
ಬೆಂಗಳೂರು – ಸೂರ್ಯನ ಕುರಿತು ಮಹತ್ವಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಭಾರತದಿಂದ ಕಳುಹಿಸಲಾಗಿದ್ದ, ‘ಆದಿತ್ಯ-ಎಲ್ 1’ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ. ಇದರ ಎರಡೂ ‘ಪೇಲೋಡ್’ಗಳು, ಅಂದರೆ ಉಪಕರಣಗಳು, ಸೂರ್ಯನ ಬಗ್ಗೆ ಸಮಾಧಾನಕಾರಕ ಮಾಹಿತಿಯನ್ನು ಕಳುಹಿಸುತ್ತಿವೆ.
1. ‘ಸೋಲಾರ್ ವಿಂಡ್ ಐಯಾನ್ ಸ್ಪೆಕ್ಟ್ರೋಮೀಟರ್’ (ಸ್ವಿಸ್) ಮತ್ತು ‘ಸುಪ್ರಾಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್’ (ಸ್ಟೆಪ್ಸ) ಎಂದು ಈ ಉಪಕರಣಗಳ ಹೆಸರುಗಳಾಗಿವೆ. ಈ ಉಪಕರಣಗಳು ‘ಸೌರ ಪವನ ಅಯಾನ’, ಹಾಗೆಯೇ ‘ಪ್ರೋಟಾನ’ ಮತ್ತು ‘ಆಲ್ಫಾ ಕಣ’ ಯಶಸ್ವಿಯಾಗಿ ಅಳೆದಿವೆ.
2. ಇಸ್ರೋ, ಈ ಮಾಹಿತಿಯ ಮೂಲಕ ನಮಗೆ ಸೌರ ಚಂಡಮಾರುತದ ಕುರಿತು ಸಾಕಷ್ಟು ಮಾಹಿತಿ ಸಿಕ್ಕಿದೆ. ಇದರಿಂದ ಸೌರ ಚಂಡಮಾರುತದ ಹಿಂದಿರುವ ಕಾರಣಗಳು ಮತ್ತು ಭೂಮಿಯ ಮೇಲೆ ಆಗುವ ಪರಿಣಾಮಗಳ ವಿಷಯದಲ್ಲಿ ನಮಗೆ ಸಾಕಷ್ಟು ಮಾಹಿತಿ ಸಿಗಲಿದೆ. ಈ ಮಾಧ್ಯಮಗಳಿಂದ ಸೌರವ್ಯೂಹದ ಹವಾಮಾನದ ವಿಷಯದಲ್ಲಿಯೂ ಬಹಳಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದೆ.
Aditya-L1 Mission:
The Solar Wind Ion Spectrometer (SWIS), the second instrument in the Aditya Solar wind Particle Experiment (ASPEX) payload is operational.
The histogram illustrates the energy variations in proton and alpha particle counts captured by SWIS over 2-days.… pic.twitter.com/I5BRBgeYY5
— ISRO (@isro) December 2, 2023
3. ಹಾಗೆ ನೋಡಿದರೆ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು 15 ಕೋಟಿ ಕಿ.ಮೀ ಆಗಿದ್ದು ಮತ್ತು ‘ಆದಿತ್ಯ ಎಲ್ 1’ ಉಪಗ್ರಹವು ಈ ದೂರದ ಶೇಕಡಾ 1 ರಷ್ಟನ್ನು ಮಾತ್ರ ಕ್ರಮಿಸಲಿದೆ. ಹೀಗಿದ್ದರೂ, ಸೂರ್ಯನ ಬಗ್ಗೆ ಭೂಮಿಯಿಂದ ಪಡೆಯಲಾಗದ ಮಾಹಿತಿ ಈ ಉಪಗ್ರಹದ ಮೂಲಕ ಲಭ್ಯವಾಗಲಿದೆ ಎಂದು ಇಸ್ರೋ ತಿಳಿಸಿದೆ. ಈ ಮಾಹಿತಿಯಿಂದ ಇತರ ನಕ್ಷತ್ರಗಳು, ಗೆಲಕ್ಸಿಗಳು ಮತ್ತು ಖಗೋಳಶಾಸ್ತ್ರದ ವಿವಿಧ ರಹಸ್ಯಗಳು ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು