ಕೇರಳದಲ್ಲಿ ಕೊರೊನಾಗೆ ಒಬ್ಬ ವ್ಯಕ್ತಿ ಸಾವು !

ಕರೋನಾದ ಹೊಸ ತಳಿ ಪತ್ತೆ !

ತಿರುವನಂತಪುರಂ (ಕೇರಳ) – ಕೇರಳದಲ್ಲಿ ಕರೋನಾದಿಂದ ಒಬ್ಬ ರೋಗಿಯು ಸಾವನ್ನಪ್ಪಿದ್ದಾರೆ ಎಂಬ ವರದಿ ಇದೆ. ಅಬ್ದುಲ್ಲಾ (80 ವರ್ಷ) ಮೃತ ರೋಗಿಯಾಗಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ವೈರಸ್‌ನ ಹೊಸ ಉಪವಿಭಾಗ ಪತ್ತೆಯಾಗಿದೆ. ಜೆಎನ್.1′ ಅದರ ಹೆಸರಾಗಿದೆ. ‘ಜೆಎನ್. 1’ ಅನ್ನು ಮೊದಲು ಲಕ್ಸೆಂಬರ್ಗ್‌ನಲ್ಲಿ ಪತ್ತೆಯಾಗಿತ್ತು. ನಂತರ ಇದು ಹಲವು ದೇಶಗಳಿಗೆ ಹರಡಿತು. ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ.

ಕೇರಳದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ ಕುಂಡು ರಾವ್ ಅವರು ತುರ್ತು ಸಭೆ ಕರೆದಿದ್ದು, ಮಾಸ್ಕ್, ಆಕ್ಸಿಜನ್ ಸಿಲಿಂಡರ್, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳ ದಾಸ್ತಾನು ಸಿದ್ಧವಾಗಿರಿಸಲು ಆದೇಶಿಸಿದ್ದಾರೆ.