ಮಹಾನಗರ ಪಾಲಿಕೆ ಆಸ್ಪತ್ರೆಯ ಭಿತ್ತಿಪತ್ರದಲ್ಲಿ ಗೋಮಾಂಸ ಸೇವನೆಯ ಕುರಿತು ಬರೆಹ: ಧರ್ಮಪ್ರೇಮಿಗಳಿಂದ ಪೊಲೀಸರಿಗೆ ಮನವಿ
ವಾಶಿ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ ನಡೆದ ಘಟನೆ!
ಧರ್ಮಪ್ರೇಮಿಗಳಿಂದ ಪೊಲೀಸರಿಗೆ ಮನವಿ

ನವಿ ಮುಂಬಯಿ – ಇಲ್ಲಿನ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ 9 ರಿಂದ 11ತಿಂಗಳ ಮಗುವಿಗೆ ಗೋಮಾಂಸ ತಿನ್ನಲು ಸಲಹೆ ನೀಡುವ ಭಿತ್ತಿಪತ್ರವನ್ನು ಅಳವಡಿಸಿದವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಮೊಕದ್ದಮೆ ದಾಖಲಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಶಿ ಪೊಲೀಸ್ ಠಾಣೆಗೆ ಪರಿಷತ್ ಮನವಿ ಪತ್ರ ಸಲ್ಲಿಸಿದೆ. ಈ ಆಕ್ಷೇಪಾರ್ಹ ಭಿತ್ತಿಪತ್ರಗಳನ್ನು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಹರಿದು ಹಾಕಿದ್ದಾರೆ.
“Register a case against those who advised feeding beef to young children!” – VHP 🚩
A highly concerning incident has come to light at Vashi Municipal Hospital.
Memorandum submitted to the police demanding immediate action.
In a state that honors Go Rakshaks, how could such… pic.twitter.com/78bOZZRNy7
— Sanatan Prabhat (@SanatanPrabhat) June 16, 2026
ಮನವಿ ಪತ್ರದಲ್ಲಿರುವ ಅಂಶಗಳು:
1. ಜೂನ್ 14 ರಂದು ಕಾರ್ಯಕರ್ತ ರೋಹಿತ್ ಖಂಡಾಗಳೆ ಅವರು ಮಹಾನಗರ ಪಾಲಿಕೆಯ ವಾಶಿ ಆಸ್ಪತ್ರೆಗೆ ತೆರಳಿದ್ದರು. ಆಗ ಅವರಿಗೆ ಆಸ್ಪತ್ರೆಯ ಗೋಡೆಯ ಮೇಲೆ ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (IAP)- IYCF ವಿಭಾಗ’ದ ಹೆಸರಿನಲ್ಲಿ ‘9 ರಿಂದ 11 ತಿಂಗಳ ವಯಸ್ಸಿನ ಪೂರಕ ಆಹಾರ ಮಾರ್ಗದರ್ಶಿ’ ಎಂಬ ಶೀರ್ಷಿಕೆಯಡಿ ಭಿತ್ತಿಪತ್ರ ಅಂಟಿಸಿರುವುದು ಕಂಡುಬಂದಿತು.
2. ಈ ಭಿತ್ತಿಪತ್ರದಲ್ಲಿ ಸಣ್ಣದಾಗಿ ಕತ್ತರಿಸಿದ ಮಾಂಸ (ಕೋಳಿ ಮಾಂಸ, ಕುರಿ ಮಾಂಸ, ಗೋಮಾಂಸ) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರವೆಂದು ಪೂಜಿಸಲಾಗುತ್ತದೆ. ಆದ್ದರಿಂದ ಗೋಮಾಂಸ ಭಕ್ಷಣೆ ಮಾಡುವುದು ಹಿಂದೂ ಧರ್ಮಕ್ಕೆ ವಿರೋಧವಾಗಿದೆ. ಮಗುವಿಗೆ ಗೋಮಾಂಸ ತಿನ್ನಿಸಲು ಸಲಹೆ ನೀಡುವುದು ಅತ್ಯಂತ ನಿಂದನೀಯ ಹಾಗೂ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹದ್ದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಭಿತ್ತಿಪತ್ರವನ್ನು ಹಚ್ಚುವುದು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನದಂತೆ ತೋರುತ್ತಿದೆ.
3. ಈ ಪ್ರಕರಣದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮತ್ತು ಭಿತ್ತಿಪತ್ರವನ್ನು ಹಾಕಿದ ಸಂಬಂಧಪಟ್ಟವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಠಿಣ ಕಾನೂನು ಮತ್ತು ಸರಕಾರಿ ಕ್ರಮ ಕೈಗೊಳ್ಳಬೇಕು, ಹಾಗೆಯೇ ಈ ಆಕ್ಷೇಪಾರ್ಹ ಭಿತ್ತಿಪತ್ರವನ್ನು ತಕ್ಷಣವೇ ತೆರವುಗೊಳಿಸಲು ಆದೇಶಿಸಬೇಕು ಎಂದು ಕೋರಲಾಗಿದೆ.
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ
ಅಶ್ಲೀಲತೆ ಹರಡುವ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳಿಗೆ ಸೆನ್ಸಾರ್ ಮಂಡಳಿಯ ಪೂರ್ವಾನ್ಮತಿ ಕಡ್ಡಾಯಗೊಳಿಸಿ!
‘ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಜಾತ್ಯತೀತವಾಗಿದೆ, ಯಾವುದಾದರೂ ಇಸ್ಲಾಮಿಕ್ ದೇಶ ಜಾತ್ಯತೀತವಾಗಿದ್ದರೆ ತಿಳಿಸಿ !’ – ರಾಜಾ ಭಯ್ಯಾ, ಶಾಸಕರು, ಉತ್ತರ ಪ್ರದೇಶ
Muslims Oppose Yoga Day : ‘ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಯೋಗ ದಿನ ಏತಕ್ಕೆ ?’
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !