1 ಸಾವಿರದ 8 ಶಿವಲಿಂಗಗಳ ಕೂಡ ಸ್ಥಾಪನೆ !

ಅಯೋಧ್ಯೆ – ಜನೇವರಿ 22 ರಂದು ನಡೆಯುವ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಜನವರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಈ ಸಂದರ್ಭದಲ್ಲಿ ಸಾವಿರಾರು ಋಷಿಮುನಿಗಳು ಮತ್ತು ಸಂತರು ಯಾಗ-ಪೂಜೆ ಮಾಡಲು ಅಯೋಧ್ಯೆಗೆ ಬರುವವರಿದ್ದಾರೆ. ಜನವರಿ 17 ರಿಂದ ಯಾಗ- ಪೂಜೆಗಳು ಆರಂಭವಾಗಲಿದೆ. ಇದಕ್ಕಾಗಿ ಅಯೋಧ್ಯೆಯ ಶರಯೂ ನದಿಯ ದಡದಲ್ಲಿ 100 ಯಜ್ಞಕುಂಡಗಳನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ ಶರಯೂ ನದಿಯ ತೀರದಲ್ಲಿ ಜಬಲಪುರದಿಂದ ಬರುವ 1 ಸಾವಿರ 8 ಶಿವಲಿಂಗಳ ಸ್ಥಾಪನೆಯಾಗಲಿದೆ. ನಗರದಲ್ಲಿ ಜನವರಿ 22 ರಂದು ನಡೆಯುವ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ಸಿದ್ಧತೆಗಳು ಪ್ರಾರಂಭವಾಗಿದ್ದು, ನಗರದ ವಾತಾವರಣ ರಾಮಮಯವಾಗಿದೆ.
ಅಯೋಧ್ಯೆಯಲ್ಲಿ ಜನವರಿ 8 ರಿಂದ ರಾಮಕಥಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ಪ್ರಾರಂಭವಾಗಿದೆ. ಈ ಮಹೋತ್ಸವ ಹೋಳಿಹಬ್ಬದ ವರೆಗೆ ಅಂದರೆ ಮಾರ್ಚ್ 24 ರವರೆಗೆ ಮುಂದುವರಿಯುತ್ತದೆ. ರಾಮಕಥಾ ಉದ್ಯಾನವನದಲ್ಲಿ ವಿವಿಧ ಧಾರ್ಮಿಕ ಮುಖಂಡರು ರಾಮಕಥೆಯ ಮೇಲೆ ಪ್ರವಚನ ಮಾಡಲಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ