ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವಲ್ಲಿನ ಅಡಚಣೆಗಳು ಮತ್ತು ಅವುಗಳ ಪರಿಹಾರೋಪಾಯಗಳು !

(ಸದ್ಗುರು) ಸತ್ಯವಾನ ಕದಮ

‘ಈಶ್ವರಪ್ರಾಪ್ತಿ’ಯೇ ಮನುಷ್ಯ ಜನ್ಮದ ಮೂಲಭೂತ ಧ್ಯೇಯವಾಗಿದೆ. ಅದಕ್ಕಾಗಿ ಸಾಧಕರು ಇದೇ ಜನ್ಮದಲ್ಲಿ ತಳಮಳದಿಂದ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ಧ್ಯೇಯವನ್ನು ಸಾಧಿಸಲು ಶ್ರೀ ಗುರುಗಳ ಕೃಪೆ ಮತ್ತು ಮಾರ್ಗದರ್ಶನವು ಅತ್ಯಗತ್ಯವಾಗಿದೆ. ಶ್ರೀ ಗುರುಗಳಿಂದಲೇ ನಮಗೆ ಜೀವನದ ಬಗ್ಗೆ ಯೋಗ್ಯ ದೃಷ್ಟಿಕೋನ ಹಾಗೂ ಸ್ವಬೋಧವು ಸಿಗುತ್ತದೆ. ಈಗ ಆಪತ್ಕಾಲ ಪ್ರಾರಂಭವಾಗಿದೆ. ಅಪತ್ಕಾಲದಿಂದ ಪಾರಾಗಲು ಸಾಧನೆಯೇ ಆವಶ್ಯಕವಾಗಿದೆ.

ಆ ದೃಷ್ಟಿಯಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯಲ್ಲಿನ ಅಡಚಣೆಗಳು ಮತ್ತು ಅವುಗಳ ಪರಿಹಾರೋಪಾಯಗಳ ಬಗ್ಗೆ ಹಿಂದಿನ ವಾರದ ಸಂಚಿಕೆಯಲ್ಲಿ ಕೆಲವು ಅಂಶಗಳನ್ನು ನೋಡಿದೆವು ಈ ವಾರದ ಅದರ ಮುಂದಿನ ಭಾಗವನ್ನು ನೋಡೋಣ.

೭. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ, ಹಾಗೆಯೇ ಗುಣಸಂವರ್ಧನೆ ಪ್ರಕ್ರಿಯೆಯನ್ನು ಯೋಗ್ಯ ರೀತಿಯಲ್ಲಿ ಮಾಡದಿರುವುದು ಸದ್ಯದ ಕಾಲದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಗಾಂಭೀರ್ಯದಿಂದ ನಡೆಸುವುದು ಆವಶ್ಯಕವಾಗಿದೆ.

ಅ. ಈ ಪ್ರಕ್ರಿಯೆಯಲ್ಲಿ ‘ತಮ್ಮ ತಪ್ಪುಗಳನ್ನು ಹುಡುಕುವುದು, ಅವುಗಳನ್ನು ತಖ್ತೆಯಲ್ಲಿ ಬರೆಯುವುದು, ತಪ್ಪುಗಳನ್ನು ಹೇಳುವುದು, ಸ್ವಯಂಸೂಚನೆಯನ್ನು ಕೊಡುವುದು, ಕ್ಷಮಾ ಯಾಚನೆ ಮಾಡುವುದು, ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು’, ಈ ಅಂಶಗಳು ಒಳಗೊಂಡಿವೆ.

ಆ. ನಮ್ಮ ಪ್ರತಿಯೊಂದು ತಪ್ಪು ನಮ್ಮನ್ನು ಈಶ್ವರನಿಂದ ದೂರ ಒಯ್ಯುತ್ತದೆ. ಸಾಧಕರು ಸತತವಾಗಿ ‘ನಾನು ನನ್ನ ತಪ್ಪುಗಳನ್ನು ಹುಡುಕಬೇಕು’, ಎಂಬ ವಿಚಾರ ಮಾಡಬೇಕು. ಸಾಧಕರು ಈ ಪ್ರಕ್ರಿಯೆಯ ಮಹತ್ವವನ್ನು ಸತತವಾಗಿ ಮನಸ್ಸಿನಲ್ಲಿ ಬಿಂಬಿಸಬೇಕು.

ಇ. ಸಾಧಕರು ಸಾಧಕರ ಸಭೆಯಲ್ಲಿ ತಮ್ಮ ತಪ್ಪುಗಳನ್ನು ಹೇಳ ಬೇಕು. ತಪ್ಪು ಹೇಳುವುದರಿಂದ ತಪ್ಪುಗಳ ಬಗ್ಗೆ ಗಾಂಭೀರ್ಯ, ಹಾಗೂ ಅದರಿಂದ ನಮ್ಮಲ್ಲಿ ಅನೇಕ ಪಟ್ಟು ಖೇದವುಂಟಾಗಿ ಅಹಂಭಾವವು ಕಡಿಮೆಯಾಗುತ್ತದೆ ಮತ್ತು ನಮ್ಮ ತಪ್ಪುಗಳಿಂದ ಇತರ ಸಾಧಕರಿಗೆ ಕಲಿಯಲು ಸಿಗುತ್ತದೆ. ಹಾಗೆಯೇ ತಪ್ಪು ಹೇಳಿದ್ದರಿಂದ ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಾಗುತ್ತದೆ.

ಈ. ಸಾಧಕರು ಈ ಪ್ರಕ್ರಿಯೆಯಲ್ಲಿ ಸ್ವಯಂಸೂಚನೆಗಳನ್ನು ಕೊಡುತ್ತಾರೆ. ಸಾಧಕರು ಸ್ವಯಂಸೂಚನೆಯ ಜೊತೆಗೆ ಕೃತಿಯ ಸ್ತರದಲ್ಲಿ ಪ್ರಯತ್ನಿಸುವುದೂ ಮಹತ್ವದ್ದಾಗಿದೆ.

ಉ. ಸಾಧಕರು ಸೇವೆಯ ಮಾಧ್ಯಮದಿಂದ, ಹಾಗೆಯೇ ಸಹ ಸಾಧಕರೊಂದಿಗೆ ಸಮನ್ವಯ ಮಾಡುವಾಗ ‘ತಮ್ಮ ನಡೆ- ನುಡಿಗಳಿಂದ ಎಲ್ಲಿಯಾದರೂ ಅಹಂನ ಅರಿವಾಗುತ್ತದೆಯೇ ?’, ಎಂಬುದರ ಚಿಂತನೆಯನ್ನು ಮಾಡಬೇಕು.

ಊ. ಸಾಧಕರಿಗೆ ಮನಸ್ಸಿನ ಸಣ್ಣ-ಸಣ್ಣ ವಿಚಾರಗಳ ನಿರೀಕ್ಷಣೆ ಮಾಡಲು ತಿಳಿದರೆÉ ತಮ್ಮ ಸ್ವಭಾವದೋಷ ಮತ್ತು ಅಹಂನ ತೀವ್ರತೆಯು ಗಮನಕ್ಕೆ ಬರುತ್ತದೆ.

ಎ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನದ ಪ್ರಕ್ರಿಯೆಯು ಗುರುದೇವರಿಗೆ ಅಪೇಕ್ಷಿತವಿದ್ದಂತೆ ಆಗಲು ಸಾಧಕರು ಸತತವಾಗಿ ಅಂತರ್ಮುಖವಾಗಿರಬೇಕು. ‘ನಾನು ಸಾಧನೆಯ ದೃಷ್ಟಿಯಿಂದ ಏನು ಮಾಡಬೇಕು ? ಎಂಬ ವಿಚಾರವೆಂದರೆ, ‘ಅಂತರ್ಮುಖತೆ’ ಮತ್ತು ‘ಇತರರು ಏನು ಮಾಡಬೇಕು ?’, ಎಂದು ಸತತ ಗಮನಿಸುವುದೆಂದರೆ ಬಹಿರ್ಮುಖತೆಯಾಗಿದೆ.

೮. ‘ಅಪೇಕ್ಷೆ’ ಈ ಅಹಂಅನ್ನು ದೂರಗೊಳಿಸದಿರುವುದು ನಮ್ಮ ಅಪೇಕ್ಷೆಯಂತೆ ಅಥವಾ ಮನಸ್ಸಿನಂತೆ ಆಗದಿದ್ದರೆ, ತಕ್ಷಣ ನಮ್ಮ ಮನಸ್ಸಿನಲ್ಲಿ ಪ್ರತಿಕ್ರಿಯೆಗಳು ಬರುತ್ತವೆ. ಆದ್ದರಿಂದ ನಮ್ಮ ಮನಸ್ಸಿನ ಶಾಂತಿ ಮತ್ತು ಸ್ಥಿರತೆ ಹಾಳಾಗುತ್ತದೆ.

ಅ. ‘ಪ್ರತಿಕ್ರಿಯೆ’, ಅಂದರೆ ದುರ್ಬಲ ಮನಸ್ಸಿನ ಲಕ್ಷಣವಾಗಿದೆ.

ಆ. ದೇವರು ಪ್ರೀತಿಸ್ವರೂಪನಾಗಿದ್ದಾನೆ. ನಾವು ದೈವತ್ವದ ದಿಶೆಯಲ್ಲಿ ಹೋಗಲು ಪ್ರೇಮಭಾವ ಮತ್ತು ಪ್ರೀತಿ ಈ ಗುಣ ಗಳನ್ನು ಬೆಳೆಸಬೇಕು. ಸಾಧಕರೊಂದಿಗೆ ಆತ್ಮೀಯತೆ ಬೆಳೆಸಬೇಕು.

ಇ. ‘ನಿರಪೇಕ್ಷತೆ’ ಇದೊಂದು ಸ್ಥಿತಿಯಾಗಿದೆ. ‘ತಿಳುವಳಿಕೆ ಮತ್ತು ಪರಿಸ್ಥಿತಿಯನ್ನು ಸ್ವೀಕರಿಸುವುದು’ ಈ ಗುಣಗಳು ಹೆಚ್ಚಾದರೆ, ನಿರಪೇಕ್ಷತೆಯಿಂದ ವರ್ತಿಸಲು ಸಾಧ್ಯವಾಗುತ್ತದೆ.

೯. ಪರಿಸ್ಥಿತಿ ಸ್ವೀಕರಿಸದಿರುವುದು

ಅ. ಸಾಧಕರು ಕೌಟುಂಬಿಕ ಮತ್ತು ಆರ್ಥಿಕ ಅಚಡಣೆ ಹಾಗೆಯೇ ಶಾರೀರಿಕ ಕಾಯಿಲೆಗಳಲ್ಲಿ ಸಿಲುಕುತ್ತಾರೆ. ‘ಸಾಧಕರು ಅದಕ್ಕೆ ಪರಿಹಾರೋಪಾಯಗಳನ್ನು ಮಾಡಿ ಸಾಧನೆಯ ಮೇಲೆ ಗಮನವಿರಿಸಿ ಈಶ್ವರಪ್ರಾಪ್ತಿ ಹೇಗೆ ಮಾಡಿಕೊಳ್ಳಬಹುದು ?’, ಎಂದು ನೋಡುವುದಕ್ಕೆ ‘ಈಶ್ವರನಲ್ಲಿ ಸಿಲುಕುವುದು, ಅಂದರೆ ಈಶ್ವರನ ಅನುಸಂಧಾನದಲ್ಲಿರುವುದು’, ಎನ್ನಬಹುದು.

ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ‘ಪರಿಸ್ಥಿತಿ ಸ್ವೀಕರಿಸುವುದು’ ಸರ್ವಶ್ರೇಷ್ಠ ಸಾಧನೆಯಾಗಿದೆ !’ ಎಂದಿದ್ದಾರೆ.

ಇ. ಪ್ರತಿಯೊಂದು ಪ್ರಸಂಗವು ಈಶ್ವರೇಚ್ಛೆಯಿಂದ ಘಟಿಸುತ್ತಿರುವು ದರಿಂದ ಅದನ್ನು ಆನಂದದಿಂದ ಸ್ವೀಕರಿಸುವುದು ಆವಶ್ಯಕ ವಾಗಿದೆ. ‘ಅದರಿಂದ ಪ್ರಾರಬ್ಧ ಕಡಿಮೆಯಾಗುತ್ತಿದೆ’, ಎಂದು ಸಾಧಕರು ದೃಷ್ಟಿಕೋನವನ್ನಿಡಬೇಕು.

೧೦. ಕೌಟುಂಬಿಕ, ಹಾಗೆಯೇ ಮಾಯೆಯ ವಿಚಾರಗಳ ಪ್ರಮಾಣ ಹೆಚ್ಚಾಗುವುದು

ಅ. ಅನೇಕ ಸಾಧಕರ ಮನಸ್ಸಿನಲ್ಲಿ ಸದ್ಯ ಮಾಯೆಯ ವಿಚಾರಗಳು ಬರುತ್ತಿವೆ. ಕೆಲವರು ಸಂಸಾರದ ಚಿಂತೆಯಿಂದ, ಕೆಲವರು ‘ವ್ಯವಹಾರಕ್ಕೆ ಹೆಚ್ಚು ಗಮನ ಕೊಡಬೇಕು’, ಎಂಬ ವಿಚಾರದಿಂದ, ಕೆಲವರು ಕೆಟ್ಟ ಶಕ್ತಿಗಳ ತೊಂದರೆಯಿಂದ, ಕೆಲವರು ಸ್ವಭಾವದೋಷಗಳಿಂದ ಮಾಯೆಯತ್ತ ಬಾಗುತ್ತಿರುವುದು ಗಮನಕ್ಕೆ ಬರುತ್ತಿದೆ. ಸಾಧಕರು ಶ್ರೀ ಗುರುಚರಣಗಳಲ್ಲಿ ದೃಢ ಶ್ರದ್ಧೆ ಯನ್ನಿಟ್ಟು ಈ ವಿಚಾರಗಳನ್ನು ಜಯಿಸಬೇಕು.

ಆ. ಮಾಯೆಯ ವಿಚಾರಗಳು ಮಾಯಾವಿಯೇ ಆಗಿದ್ದು ಅದರಿಂದ ನಮಗೆ ನಿರಂತರ ಆನಂದ ಸಿಗಲಾರದು. ‘ಸಾಧನೆ ಯಲ್ಲಿ ಸ್ಥಿರವಾಗಿರುವುದು’, ಈ ಕಾಲದಲ್ಲಿ ಅತ್ಯಂತ ಅವಶ್ಯಕವಾಗಿದೆ.

ಇ. ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಜವಾಬ್ದಾರ ಸಾಧಕ ರೊಂದಿಗೆ ಅಥವಾ ಸಂತರೊಂದಿಗೆ ಮನಃಪೂರ್ವಕವಾಗಿ ಹೇಳುವಾಗ ಸಾಧಕರಲ್ಲಿ ಕೇವಲ ಹೇಳುವ ದೃಷ್ಟಿಕೋನ ಮಾತ್ರ ವಲ್ಲ ಇಂತಹ ವಿಚಾರಗಳನ್ನು ಪರಿಹರಿಸಲು ಸಾಧನೆಯ ಸ್ತರ ದಲ್ಲಿ ವಿಚಾರ ಮಾಡಿ ‘ಹೇಗೆ ಪ್ರಯತ್ನಿಸಬೇಕು ?’, ಎಂಬುದನ್ನು ತಿಳಿದುಕೊಳ್ಳುವ ದೃಷ್ಟಿಕೋನವಿರಬೇಕು.

ಈ. ‘ಈಶ್ವರಪ್ರಾಪ್ತಿಗಾಗಿಯೇ ಸಾಧಕರ ಜನ್ಮವಾಗಿದೆ. ಮಾಯೆ ಯಲ್ಲಿ ಮುಳುಗಿ ಜೀವನವನ್ನು ವ್ಯರ್ಥಗೊಳಿಸಲಿಕ್ಕಿಲ್ಲ’, ಎಂದು ಗಮನದಲ್ಲಿಟ್ಟು ಈಶ್ವರಪ್ರಾಪ್ತಿಗಾಗಿ ನಿರಂತರ ಶ್ರಮಿಸೋಣ.

೧೧. ತನ್ನನ್ನು ಬದಲಾಯಿಸಲು ಸಂಘರ್ಷದ ಸಿದ್ಧತೆ ಕಡಿಮೆ

ಅ. ತನ್ನನ್ನು ಬದಲಾಯಿಸಲು ‘ಸಂಘರ್ಷ’ವು ಸಾಧನೆಯ ಒಂದು ಮಹತ್ವದ ಅಂಗವಾಗಿದೆ.

ಆ. ನಮ್ಮ ಕ್ರಿಯಮಾಣದ ಮೇಲೆ, ಅಂದರೆ ಪ್ರಯತ್ನಗಳ ಮೇಲೆ, ಹಾಗೆಯೇ ದೇವರ ಬಗ್ಗೆ ನಮಗಿರುವ ಶರಣಾಗತಿಯ ಭಾವದ ಮೇಲೆ ಪರಿಸ್ಥಿತಿ ಅನುಕೂಲವೋ, ಪ್ರತಿಕೂಲವೆಂದು ನಿರ್ಧರಿತವಾಗುತ್ತದೆ. ಆದ್ದರಿಂದ ಸಾಧಕರು ‘ತಮ್ಮ ಕ್ರಿಯ ಮಾಣವು ಯೋಗ್ಯವಾಗಿರಬೇಕು, ಸಾಧನೆಗೆ ಅನುಕೂಲ ವಾಗಿರಬೇಕೆಂದು’, ಪ್ರಯತ್ನಿಸಬೇಕು.

ಇ. ನಮಗೆ ಏನು ಬರುತ್ತದೆಯೋ, ಅದನ್ನು ಮಾಡುವಾಗ ಮನಸ್ಸಿನ ಸಂಘರ್ಷವಾಗುವುದಿಲ್ಲ; ಆದರೆ ‘ಏನು ಬರುವುದಿ ಲ್ಲವೋ, ಅದನ್ನು ಮಾಡಲು ಪ್ರಯತ್ನಿಸುವುದು’, ನಿಜವಾದ ಸಾಧನೆಯಾಗಿದೆ; ಏಕೆಂದರೆ ಇದರಲ್ಲಿ ಮನಸ್ಸಿನ ಸಂಘರ್ಷವಾಗಿ ಆ ಸಂಘರ್ಷದಿಂದ ಸಾಧಕನ ಮನಸ್ಸು ರೂಪುಗೊಂಡು, ಅವನ ಮನೋಲಯವಾಗಿ ಸಾಧನೆಯಲ್ಲಿ ಪ್ರಗತಿಯಾಗುತ್ತದೆ.

ಈ. ಸದ್ಯದ ಕಾಲವು ಪ್ರತಿಕೂಲವಾಗಿದೆ. ಅನುಕೂಲಕ್ಕಿಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾಧನೆ ಕಠಿಣವಾಗಿದ್ದರೂ, ಈ ಕಾಲ ದಲ್ಲಿ ಸಾಧನೆ ಮಾಡಿದರೆ ಹೆಚ್ಚು ಮತ್ತು ಶೀಘ್ರ ಫಲ ಸಿಗುತ್ತದೆ.

ಉ. ‘ಸಂಘರ್ಷ ಮಾಡದೇ ನಮಗೆ ಏನೂ ಸಿಗುವುದಿಲ್ಲ’, ಈ ಸತ್ಯವನ್ನು ನಾವು ವ್ಯಾವಹಾರಿಕ ಜೀವನದಲ್ಲಿ ಯಾವಾಗಲು ಅನುಭವಿಸುತ್ತಲೇ ಇರುತ್ತೇವೆ. ಇದರಿಂದ ‘ಈಶ್ವರಪ್ರಾಪ್ತಿಗಾಗಿ ನಾವು ಎಷ್ಟು ಪ್ರಮಾಣದಲ್ಲಿ ಸಂಘರ್ಷ ಮಾಡುವುದು ಆವಶ್ಯಕವಾಗಿದೆ’, ಎಂಬುದನ್ನು ಕಲ್ಪಿಸಬಹುದು.

೧೨. ಸೇವೆ ಮತ್ತು ಸಾಧನೆಯ ವರದಿಯನ್ನು ಮನಃಪೂರ್ವಕವಾಗಿ ಕೊಡದಿರುವುದು

ಅ. ತಮ್ಮ ಮನಸ್ಸಿನ ವಿಚಾರಗಳನ್ನು ಜವಾಬ್ದಾರ ಸಾಧಕ ಅಥವಾ ಸಂತರಿಗೆ ಮನಃಪೂರ್ವಕವಾಗಿ ಹೇಳುವುದರಿಂದ ಸಾಧಕರಿಗೆ ಸಾಧನೆಯ ದಿಶೆ ಸಿಗುತ್ತದೆ ಮತ್ತು ಸಾಧಕರು ಅದಕ್ಕನುಸಾರ ಪ್ರಯತ್ನಿಸಿದರೆ, ಅದರಿಂದ ಅವರ ಸಾಧನೆಯಾಗುತ್ತದೆ.

ಆ. ಸಾಧಕರು ಆಧ್ಯಾತ್ಮಿಕ ದೃಷ್ಟಿಕೋನವನ್ನು ಒಳ್ಳೆಯ ರೀತಿಯಲ್ಲಿ ಕೊಡಬಲ್ಲ ಮತ್ತು ಸಾಧನೆಯಲ್ಲಿ ಸಹಾಯ ಮಾಡಬಲ್ಲ ಜವಾಬ್ದಾರ ಸಾಧಕರೊಂದಿಗೆ ಮನಃಪೂರ್ವಕವಾಗಿ ಮತ್ತು ಕಲಿಯುವ ಸ್ಥಿತಿಯಲ್ಲಿದ್ದು ಮಾತನಾಡಬೇಕು.

ಇ. ಮನಮುಕ್ತವಾಗಿ ಮಾತನಾಡುವುದು, ಅಂದರೆ ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಇದ್ದಂತೆಯೇ ಏನು ಮುಚ್ಚಿಡದೇ ಹೇಳುವುದು, ಈ ರೀತಿ ನಮ್ಮ ಆತ್ಮನಿವೇದನೆಯಿರಬೇಕು.

ಈ. ಸಾಧಕರು ತಮ್ಮ ಸಾಧನೆಯ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು. ಸೇವೆಯಿಂದ ಸಾಧನೆಯಾಗಲು ಸಾಧಕರು ಜವಾಬ್ದಾರ ಸಾಧಕರ ಮತ್ತು ಧರ್ಮಪ್ರಚಾರಕ ಸಂತರ ಮಾರ್ಗದರ್ಶನವನ್ನು ಪಡೆಯುವುದು, ಅವರಿಗೆ ಸಮಯ ಸಮಯಕ್ಕೆ ಸಾಧನೆಯ ವರದಿಯನ್ನು ಕೊಡುವುದು, ಈ ರೀತಿ ಪ್ರಯತ್ನಿಸಬೇಕು. ಸಾಧಕರಲ್ಲಿ ‘ಜವಾಬ್ದಾರ ಸಾಧಕರ ಮತ್ತು ಸಂತರ ಮಾಧ್ಯಮದಿಂದ ಗುರುದೇವರೇ ನಮಗೆ ಹೇಳುತ್ತಿದ್ದಾರೆ’, ಎಂಬ ಶ್ರದ್ಧೆಯಿರಬೇಕು.’

– (ಸದ್ಗುರು) ಸತ್ಯವಾನ ಕದಮ, ಸಿಂಧುದುರ್ಗ (೧೨.೭.೨೦೨೩) (ಮುಕ್ತಾಯ)