿದೆ ! – ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿ

ಆಳಂದಿ (ಪುಣೆ ಜಿಲ್ಲೆ), ಫೆಬ್ರವರಿ 11 (ಸುದ್ದಿ.) – ಅಯೋಧ್ಯೆ, ಕಾಶಿ ಮತ್ತು ಮಥುರಾ ಪುಣ್ಯ ಕ್ಷೇತ್ರಗಳಾಗಿವೆ. ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಫೆಬ್ರವರಿ 11ರಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶ್ರೀರಾಮ ಜನ್ಮಭೂಮಿ ಸಮಸ್ಯೆ ಬಗೆಹರಿದಂತೆ ಮಥುರಾದ ಶ್ರೀಕೃಷ್ಣ ದೇಗುಲವನ್ನೂ ನ್ಯಾಯಾಂಗವಾಗಿ ನಿರ್ಮಿಸಲಾಗುವುದು ಎಂದು ಅಭಿಪ್ರಾಯಪಟ್ಟರು. ವಾರಕರಿ ಶಿಕ್ಷಣ ಸಂಸ್ಥೆಯ ಮುಂಭಾಗ ಆಯೋಜಿಸಿದ್ದ ‘ಗೀತಾಭಕ್ತಿ ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಆಚಾರ್ಯ ಪ್ರಮೋದ ಕೃಷ್ಣಂ ಅವರನ್ನು ಅಮಾನತುಗೊಳಿಸಿದ್ದಕ್ಕೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಅವರು, ಶ್ರೀರಾಮ ಮತ್ತು ಶ್ರೀರಾಮ ಮಂದಿರವನ್ನು ವಿರೋಧಿಸಬೇಡಿ ಎಂದು ಕಾಂಗ್ರೆಸ್‌ಗೆ ಹೇಳಿರುವುದೇ ಅವರ ತಪ್ಪಾಗಿದೆ, ಎಂದು ಹೇಳಿದ್ದರು. ಹೀಗಾಗಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.