ಕರ್ಣಾವತಿ (ಗುಜರಾತ್)ಯಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಭಜರಂಗದಳದ ಕಾರ್ಯಕರ್ತರ ಬಸ್ಸನ್ನು ನಿಲ್ಲಿಸಿದ ಮತಾಂಧರು !

ಕರ್ಣಾವತಿ (ಗುಜರಾತ್) – ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಚಂದೋಲಾ ಪ್ರದೇಶದಿಂದ ಹಾದು ಹೋಗುತ್ತಿದ್ದ ಬಜರಂಗದಳದ ಕಾರ್ಯಕರ್ತರ ಬಸ್ಸನ್ನು ಮತಾಂಧ ಮುಸಲ್ಮಾನರು ತಡೆದರು. ಈ ಕಾರ್ಯಕರ್ತರು `ಜೈ ಶ್ರೀ ರಾಮ’ ಎಂದು ಘೋಷಣೆ ಕೂಗುತ್ತ ಹೋಗುತ್ತಿದ್ದರಿಂದ ಮತಾಂಧರು ಬಸ್ಸನ್ನು ತಡೆದು, ಘೋಷಣೆ ನಿಲ್ಲಿಸುವಂತೆ ಬೆದರಿಕೆ ಹಾಕಿದರು. ಈ ಸಂದರ್ಭದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ಪ್ರಕರಣದಲ್ಲಿ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.
ಶೌರ್ಯ ಜಾಗರಣ ಯಾತ್ರೆಯ ನಿಮಿತ್ತ ಈ ಕಾರ್ಯಕರ್ತರು ರಿವರ್ ಫ್ರಂಟ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿಂದ ಅವರು ಮರಳಿ ಬರುತ್ತಿರುವಾಗ ಈ ಘಟನೆ ನಡೆದಿದೆ. ಮತಾಂಧ ಮುಸಲ್ಮಾನರು ಬಸ್ಸನ್ನು ನಿಲ್ಲಿಸಿ ಬಜರಂಗದಳದ ಕಾರ್ಯಕರ್ತರನ್ನುದ್ದೇಶಿಸಿ, “ನೀವು ನಮ್ಮ ಪ್ರದೇಶದಿಂದ ಹಾದು ಹೋಗುವಾಗ ಏಕೆ ಘೋಷಣೆಗಳನ್ನು ಕೂಗುತ್ತಿದ್ದೀರಿ ? ನಿಮಗೆ ಘೋಷಣೆಗಳನ್ನು ಕೂಗುವುದಿದ್ದರೆ ನಿಮ್ಮ ಪ್ರದೇಶಕ್ಕೆ ಹೋಗಿ ಕೂಗಿರಿ. ನಾವು ನಿಮ್ಮ ಪ್ರದೇಶಕ್ಕೆ ಬಂದು ‘ನಾರಾ-ಎ-ತಕಬೀರ್’ (ಅಲ್ಲಾ ಎಲ್ಲರಿಗಿಂತ ಮಹಾನ ಆಗಿದ್ದಾನೆ) ಮತ್ತು ‘ಅಲ್ಲಾಹು ಅಕ್ಬರ’ (ಅಲ್ಲಾ ಮಹಾನ) ಎಂದು ಕೂಗಿದರೆ ಏನಾಗುತ್ತದೆ ?” ಎಂದು ಕೇಳಿದರು. (‘ಭಾರತದಲ್ಲಿ ಮುಸಲ್ಮಾನ ಅಸುರಕ್ಷಿತರಾಗಿದ್ದಾರೆ’ ಎಂದು ಕೂಗುವವರು ಈ ಘಟನೆಯ ಸಂದರ್ಭದಲ್ಲಿ ಯಾರು ಅಸುರಕ್ಷಿತರಾಗಿದ್ದಾರೆ, ಎಂದು ಹೇಳುವರೇ ? – ಸಂಪಾದಕರು) ಈ ಸಂದರ್ಭದಲ್ಲಿ ಅಲ್ಲಿ ಪೋಲೀಸರೂ ತಲುಪಿದ್ದರು; ಆದರೆ ಅವರು ಅಸಹಾಯಕರಂತೆ ಕಾಣಿಸುತ್ತಿದ್ದರು. (ಮತಾಂಧ ಮುಸಲ್ಮಾನರ ಮುಂದೆ ಅಸಹಾಯಕರಾಗುವ ಭಾಜಪ ರಾಜ್ಯದ ಪೊಲೀಸರನ್ನು ಹಿಂದೂಗಳು ನಿರೀಕ್ಷಿಸುವುದಿಲ್ಲ ! ಇಂತಹ ಪೊಲೀಸರು ಗಲಭೆಗಳ ಸಂದರ್ಭದಲ್ಲಿ ಹಿಂದೂಗಳನ್ನು ಹೇಗೆ ರಕ್ಷಿಸುತ್ತಾರೆ ? – ಸಂಪಾದಕರು)
Ahmedabad, Gujarat:
“This is ‘our area’, why did you play Ramdhun and Jai Shri Ram here? What if we raise the slogans of Nara-e-Takbir, Allah-hu-Akbar in your area?”
– Muslim mob allegedly stops a bus of hindu pilgrims returning from Bajrang Dal’s Shobha Yatra and objects to… pic.twitter.com/7EcdnGlsXJ
— The Analyzer (News Updates🗞️) (@Indian_Analyzer) October 9, 2023
ಗೋದ್ರಾದಂತಹ ಕೃತ್ಯ ನಡೆಸಲು ಷಡ್ಯಂತ್ರ ರಚಿಸಿದ್ದರೇ ? – ವಿಶ್ವ ಹಿಂದೂ ಪರಿಷತ್ತು
ಈ ಘಟನೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ತಿನ ಗುಜರಾತ ವಕ್ತಾರ ಹಿತೇಂದ್ರ ಸಿಂಹ ರಾಜಪೂತ ಮಾತನಾಡಿ, ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಈಗ ಗುಜರಾತ್ನಲ್ಲಿ ಹಿಂದೂಗಳಿಗೆ `ಜೈ ಶ್ರೀ ರಾಮ’ ಎಂದು ಕೂಗುವುದನ್ನು ನಿಷೇಧಿಸಲು ಹೊರಟಿದ್ದಾರೆಯೇ ? ಹಿಂದೂ ಯಾತ್ರಿಕರ ಬಸ್ಸು ನಿಲ್ಲಿಸಿದ ಮುಸಲ್ಮಾನರ ಉದ್ದೇಶವೇನು ? ಇದರ ಹಿಂದೆ ಏನಾದರೂ ಷಡ್ಯಂತ್ರವಿದೆಯೇ ? ಮುಸಲ್ಮಾನರು ಗೋಧ್ರಾದಂತೆ (2002 ರಲ್ಲಿ ಗುಜರಾತ್ನ ಗೋಧ್ರಾ ರೈಲು ನಿಲ್ದಾಣದಲ್ಲಿ ಮುಸಲ್ಮಾಣರು ಕಾರಸೇವಕರಿದ್ದ ಸಾಬರಮತಿ ಎಕ್ಸ್ಪ್ರೆಸ್ನ ಒಂದು ಬೋಗಿಗೆ ಬೆಂಕಿ ಹಚ್ಚಿದ್ದರು. ಇದರಲ್ಲಿ 59 ಕಾರಸೇವಕರು ಸಾವನ್ನಪ್ಪಿದ್ದರು.) ಕೃತ್ಯವನ್ನು ಮಾಡಲು ಬಯಸಿದ್ದರೆ ? ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗೃಹ ಸಚಿವ ಹರ್ಷ ಸಂಘವಿ ಮತ್ತು ಪೊಲೀಸ್ ಮಹಾನಿರ್ದೇಶಕರಲ್ಲಿ ಮನವಿ ಮಾಡುತ್ತಿದ್ದೇವೆ. ವಿಡಿಯೋ ಆಧಾರದಲ್ಲಿ ಮುಸಲ್ಮಾನರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!