ಕಲಬುರಗಿಯಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದ ಪೊಲೀಸ್ ಪೇದೆಯ ವಿರುದ್ಧ ದೂರು ದಾಖಲು !

ಕಲಬುರಗಿ – ನಗರದ ಕಮಲಾಪುರ ಪೊಲೀಸ್ ಠಾಣೆಯ ಹವಾಲ್ದಾರ್ ಬಸವರಾಜ ಇವರು ದೂರು ನೀಡಲು ಬಂದಿದ್ದ ಮಹಿಳೆಯನ್ನು ಮಾನಸಿಕವಾಗಿ ಪೀಡಿಸಿ, ಅವಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಅವನ ವಿರುದ್ಧ ದೂರನ್ನು ದಾಖಲಿಸಲಾಗಿದೆ.

(ಸೌಜನ್ಯ – Public TV)

ಒಂದು ಘಟನೆಯ ಸಂದರ್ಭದಲ್ಲಿ ಸಂತ್ರಸ್ತೆಯು ಪೊಲೀಸ ಠಾಣೆಗೆ ದೂರು ದಾಖಲಿಸಲು ಹೋಗಿದ್ದರು. ಆ ಸಮಯದಲ್ಲಿ ಬಸವರಾಜನು ಮಹಿಳೆಯೊಂದಿಗೆ ಪರಿಚಯ ಮಾಡಿಕೊಂಡನು. ಅವನು ಅವಳ ಮೊಬೈಲ ಸಂಖ್ಯೆಯನ್ನು ತೆಗೆದುಕೊಂಡನು ಮತ್ತು ಪ್ರತಿದಿನ ಕರೆ ಮಾಡಿ ಅವಳಿಗೆ ಪೀಡಿಸಲು ಪ್ರಾರಂಭಿಸಿದನು. `ನನಗೆ ನಿನ್ನ ಮೇಲೆ ಪ್ರೀತಿಯಿದೆ. ನನಗೆ ಸಹಕರಿಸಿದರೆ, ನಿನ್ನ ದೂರನ್ನು ಪರಿಹರಿಸುತ್ತೇನೆ. ನೀನು ನನ್ನ ಮಾತನ್ನು ಕೇಳದಿದ್ದರೆ, ಮನೆಗೆ ಬಂದು ನಿನ್ನನ್ನು ಎತ್ತಿಕೊಂಡು ಹೋಗುತ್ತೇನೆ’, ಎಂದು ಬೆದರಿಕೆ ಹಾಕಿದ್ದನು. ಮಹಿಳೆಯ ದೂರಿನ ಪ್ರಕಾರ ಮಹಿಳಾ ಪೊಲೀಸ್ ಠಾಣೆ ದೂರನ್ನು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಪೊಲೀಸರು ರಕ್ಷಕರಲ್ಲ, ಭಕ್ಷಕರು