|

ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ವೆಸ್ಟ ಬ್ಯಾಂಕ್ ನ ಜೆನಿನ್ ಪ್ರದೇಶದ ಅಲ್-ಅನ್ಸಾರ್ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿದೆಯೆಂದು ಇಸ್ರೇಲ್ ರಕ್ಷಣಾ ಪಡೆ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ. ಇದರಲ್ಲಿ ಅವರು, ಅವರ ಗುಪ್ತಚರ ಇಲಾಖೆಯು, ಹಮಾಸ್ ಸೈನಿಕರು ಮಸೀದಿಯನ್ನು ಕಮಾಂಡ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿತ್ತು. ಇಲ್ಲಿಂದಲೇ ಅವರು ದಾಳಿಗೆ ಯೋಜನೆ ರೂಪಿಸುತ್ತಿದ್ದರು.
ಇಸ್ರೇಲ್ ಕೂಡ ಒಂದು ದಿನ ಮುಂಚಿತವಾಗಿ ವೆಸ್ಟ ಬಂಕ್ ನಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು. ಇಸ್ರೇಲಿ ಪಡೆಗಳು ಅಕ್ಟೋಬರ್ 21 ರ ತಡರಾತ್ರಿ ವೆಸ್ಟ ಬ್ಯಾಂಕ್ ಮೇಲೆ ದಾಳಿ ನಡೆಸಿತು. ಯುದ್ಧ ಪ್ರಾರಂಭವಾದಾಗಿನಿಂದ, ಇಲ್ಲಿಯವರೆಗೆ 670 ಪ್ಯಾಲೆಸ್ಟೀನಿಯನ್ನರನ್ನು ವಿವಿಧ ಪ್ರದೇಶಗಳಲ್ಲಿ ಬಂಧಿಸಲಾಗಿದೆ. ಇವರಲ್ಲಿ 450 ಪ್ಯಾಲೆಸ್ತೀನಿಯನ್ನರು ಹಮಾಸ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಭಾರತ ಗಾಝಾಕ್ಕೆ ಸಹಾಯ ಸಾಮಗ್ರಿಗಳನ್ನು ಕಳುಹಿಸಿದೆ !
ನವ ದೆಹಲಿ – ಭಾರತವು ಪ್ಯಾಲೆಸ್ತೀನ್ಗೆ ಸುಮಾರು 6 ಸಾವಿರ 500 ಕೆ.ಜಿ. ವೈದ್ಯಕೀಯ ನೆರವು ಮತ್ತು 32 ಸಾವಿರ ಕೆಜಿ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿದೆ. ಈ ಸಾಮಗ್ರಿಗಳ ಪೆಟ್ಟಿಗೆಗಳ ಮೇಲೆ ’ಇದು ಭಾರತದ ಜನರು ಪ್ಯಾಲೆಸ್ತೀನ್ಗಳಿಗೆ ನೀಡಿದ ಉಡುಗೊರೆ’ ಎಂದು ಬರೆಯಲಾಗಿದೆ. ಈ ಸಾಮಗ್ರಿಗಳನ್ನು ಈಜಿಪ್ಟ್ನ ರಫಾ ಗಡಿಯ ಮೂಲಕ ಗಾಝಾಕ್ಕೆ ಸಾಗಿಸಲಾಗುವುದು. ಇದರಲ್ಲಿ ಅನೇಕ ಅಗತ್ಯ ಔಷಧಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ಟೆಂಟ್ಗಳು, ಮಲಗುವ ಚೀಲಗಳು, ನೀರು ಶುದ್ಧೀಕರಣ ಮಾತ್ರೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿದೆ.
ಸಂಪಾದಕೀಯ ನಿಲುವುಇಸ್ರೇಲ್ ನೇರವಾಗಿ ಭಯೋತ್ಪಾದಕರನ್ನು ಕೊಲ್ಲಲು ಮಸೀದಿಯ ಮೇಲೆ ದಾಳಿ ನಡೆಸಿತು. ಭಾರತವು ಮಸೀದಿಗಳಲ್ಲಿ ವಾಸಿಸುವ, ಭಯೋತ್ಪಾದಕ ಕೃತ್ಯಗಳನ್ನು ನಡೆಸುವವರ ವಿರುದ್ಧ ಇಂತಹ ಕ್ರಮವನ್ನು ತೆಗೆದುಕೊಂಡರೆ, ಭಾರತದ ತಥಾಕಥಿತ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ)ಪರರು ಅದನ್ನು ಒಪ್ಪಿಕೊಳ್ಳುವರೇ ? |
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ