ಬಿಹಾರದಲ್ಲಿನ ಆಡಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ ಸಿಂಹ ಇವರಿಂದ ಫಲಕ ಪ್ರರ್ದಶನ !

ಪಾಟಲಿಪುತ್ರ (ಬಿಹಾರ) – ಬಿಹಾರದಲ್ಲಿನ ಆಡಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ ಸಿಂಹ ಇವರು ಪಕ್ಷದ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ ಮತ್ತು ಅವರ ಪತ್ನಿ ರಾಬಡಿ ದೇವಿ ಇವರ ಮನೆಯ ಹೊರಗೆ ಸಾವಿತ್ರಿಬಾಯಿ ಫುಲೆ ಇವರ ಜಯಂತಿಯ ಪ್ರಯುಕ್ತ ಫಲಕ ಹಾಕಿದ್ದಾರೆ. ಇದರಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯ ಕುರಿತು ಪರೋಕ್ಷವಾಗಿ ಟೀಕಿಸುತ್ತಾ, ‘ದೇವಸ್ಥಾನ ಎಂದರೆ ಮಾನಸಿಕ ಗುಲಾಮಗಿರಿಯ ಮಾರ್ಗವಾಗಿದೆ’, ಈ ರೀತಿಯಲ್ಲಿ ಬರೆಯಲಾಗಿದೆ. ಹಾಗೂ ಈ ಫಲಕದ ಮೇಲೆ ಲಾಲು ಪ್ರಸಾದ ಯಾದವ, ರಾಬಡಿ ದೇವಿ, ಅವರ ಪುತ್ರ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಇವರ ಛಾಯಾಚಿತ್ರಗಳು ಇವೆ. ಇದಲ್ಲದೆ ಭಗವಾನ ಬುದ್ಧ, ಸಾಮ್ರಾಟ ಅಶೋಕ ಇವರ ಚಿತ್ರಗಳು ಮತ್ತು ಸಾವಿತ್ರಿಬಾಯಿ ಫುಲೆ ಮತ್ತು ಇತರ ಜನರ ಛಾಯಾಚಿತ್ರಗಳು ಇವೆ.
ಈ ಫಲಕದ ಮೇಲೆ, ದೇವಸ್ಥಾನ ಎಂದರೆ ಮಾನಸಿಕ ಗುಲಾಮಗಿರಿಯ ಮಾರ್ಗವಾಗಿದೆ ಮತ್ತು ಶಾಲೆಯ ಅರ್ಥ ಜೀವನದಲ್ಲಿನ ಪ್ರಕಾಶದ ಮಾರ್ಗ. ದೇವಸ್ಥಾನದಲ್ಲಿ ಘಂಟೆ ಬಾರಿಸಿದಾಗ, ನಾವು ಮೂಢನಂಬಿಕೆ, ಡೋಂಗಿ, ಮೂರ್ಖತನ, ಅಜ್ಞಾನದ ಕಡೆಗೆ ಹೋಗುತ್ತಿದ್ದೇವೆ ಎಂಬ ಸಂದೇಶ ಸಿಗುತ್ತದೆ. ಯಾವಾಗ ಶಾಲೆಯಲ್ಲಿನ ಘಂಟೆ ಬಾರಿಸುತ್ತದೆ ಆಗ ನಾವು ಸರ್ವಗುಣ ಜ್ಞಾನ ಮತ್ತು ವೈಜ್ಞಾನಿಕ ಪ್ರಕಾಶದ ಕಡೆಗೆ ಮಾರ್ಗಕ್ರಮಣ ಮಾಡುತ್ತೇವೆ ಎಂಬ ಸಂದೇಶ ಸಿಗುತ್ತದೆ. ಈಗ ನೀವೇ ನಿಧ್ರಿಸಿ ನಮಗೆ ಯಾವ ಕಡೆಗೆ ಹೋಗುವುದಿದೆ, ಎಂದು ಹೇಳಿದರು.
‘Mandir path to mental slavery’ posters in Bihar trigger tension between RJD, JDU; BJP slams Opposition as politics over #RamTemple grows#RamMandir #RamMandirAyodhya | @AnushaSoni23 pic.twitter.com/SrTl0xCMGQ
— News18 (@CNNnews18) January 1, 2024
(ಸೌಜನ್ಯ : News18)
ಸಂಪಾದಕರ ನಿಲುವು* ದೇವಸ್ಥಾನದ ಮಹತ್ವ ತಿಳಿಯದೆ ದೇವಸ್ಥಾನವನ್ನು ದ್ವೇಷಿಸುವವರು ಈ ರೀತಿಯ ಹೇಳಿಕೆ ನೀಡುತ್ತಾರೆ ! ಇಂತಹವರ ಮೇಲೆ ಸರಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲದ್ದರಿಂದ ಅವರು ಮತ್ತೆ ಮತ್ತೆ ಈ ರೀತಿಯ ಹೇಳಿಕೆ ನೀಡುತ್ತಾ ಹಿಂದೂ ಧರ್ಮದ ಅವಮಾನ ಮಾಡುತ್ತಿರುತ್ತಾರೆ ! ಈ ಸ್ಥಿತಿ ಹಿಂದೂ ರಾಷ್ಟ್ರದಲ್ಲಿ ಬದಲಾಯಿಸಲಾಗುವುದು ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ