ಗುಜರಾತ್‌ನಿಂದ ಅಯೋಧ್ಯೆವರೆಗೆ ರಥಯಾತ್ರೆ ಮತ್ತೆ ಪ್ರಾರಂಭ !

1990 ರ ದಶಕದಲ್ಲಿ ರಥಯಾತ್ರೆಯನ್ನು ಪ್ರಾರಂಭಿಸಲಾಗಿತ್ತು: ಜಗತ್ತಿನಾದ್ಯಂತ ಶ್ರೀ ರಾಮ ಜನ್ಮಭೂಮಿ ಮುಕ್ತಿ ಆಂದೋಲನವು ಹರಡಿತ್ತು.

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಗುಜರಾತಿನಿಂದ ಅಯೋಧ್ಯೆಯವರೆಗೆ ರಥಯಾತ್ರೆಯನ್ನು ನಡೆಸಲಾಗುತ್ತಿದೆ ಜನವರಿ 8 ರಿಂದಲೇ, ಯಾತ್ರೆಯು ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ರಾಜ್ಯದ ಮೂಲಕ ಹಾದು ಹೋಗಲಿದೆ. ಜನವರಿ 20 ರಂದು ಈ ರಥಯಾತ್ರೆ ಅಯೋಧ್ಯೆಯನ್ನು ತಲುಪಲಿದೆ. ಕರ್ಣಾವತಿಯ ‘ರಾಮಚರಿತ ಮಾನಸ ಟ್ರಸ್ಟ-ನುರಾನಿಪ’ ಈ ಸಂಸ್ಥೆಯು ಈ ರಥಯಾತ್ರೆಯನ್ನು ಆಯೋಜಿಸಿದೆ. ಅಯೋಧ್ಯೆಯನ್ನು ತಲುಪಿದ ಬಳಿಕ ಟ್ರಸ್ಟ್‌ನಿಂದ ಶ್ರೀ ರಾಮಲಲ್ಲಾನಿಗೆ 51 ಲಕ್ಷ ರೂಪಾಯಿ 1990 ರ ದಶಕದಲ್ಲಿ, ಲಾಲ್ ಕೃಷ್ಣ ಅಡ್ವಾಣಿ ಅವರು ಸೋಮನಾಥ ಜ್ಯೋತಿರ್ಲಿಂಗದಿಂದ ಅಯೋಧ್ಯೆಗೆ ರಥಯಾತ್ರೆಯನ್ನು ಆಯೋಜಿಸಿದ್ದರು. ಈ ರಥಯಾತ್ರೆಯ ಬಳಿಕವೇ ಶ್ರೀರಾಮ ಜನ್ಮಭೂಮಿ ಮುಕ್ತಿ ಆಂದೋಲನ ಭಾರತದಾದ್ಯಂತ ಹರಡಿತ್ತು.

ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಇವರಿಗೆ ಶ್ರೀ ರಾಮ ಮಂದಿರದ ಉದ್ಘಾಟನೆಗೆ ಬರಬಾರದೆಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಮನವಿ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ ಶ್ರೀರಾಮಜನ್ಮಭೂಮಿಯ ಮುಕ್ತಿಗಾಗಿ ದೊಡ್ಡ ಹೋರಾಟದ ನೇತೃತ್ವ ವಹಿಸಿದ್ದ ಭಾಜಪ ಹಿರಿಯ ನಾಯಕರಾದ ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರನ್ನು ಜನೇವರಿಯಲ್ಲಿ ನಡೆಯುವ ಶ್ರೀರಾಮ ಮಂದಿರ ಉದ್ಘಾಟನೆಯ ಸಮಾರಂಭಕ್ಕೆ ಅಯೋಧ್ಯೆಗೆ ಬರಬಾರದೆಂದು ವಿನಂತಿ ಮಾಡಿದೆ. ಶ್ರೀರಾಮಮಂದಿರ ಟ್ರಸ್ಟ್ ನ ಚಂಪತ್ ರಾಯ್ ಇವರು ಈ ಮಾಹಿತಿಯನ್ನು ನೀಡಿದರು.

ಲಾಲ್ ಕೃಷ್ಣ ಅಡ್ವಾಣಿ ಅವರಿಗೆ 96 ವರ್ಷ, ಮುರಳಿ ಮನೋಹರ್ ಜೋಶಿ ಅವರಿಗೆ ಜನವರಿಯಲ್ಲಿ 90 ವರ್ಷಗಳಾಗಲಿದೆ. ಇಬ್ಬರೂ ಹಿರಿಯರಾಗಿದ್ದು, ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಮನವಿ ಮಾಡಲಾಗಿದ್ದು, ಅದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ.