ರಾಜಸ್ಥಾನ ಸರಕಾರ ಮದರಸಾ ಬೋರ್ಡ್ ನ 5 ಸಾವಿರದ 662 ಮುಸ್ಲಿಂ ಶಿಕ್ಷಕರನ್ನು ಕಾಯಂಗೊಳಿಸಲಿದೆ !

ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಮುಸಲ್ಮಾನರ ಒಟ್ಟು ಮತವನ್ನು ಸೆಳೆಯಲು ಪ್ರಯತ್ನ !

ಜೈಪುರ (ರಾಜಸ್ಥಾನ) – ರಾಜ್ಯದಲ್ಲಿ ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಜನರಿಗೆ ಸೌಲಭ್ಯಗಳ ಸುರಿಮಳೆಗೈಯುತ್ತಿದ್ದಾರೆ. ಇದರಡಿಯಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ 10 ಸಾವಿರದ 528 ಸರಕಾರಿ ನೌಕರರನ್ನು ಕಾಯಂಗೊಳಿಸಲಿದೆ. ಇದರಲ್ಲಿ ‘ರಾಜಸ್ಥಾನ ಮದರಸಾ ಬೋರ್ಡ್’ನಲ್ಲಿ ಕೆಲಸ ಮಾಡುತ್ತಿರುವ 5 ಸಾವಿರದ 562 ಜನರು ಸೇರಿದ್ದಾರೆ. ಇದರೊಂದಿಗೆ `ಮನರೆಗಾ ಯೋಜನೆ’ಯ ಅಡಿಯಲ್ಲಿ 9 ವರ್ಷಕ್ಕಿಂತ ಅಧಿಕ ಕಾಲ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸಲು 4 ಸಾವಿರ 966 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಇದು ಕಾಂಗ್ರೆಸ್‌ನ ಜಾತ್ಯತೀತತೆ ? ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ ಸರಕಾರವನ್ನು ರಾಜಸ್ಥಾನದ ಜನರು ಮರೆಯುವುದಿಲ್ಲ ಎಂಬುದನ್ನು ಕಾಂಗ್ರೆಸ್ ಗಮನದಲ್ಲಿಟ್ಟು ಕೊಳ್ಳಬೇಕು !