| ಕಿರೀಟ ಕಳಿದಿರುವ ಬಗ್ಗೆ ಎಣಿಕೆ ಸಮಿತಿ ವರದಿಯಲ್ಲಿ ದಾಖಲಾಗಿತ್ತು !
ದೇವಸ್ಥಾನದ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಕಿರೀಟ ಪತ್ತೆಯಾಗಿದೆ ಎಂದು ಚಿನ್ನದ ಎಣಿಕೆ ಸಮಿತಿ ಸದಸ್ಯ ಕದಂ ಇವರ ದಾವೆ ! |

ತುಳಜಾಪುರ (ಧಾರಾಶಿವ ಜಿಲ್ಲೆ) – ನಾಪತ್ತೆಯಾಗಿದ್ದ ತುಳಜಾಪುರ (ಜಿಲ್ಲೆ ಧಾರಾಶಿವ) ಶ್ರೀ ಭವಾನಿದೇವಿಯ ಚಿನ್ನದ ಕಿರೀಟ ಪತ್ತೆಯಾಗಿದೆ ಎಂದು ಚಿನ್ನದ ಎಣಿಕೆ ಸಮಿತಿ ಸದಸ್ಯ ಹಾಗೂ ಪೂಜಾರಿ ಮಂಡಲದ ಅಧ್ಯಕ್ಷ ಅಮರರಾಜೇ ಕದಂ ಹೇಳಿದ್ದಾರೆ. ಈ ಕಿರೀಟವು ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತದೆ. 826 ಗ್ರಾಂ ತೂಕದ ಚಿನ್ನದ ಕಿರೀಟ ಕಾಣೆಯಾಗಿದೆ ಎಂದು ಏಣಿಕೆ ಸಮಿತಿಯ ವರದಿಯಲ್ಲಿ ನೊಂದಾಯಿಸಿತ್ತು; ಆದರೆ ಈಗ ಅದೇ ಕಿರೀಟ ಸಿಕ್ಕಿದೆ ಎಂದು ಕದಂ ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2009 ರಿಂದ 2023 ರ ಅವಧಿಯಲ್ಲಿ ಶ್ರೀ ಭವಾನಿದೇವಿಗೆ ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ವಸ್ತುಗಳ ಎಣಿಕೆಯನ್ನು ಕೆಲವು ದಿನಗಳ ಹಿಂದೆ ದೇವಾಲಯ ಸಂಸ್ಥಾನದಿಂದ ಮಾಡಲಾಯಿತು. 27 ಆಭರಣಗಳ ಪೈಕಿ 4 ಆಭರಣಗಳು ನಾಪತ್ತೆಯಾಗಿರುವುದು ಪತ್ತೆಯಾಗಿತ್ತು. ಅದರಲ್ಲಿ ಮಂಗಳಸೂತ್ರ, 826 ಗ್ರಾಂ ತೂಕದ ಚಿನ್ನದ ಕಿರೀಟವೂ ಸೇರಿತ್ತು. ಈ ಕಳ್ಳತನವನ್ನು ಮರೆಮಾಡಲು ಮತ್ತೊಂದು ಕಿರೀಟವನ್ನು ಇಡಲಾಗಿದೆ ಎಂದು ವರದಿಯಾಗಿತ್ತು.
ಸಂಪಾದಕರ ನಿಲುವು* ಕಿರೀಟ ಕಳೆದಿದೆ ಎಂದು ಸುಳ್ಳು ವರದಿ ನೀಡಿದವರನ್ನು ಸರಕಾರ ಜೀವಾವಧಿ ಜೈಲಿಗೆ ಹಾಕಬೇಕು ! * ಸರಕಾರಿ ಸ್ವಾಮ್ಯದ ದೇವಸ್ಥಾನಗಳಲ್ಲಿ ಚಿನ್ನ ಬೆಳ್ಳಿಯ ಆಭರಣಗಳ ಕಳವು, ದೇವಸ್ಥಾನದ ಜಮೀನುಗಳ ‘ನಾಪತ್ತೆ’, ದೇವಾಲಯಗಳಲ್ಲಿ ಭ್ರಷ್ಟಾಚಾರ, ಅವರ ಆಸ್ತಿ ಲೂಟಿ ಇತ್ಯಾದಿಗಳೆಲ್ಲವೂ ದೇವಾಲಯಗಳ ಸರಕಾರೀಕರಣದ ಪರಿಣಾಮಗಳಾಗಿವೆ ! ಇದಕ್ಕಾಗಿ ದೇವಾಲಯಗಳು ಭಕ್ತರ ವಶದಲ್ಲಿರಬೇಕೆಂದು ಭಕ್ತರು ಒತ್ತಾಯಿಸುತ್ತಲೇ ಇರಬೇಕು ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ