ಪುರಾತತ್ವ ಇಲಾಖೆಯಿಂದ ಜ್ಞಾನವಾಪಿಯ ಸಮೀಕ್ಷಾ ವರದಿ ಬಹಿರಂಗ ವಾಗಲಿದೆ !

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿಯ ಪುರಾತತ್ವ ಇಲಾಖೆಯ ಸಮೀಕ್ಷೆಯ ವರದಿ ಎರಡು ಪಕ್ಷದವರಿಗೆ ನೀಡಲು ನ್ಯಾಯಾಲಯ ಒಪ್ಪಿದೆ. ಆದಷ್ಟು ಬೇಗನೆ ಇದರ ಪ್ರತಿ ಅವರಿಗೆ ನೀಡುವರು. ಇದರಿಂದ ಈ ವರದಿ ಸಾರ್ವಜನಿಕವಾಗಬಹುದು. ಸಮೀಕ್ಷೆಯ ವರದಿ ಬಹಿರಂಗ ಪಡಿಸಲು ಹಿಂದೂ ಪಕ್ಷದಿಂದ ಆಗ್ರಹಿಸಲಾಗಿತ್ತು. ಆದರೆ ಸಮೀಕ್ಷೆಯ ವರದಿ ಬಹಿರಂಗಪಡಿಸಬಾರದು ಎಂದು ಮುಸಲ್ಮಾನ ಪಕ್ಷದಿಂದ ಅರ್ಜಿ ಸಲ್ಲಿಸಿದರು. ಈಗ ಈ ವರದಿ ಬಹಿರಂಗವಾದ ನಂತರ ಜ್ಞಾನವಾಪಿ ಯಾರದು ? ಎಂದು ಸ್ಪಷ್ಟವಾಗುವುದು.

ಡಿಸೆಂಬರ್ ೧೮, ೨೦೨೩ ರಂದು ಪುರಾತತ್ವ ಸಮೀಕ್ಷಾ ವಿಭಾಗದಿಂದ ಈ ವಿಷಯದ ವರದಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿತ್ತು. ಜ್ಞಾನವಾಪಿಯ ಸಮೀಕ್ಷೆ ೧೦೦ ದಿನಗಳಿಗಿಂತಲೂ ಹೆಚ್ಚು ಸಮಯ ನಡೆಯಿತು. ಇದಕ್ಕಾಗಿ ಅಮೇರಿಕಾದ ಶಾಸ್ತ್ರಜ್ಞರ ಸಹಾಯ ಪಡೆದಿದ್ದರು.

(ಸೌಜನ್ಯ – Republic World)