ಮಂತ್ರ-ತಂತ್ರ ಮಾಡುವ ಹೆಸರಿನಲ್ಲಿ ಹಿಂದುಗಳ ಮತಾಂತರ ಮಾಡುವ ಮೌಲ್ವಿ ಸರಫರಾಝನ ಬಂಧನ !

ಹಿಂದೂ ಕುಟುಂಬಗಳ ಕಷ್ಟಕರ ಜೀವನದ ದುರುಪಯೋಗಪಡಿಸಿ ಮತಾಂತರ !

ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿ ಸರಫರಾಝ ಎಂಬ ಮೌಲ್ವಿ ಮಂತ್ರ-ತಂತ್ರ ಮಾಡುವ ಹೆಸರಿನಲ್ಲಿ ಹಿಂದುಗಳ ಮತಾಂತರ ಮಾಡುತ್ತಿರುವುದು ಬೆಳಕಿಗೆ ಬಂದ ನಂತರ ಪೊಲೀಸರು ಅವನನ್ನು ಬಂಧಿಸಿದ್ದಾರೆ. ೨೦೧೭ ರಲ್ಲಿ ಅವನು ಓರ್ವ ಹಿಂದೂ ಮಹಿಳೆಯ ಕಷ್ಟಕರ ಜೀವನದ ದುರುಪಯೋಗಪಡಿಸಿಕೊಳ್ಳುತ್ತಾ ಆಕೆಗೆ ಹಿಂದೂ ಧರ್ಮ ತ್ಯಜಿಸಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸಿದ್ದನು. ಆ ಸಮಯದಲ್ಲಿ ಆಕೆಯ ಇಬ್ಬರೂ ಮಕ್ಕಳು ಅಪ್ರಾಪ್ತರಾಗಿದ್ದರು. ೧೮ ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸು ಆದ ನಂತರ ಸಂತ್ರಸ್ತ ಮಹಿಳೆಯ ಮಕ್ಕಳು ಪೊಲೀಸರಿಗೆ ದೂರು ನೀಡಿ, ಸಂಬಂಧಿತ ಮೌಲ್ವಿಯ ಮೇಲೆ ಮತಾಂತರದ ಆರೋಪ ಮಾಡಿದರು. ಆದ್ದರಿಂದ ಪೊಲೀಸರು ತಕ್ಷಣ ದೂರು ದಾಖಲಿಸಿಕೊಂಡು ಮೌಲ್ವಿಯನ್ನು ಬಂಧಿಸಿದ್ದಾರೆ. ದೂರು ನೀಡಿರುವ ಹುಡುಗನು, ನನ್ನ ತಾಯಿಯು ಇಸ್ಲಾಂ ಸ್ವೀಕರಿಸಿದ ನಂತರ ನಾವು ಕೂಡ ಇಸ್ಲಾಂ ಸ್ವೀಕರಿಸಬೇಕಾಯಿತು, ನಾವು ೪ ವರ್ಷ ಇಸ್ಲಾಂನ ಪದ್ಧತಿಗಳನ್ನು ಪಾಲಿಸಿದೆವು; ಆದರೆ ಈಗ ಮಾತ್ರ ನಾವು ಮತ್ತೆ ಹಿಂದೂ ಧರ್ಮಕ್ಕೆ ಪ್ರವೇಶ ಮಾಡಿದ್ದೇವೆ ಎಂದು ಹೇಳಿದ.

ಸಂಪಾದಕೀಯ ನಿಲುವು

ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ ಅವರ ಮೇಲೆ ಕೆಸರೆರಚುವ ಪ್ರಗತಿಪರರು ಈಗ ಇಂತಹ ಘಟನೆಯ ಬಗ್ಗೆ ಚಕಾರ ಶಬ್ದವು ತೆಗೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ಅವರಿಗೆ ಧರ್ಮಶಿಕ್ಷಣ ನೀಡಿ ಅವರಲ್ಲಿನ ಧರ್ಮಾಭಿಮಾನ ಹೆಚ್ಚಿಸುವುದು, ಇದೇ ಏಕೈಕ ಉಪಾಯವಾಗಿದೆ !