Akbaruddin Owaisi : ಅಕ್ಬರುದ್ದೀನ ಓವೈಸಿ ಅವರನ್ನು ವಿಧಾನಸಭಾ ಅಧ್ಯಕ್ಷಸ್ಥಾನದಿಂದ ತೆಗೆದುಹಾಕಿದ ಬಳಿಕ 8 ಭಾಜಪ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ !

ಭಾಗ್ಯನಗರ (ತೆಲಂಗಾಣ) – ಎಂ.ಐ.ಎಂ.ನ ಮುಖಂಡ ಮತ್ತು ತೆಲಂಗಾಣದ ಶಾಸಕ ಅಕ್ಬರುದ್ದೀನ ಓವೈಸಿ ಅವರನ್ನು ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರನ್ನು ನೇಮಿಸಿದ್ದರಿಂದ ಭಾಜಪದ 8 ಶಾಸಕರು ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ಕೊನೆಗೆ, ಓವೈಸಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ, ಹಿರಿಯ ಕಾಂಗ್ರೆಸ್ ಮುಖಂಡ ಗದ್ದಾಮ ಪ್ರಸಾದ ಕುಮಾರ ಇವರು ಸಭಾಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದರು. ತದನಂತರ ಭಾಜಪ ಶಾಸಕರು ಪ್ರಮಾಣ ವಚನ ಸ್ವೀಕರಿಸಲು ಹೋದರು. ಭಾಜಪ ಶಾಸಕರು ಎಲ್ಲಿಯವರೆಗೆ ಅಕ್ಬರುದ್ದೀನ್ ಓವೈಸಿ ಅವರನ್ನು ಕೆಳಗಿಳಿಸುವುದಿಲ್ಲವೋ, ಅಲ್ಲಿಯವರೆಗೆ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎನ್ನುವ ನಿಲುವನ್ನು ತೆಗೆದುಕೊಂಡಿದ್ದರು.

ತೆಲಂಗಾಣದ ಮೂರನೇ ವಿಧಾನಸಭೆಯ ಸಭಾಧ್ಯಕ್ಷರಾಗಿ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಶಾಸಕರಾದ ಟಿ.ರಾಜಸಿಂಗ್, ಯೆಲೇಟಿ ಮಹೇಶ್ವರ್ ರೆಡ್ಡಿ, ವೆಂಕಟರಮಣ ರೆಡ್ಡಿ, ಪಾಯಲ ಶಂಕರ, ಪೈಡಿ ರಾಕೇಶ ರೆಡ್ಡಿ, ರಾಮಾರಾವ ಪಟೇಲ ಪವಾರ, ಧನಪಾಲ ಸೂರ್ಯನಾರಾಯಣ ಮತ್ತು ಪಲವಯಿ ಹರೀಶ ಬಾಬು ಈ 8 ಜನ ಶಾಸಕರಿಗೆ ಸಭಾಧ್ಯಕ್ಷರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಗದ್ದಾಂ ಪ್ರಸಾದ ಕುಮಾರ ಅವರು ತೆಲಂಗಾಣ ವಿಧಾನಸಭೆಯ ಮೊದಲ ದಲಿತ ಸಭಾಧ್ಯಕ್ಷರಾಗಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳನ್ನು ಮುಗಿಸುವ ಬಗ್ಗೆ ಮಾತನಾಡುವ ಇಂತಹವರಿಗೆ ಇದು ತಪರಾಕಿಯಾಗಿದೆ. ಅಂದರೆ ಸಭಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬೇಕಾದಂತಹ ಅಪಮಾನವಾದ ಬಳಿಕ ಯಾವುದೇ ಸ್ವಾಭಿಮಾನಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು ಎನ್ನುವುದೂ ಅಷ್ಟೇ ಸತ್ಯ !