ನನ್ನ ವಿರುದ್ಧ ಕ್ರಮ ಕೈಗೊಂಡರೂ ನಾವು ಖಲಿಸ್ತಾನ ನಿರ್ಮಿಸುವೆವು ! (ಅಂತೆ) – ಗುರುಪತವಂತ ಸಿಂಹ ಪನ್ನು

ಆಸ್ತಿ ವಶಪಡಿಸಿಕೊಂಡ ನಂತರ ಗುರುಪತವಂತ ಸಿಂಹ ಪನ್ನುನಿಂದ ಭಾರತಕ್ಕೆ ಬೆದರಿಕೆ !

ನವ ದೆಹಲಿ – ರಾಷ್ಟ್ರೀಯ ತನಿಖಾ ದಳದಿಂದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಪಂಜಾಬದಲ್ಲಿನ ಆಸ್ತಿ ವಶಪಡಿಸಿಕೊಂಡ ನಂತರ ಪನ್ನು ಇವನು ಭಾರತಕ್ಕೆ ಬೆದರಿಕೆ ನೀಡಿದ್ದಾನೆ. ‘ನನ್ನ ವಿರುದ್ಧ ಕ್ರಮ ಕೈಗೊಂಡಿರುವುದರಿಂದ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ಖಲಿಸ್ತಾನದ ನಿರ್ಮಾಣ ಮಾಡಿಯೇ ತೀರುತ್ತೇವೆ’, ಎಂದು ಹೇಳಿದನು. ಈ ಹಿಂದೆ ಇವನು ಕೆನಡಾದಲ್ಲಿನ ಹಿಂದುಗಳಿಗೆ ದೇಶ ಬಿಟ್ಟು ಹೋಗುವ ಬೆದರಿಕೆ ನೀಡಿದ್ದನು.

ಸಂಪಾದಕೀಯ ನಿಲುವು

ದೇಶದ ವಿಭಜನೆಯ ನಂತರ ಪಂಜಾಬ ಪ್ರಾಂತದಲ್ಲಿ ಶೇಕಡ ೬೨ ರಷ್ಟು ಪ್ರದೇಶ ಪಾಕಿಸ್ತಾನಕ್ಕೆ ಹೋಗಿದೆ. ಹಿಂದೆ ಪಂಜಾಬ್ ನ ಮೇಲೆ ರಾಜ್ಯ ಆಳುವ ಸಿಖ ರಾಜರ ರಾಜಧಾನಿ ಲಾಹೋರ್ ಆಗಿತ್ತು. ‘ಸ್ವತಂತ್ರ ಖಲಿಸ್ತಾನ’ದ ಬೇಡಿಕೆ ಮಾಡುವ ಖಲಿಸ್ತಾನಿ ಭಯೋತ್ಪಾದಕರು ಇದರ ಬಗ್ಗೆ ಚಕಾರವೂ ಎತ್ತುವುದಿಲ್ಲ. ಇದರಿಂದ ನುಡಿಸುವವರು ಯಾರು ಎಂದು ಸ್ಪಷ್ಟವಾಗುತ್ತದೆ !