ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದಿಂದ ಐ.ಎಸ್.ಐ.ನ ಸಹಚರರ ಬಂಧನ

ದೇಶ ವಿರೋಧಿ ಚಟುವಟಿಕೆಗಳಿಗೆ ಪಾಕಿಸ್ತಾನದಿಂದ ಹಣ ಪೂರೈಕೆ !

ಎಡದಿಂದ ರಿಯಾಜುದ್ದೀನ್ ಮತ್ತು ಅಮೃತಪಾಲ್ ಸಿಂಗ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಉಗ್ರ ನಿಗ್ರಹ ದಳವು ಐ.ಎಸ್‌.ಐ.ನ ಇಬ್ಬರು ಸಹಚರರನ್ನು ಬಂಧಿಸಿದೆ. ರಿಯಾಜುದ್ದೀನ್ ಮತ್ತು ಅಮೃತಪಾಲ್ ಸಿಂಗ್ ಅಲಿಯಾಸ್ ಅಮೃತ್ ಗಿಲ್ ಎಂದು ಗುರುತಿಸಲಾಗಿದೆ. ಈ ಇವರಿಬ್ಬರೂ ಭಾರತದ ಸೇನಾ ನೆಲೆಗಳು ಮತ್ತು ಇತರ ಪ್ರಮುಖ ಸಾರ್ವಜನಿಕ ಸ್ಥಳಗಳ ಮಾಹಿತಿಯನ್ನು ಐ.ಎಸ್‌.ಐ.ಗೆ ರವಾನಿಸುತ್ತಿದ್ದರು. ಭಾರತದಲ್ಲಿ ದೇಶವಿರೋಧಿ ಕೃತ್ಯ ನಡೆಸಲು ಇವರಿಬ್ಬರ ಬ್ಯಾಂಕ್ ಖಾತೆಗಳಿಗೆ ಹಣ ಕಳುಹಿಸಲಾಗಿತ್ತು. ಕಳೆದ ವರ್ಷ ರಿಯಾಜುದ್ದೀನ್ ಖಾತೆಯಲ್ಲಿ 70 ಲಕ್ಷ ರೂಪಾಯಿ ವ್ಯವಹಾರ ನಡೆದಿದೆ. ಈ ಪ್ರಕರಣದಲ್ಲಿ ಈ ಹಿಂದೆ ಇಜಹಾರುಲ್ ಹುಸೇನನನ್ನು ಬಿಹಾರದಿಂದ ಬಂಧಿಸಲಾಗಿತ್ತು.

ಸಂಪಾದಕರ ನಿಲುವು

*ಇಂತಹ ದೇಶದ್ರೋಹಿಗಳಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !