೪೨ ದ್ವಾರಗಳಿಗೆ ೧೦೦ ಕೆಜಿ ಚಿನ್ನದ ಲೇಪನ !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಶ್ರೀರಾಮಮಂದಿರದ ಒಟ್ಟು ೪೬ ದ್ವಾರಗಳು ಅಳವಡಿಸಲಾಗುವುದು. ಅದರಲ್ಲಿನ ೪೨ ದ್ವಾರಗಳಿಗೆ ೧೦೦ ಕೆಜಿ ಚಿನ್ನದ ಲೇಪನ ಮಾಡಲಾಗುವುದು. ಇದರಲ್ಲಿನ ಮೊದಲನೆಯ ಚಿನ್ನದ ದ್ವಾರದ ಛಾಯಾಚಿತ್ರ ಪ್ರಸಾರ ಮಾಡಲಾಗಿದೆ. ಈ ದ್ವಾರ ಸುಮಾರು ೮ ಅಡಿ ಎತ್ತರ ಮತ್ತು ೧೨ ಅಡಿ ಅಗಲ ಇದೆ. ಬರುವ ೩ ದಿನದಲ್ಲಿ ಇನ್ನೂ ೧೩ ದ್ವಾರಗಳನ್ನು ಅಳವಡಿಸಲಾಗುವುದು. ಈ ದ್ವಾರಗಳು ಮಹಾರಾಷ್ಟ್ರದಲ್ಲಿನ ಸಾಗವಾನಿ ಕಟ್ಟಿಗೆಯಿಂದ ಮಾಡಲಾಗಿದೆ. ಹೈದರಾಬಾದಿನ ಕಾರ್ಮಿಕರಿಂದ ಇದರ ಕೆತ್ತನೆಕಾರ್ಯ ಮಾಡಿದೆ. ಇದರ ನಂತರ ಅದರ ಮೇಲೆ ತಾಮ್ರದ ಲೇಪನ ಮಾಡಿ ನಂತರ ಚಿನ್ನದ ಲೇಪನ ಮಾಡಲಾಗಿದೆ.
ಶ್ರೀರಾಮಲಲ್ಲನ ಸಿಂಹಾಸನ ಕೂಡ ಚಿನ್ನದ್ದು !
ಶ್ರೀ ರಾಮಲಲ್ಲಾನ ಸಿಂಹಾಸನ ಕೂಡ ಚಿನ್ನದಿಂದ ತಯಾರಿಸಲಾಗಿದೆ. ಈ ಕಾರ್ಯ ಜನವರಿ ೧೫ ರ ವರೆಗೆ ಪೂರ್ಣಗೊಳ್ಳುವುದು. ಮಂದಿರದ ಶಿಖರ ಕೂಡ ಚಿನ್ನದ್ದೆ ಇರಲಿದೆ; ಆದರೆ ಈ ಕಾರ್ಯ ಶಿಖರ ಪೂರ್ಣವಾದ ನಂತರ ಮಾಡಲಾಗುವುದು.
ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಿರುವ ಚರಣ ಪಾದುಕೆ !
ಭಗವಾನ್ ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ನಂತರ ಅವರ ಚರಣ ಪಾದುಕೆ ಕೂಡ ಮಂದಿರದಲ್ಲಿ ಇಡಲಾಗುವುದು. ಈ ಚರಣ ಪಾದುಕೆ ೧ ಕೆಜಿ ಚಿನ್ನ ಮತ್ತು ೭ ಕೆಜಿ ಬೆಳ್ಳಿಯಿಂದ ತಯಾರಿಸಲಾಗಿದೆ. ಭಾಗ್ಯನಗರದ ಶ್ರೀಜಲ ಶ್ರೀನಿವಾಸ ಶಾಸ್ತ್ರಿ ಇವರು ಈ ಪಾದುಕೆ ತಯಾರಿಸಿದ್ದಾರೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ