ಜಾಜಪುರ (ಓಡಿಸ್ಸಾ)ದ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಗೆ ಬಸ್ಕಿ ಹೊಡೆಯುವ ಶಿಕ್ಷೆಯಿಂದಾಗಿ ಸಾವು

ಜಾಜಪುರ (ಒಡಿಶಾ) – ಇಲ್ಲಿನ ಸೂರ್ಯ ನಾರಾಯಣ ನೋಡಲ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯ ರದ್ರ ನಾರಾಯಣ ಎಂಬ ಹುಡುಗನಿಗೆ ಶಿಕ್ಷೆಯೆಂದು ಬಸ್ಕಿ ಹೊಡೆಯಲು ಹೇಳಲಾಗಿತ್ತು. ಬಸ್ಕಿ ಹೊಡೆಯುತ್ತಾ ಮೂರ್ಛೆ ಹೋದನು. ಅವನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಮತ್ತು ನಂತರ ಕಟಕ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಬಾಲಕನು ಮರಣ ಹೊಂದಿದ್ದಾನೆಂದು ಎಂದು ವೈದ್ಯರು ತಿಳಿಸಿದರು. ಅವನು ತರಗತಿಯ ಹೊರಗೆ ಆಟವಾಡುತ್ತಿದ್ದ ಕಾರಣ ಅವನಿಗೆ ಈ ಶಿಕ್ಷೆಯನ್ನು ನೀಡಲಾಗಿತ್ತು. ಹುಡುಗನ ತಂದೆ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ; ಆದರೆ ರಸೂಲಪುರ ಸಹಾಯಕ ಸಮೂಹ ಶಿಕ್ಷಣಾಧಿಕಾರಿ ಪ್ರವಂಜನ್ ಪಾಟಿಯವರು ಶಾಲೆಗೆ ಭೇಟಿ ನೀಡಿ ಘಟನೆ ಕುರಿತು ವಿಚಾರಣೆ ನಡೆಸಿದ್ದಾರೆ.