Acharya Pramod Krishnam on Congress : ಕಾಂಗ್ರೆಸ್ ನ ಕೆಲವು ನಾಯಕರು ಶ್ರೀರಾಮ ಮಂದಿರ ಮತ್ತು ಶ್ರೀರಾಮನನ್ನು ದ್ವೇಷಿಸುತ್ತಾರೆ ! – ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ ಕೃಷ್ಣಂ

ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ ಕೃಷ್ಣಂ ಅವರಿಂದ ಕಪಾಳಮೋಕ್ಷ !

ನವ ದೆಹಲಿ – ರಾಮಮಂದಿರವನ್ನಷ್ಟೇ ಅಲ್ಲ, ಶ್ರೀರಾಮನನ್ನೂ ತಿರಸ್ಕರಿಸುವಂತಹ ಅನೇಕ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ, ಹಿಂದೂ ಧರ್ಮಗುರುಗಳ ಅವಮಾನ ಮಾಡುತ್ತಾರೆ. ಎಂದು ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ ಕೃಷ್ಣಂ ಕಪಾಳಮೋಕ್ಷ ಮಾಡಿದ್ದಾರೆ.

ಆಚಾರ್ಯ ಕೃಷ್ಣಂ ಮಾತು ಮುಂದುವರೆಸುತ್ತಾ, ರಾಮನನ್ನು ದ್ವೇಷಿಸುವವರು ಹಿಂದೂಗಳಾಗಲು ಸಾಧ್ಯವಿಲ್ಲ. ಶ್ರೀರಾಮಮಂದಿರಕ್ಕೆ ಸಾಕಷ್ಟು ವಿರೋಧವಾಗಿತ್ತು ಮತ್ತು ಈ ವಿರೋಧವನ್ನು ನಾವೆಲ್ಲರೂ ನೋಡಿದ್ದೇವೆ. ಈ ಮೂಲಕ ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆ ತಂದರು. ಈ ಮೂಲಕ ಯಾರಿಗೆ ಶ್ರೀರಾಮನಲ್ಲಿ ಶ್ರದ್ಧೆ ಇದೆ ಮತ್ತು ಶ್ರೀರಾಮನನ್ನು ಯಾರು ದ್ವೇಷಿಸುತ್ತಾರೆ ಎಂದು ನಮಗೆ ಗೊತ್ತಾಗಿದೆ. ನಾನು ಪಕ್ಷದ ಭಾಗವಾಗಿದ್ದರೂ ನನಗೆ ಸತ್ಯವನ್ನು ಸತ್ಯ ಎಂದು ಹೇಳಲು ಹಾಗೂ ಸುಳ್ಳನ್ನು ಸುಳ್ಳು ಎಂದು ಹೇಳಲು ಬರುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿ ದ್ವೇಷಿಸುವ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಏಕೆ ತೆಗೆದುಹಾಕುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ನಾಯಕರನ್ನು ಇಟ್ಟುಕೊಂಡು ಕಾಂಗ್ರೆಸ್ ಹಿಂದೂಗಳನ್ನು ಅವಮಾನಿಸುತ್ತಿದೆ, ಇದನ್ನು ಹಿಂದೂಗಳು ಗಮನದಲ್ಲಿಡಿ !