Rajasthan Congress : ಮಗನಿಗೆ ಕೆಲಸ ಕೇಳಲು ಹೋದ ವೃದ್ಧನ ಪೇಟಕ್ಕೆ ಒದ್ದ ಕಾಂಗ್ರೆಸ್ ಶಾಸಕ !

ವೃದ್ಧನಿಗೆ ಅವಮಾನ !

ಉದಯಪುರ (ರಾಜಸ್ಥಾನ) – ಚಿತ್ತೋಡಗಢ ಜಿಲ್ಲೆಯ ಕಾಂಗ್ರೆಸ್ ಮುಖಂಡ ಮತ್ತು ಶಾಸಕ ರಾಜೇಂದ್ರ ಸಿಂಗ್ ಬಿಧೂಡಿ ಅವರ ಒಂದು ವೀಡಿಯೊ ಪ್ರಸಾರವಾಗಿದೆ. ಅದರಲ್ಲಿ ಒಬ್ಬ ಮುದುಕ ತನ್ನ ಮಗನಿಗೆ ಕೆಲಸ ಕೊಡಿಸುವಂತೆ ಬಿಧೂಡಿಯವರ ಪಾದದ ಮೇಲೆ ತಲೆಯ ಮೇಲಿನ ಪೇಟವಿಟ್ಟು ಬೇಡಿಕೊಳ್ಳುತ್ತಿದ್ದಾನೆ; ಆದರೆ ಬಿಧೂಡಿ ಈ ಮುದುಕನ ಪೇಟವನ್ನು ಒದೆಯುವ ಮೂಲಕ ಕೂಗುತ್ತಿರುವುದು ಕಂಡುಬರುತ್ತದೆ. ಈ ವೀಡಿಯೋ 2021ರದ್ದು ಎಂದು ಹೇಳಲಾಗಿದೆ. ಈ ವಿಡಿಯೋ ಬಗ್ಗೆ ಶಾಸಕ ಬಿಧೂಡಿ ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಈ ಕುರಿತು ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೈರುಲಾಲ್ ಚೌಧರಿ, ‘ಈ ವಿಡಿಯೋ ನಿಜವಾಗಿದ್ದರೆ ಈ ಘಟನೆ ಸರಿಯಲ್ಲ. ಆದರೂ ಬಿಧೂಡಿ ಒಬ್ಬ ಜವಾಬ್ದಾರಿಯುತ ಶಾಸಕರಾಗಿದ್ದಾರೆ. ಹಾಗಾಗಿ ಈ ವೀಡಿಯೋ ಎಡಿಟ್ ಮಾಡಿರಬಹುದು’ ಎಂದು ಹೇಳಿದರು. ಇನ್ನೊಂದೆಡೆ ಭಾಜಪ ಸಂಸದ ಸಿ.ಪಿ. ಜೋಶಿಯವರು ಮಾತನಾಡಿ ಬಿಧೂಡಿ ಈ ರೀತಿ ವರ್ತಿಸುತ್ತಿರುವುದು ಇದೇ ಮೊದಲಲ್ಲ. ಅಂತಹವರಿಗೆ ಖಂಡಿತವಾಗಿಯೂ ಜನತೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಕಾಂಗ್ರೆಸ್‌ಗೆ ರಾಜಸ್ಥಾನದ ಜನತೆ ಈಗಿನ ವಿಧಾನಸಭಾ ಚುನಾವಣೆಯಲ್ಲಿ ಖಂಡಿತ ತಕ್ಕ ಪಾಠ ಕಲಿಸುತ್ತಾರೆ ಎಂದು ಯಾರಿಗಾದರೂ ಅನಿಸಬಹುದು !