ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ತನಕ ಇಂತಹ ಘಟನೆಗಳು ನಿಲ್ಲುವುದಿಲ್ಲ !

ಪುರುಲಿಯ (ಬಂಗಾಳ) – ಇಲ್ಲಿ ಜನವರಿ ೧೧ ರಂದು ಸಂಜೆ ೩ ಸಾಧುಗಳಿಗೆ ಸಮೂಹವು ಥಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಸಾಧುಗಳು ಬಂಗಾಳದ ಗಂಗಾಸಾಗರ ಮೇಳಕ್ಕಾಗಿ ಉತ್ತರ ಪ್ರದೇಶದಿಂದ ಬಂದಿದ್ದರು. ಈ ಸಾಧುಗಳು ಅಪಹರಣಕಾರರೆಂದು ತಿಳಿದು ಅವರಿಗೆ ಥಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಿಂದ ಭಾಜಪದಿಂದ ತೃಣಮೂಲ ಕಾಂಗ್ರೆಸ್ಸನ್ನು ಟೀಕಿಸಿದೆ. ‘ರಾಜ್ಯದಲ್ಲಿ ತೃಣ ಮೂಲ ಕಾಂಗ್ರೆಸ್ಸಿನ ಸರಕಾರ ಇರುವುದರಿಂದ ಸಾಧುಗಳ ಮೇಲೆ ದಾಳಿಗಳು ನಡೆಯುತ್ತಿವೆ, ಎಂದು ಭಾಜಪ ಆರೋಪಿಸಿದೆ. ಪೊಲೀಸರು ಮಾತ್ರ ಈ ಘಟನೆ ತಪ್ಪು ತಿಳುವಳಿಕೆಯಿಂದ ನಡೆದಿದೆ ಎಂದು ಹೇಳುತ್ತಿದ್ದಾರೆ.
೧. ಒಂದು ಬಾಡಿಗೆಯ ಕಾರಿನಿಂದ ಈ ೩ ಸಾಧುಗಳು, ಓರ್ವ ವ್ಯಕ್ತಿ ಮತ್ತು ಅವರ ೨ ಮಕ್ಕಳು ಹೀಗೆ ಉತ್ತರಪ್ರದೇಶದಿಂದ ಗಂಗಾಸಾಗರ ಮೆಳಕ್ಕಾಗಿ ಬಂದಿದ್ದರು. ಪುಲಿಯಾದಲ್ಲಿ ಅವರು ಅಪ್ರಾಪ್ತ ಹುಡುಗೆಗೆ ವಿಳಾಸ ಕೇಳಿದರು. ಆ ಹುಡುಗಿ ಸಾಧುಗಳನ್ನು ನೋಡಿ ಹೆದರಿ ಕಿರುಚುತ್ತಾ ಓಡಿ ಹೋದಳು. ಆದ್ದರಿಂದ ಸ್ಥಳೀಯ ಜನರು ಅಲ್ಲಿ ಸೇರಿದರು. ಅವರು ಕೂಡ ಹುಡುಗಿಯ ಅಪಹರಿಸಲು ಬಂದಿರುವುದಾಗಿ ಅನುಮಾನ ಪಟ್ಟರು. ಅದರ ನಂತರ ಜನರು ಈ ಸಾಧುಗಳನ್ನು ಥಳಿಸಿದರು. ಈ ಸಮಯದಲ್ಲಿ ಸಾಧುಗಳು ಕೈ ಮುಗಿದು ವಿನಂತಿಸಿರುವುದು ಕಾಣುತ್ತಿತ್ತು, ಎಂದು ವಿಡಿಯೋದಲ್ಲಿ ಕಾಣುತ್ತಿದೆ.
೨. ಸಮೂಹವು ಸಾಧುಗಳು ಯಾವ ಕಾರಿನಲ್ಲಿ ಬಂದಿದ್ದರು, ಆ ವಾಹನವನ್ನು ಧ್ವಂಸಗೊಳಿಸಿದರು. ಆ ಸಮಯದಲ್ಲಿ ಪೊಲೀಸರು ಸಾಧುಗಳನ್ನು ಗುಂಪಿನ ವಶದಿಂದ ಬಿಡಿಸಿ ಪೊಲೀಸ ಠಾಣೆಗೆ ಕರೆದೊಯ್ದರು.
(ಸೌಜನ್ಯ :TV9 Bharatvarsh)
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ