ಪಲಾಯನ ಮಾಡಿರುವ 19 ಖಲಿಸ್ತಾನಿ ಭಯೋತ್ಪಾದಕರ ಆಸ್ತಿ ಜಪ್ತು ಮಾಡಲಾಗುವುದು !

ನವ ದೆಹಲಿ – ರಾಷ್ರ್ಟೀಯ ತನಿಖಾ ದಳವು ‘ಸಿಖ್ ಫಾರ್ ಜಸ್ಟಿಸ್’ ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಪ್ರಮುಖ ಗುರುಪತವಂತ ಸಿಂಹ ಪನ್ನೂನ ಆಸ್ತಿ ಜಪ್ತು ಮಾಡಿದ ನಂತರ ಪಲಾಯನ ಮಾಡಿರುವ ಇತರ ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಸಿದ್ದಪಡಿಸಿದೆ. ಇದರಲ್ಲಿ ೧೯ ಭಯೋತ್ಪಾದಕರ ಹೆಸರಿದೆ. ಈ ಖಲಿಸ್ತಾನಿ ಭಯೋತ್ಪಾದಕರು ಬ್ರಿಟನ, ಅಮೇರಿಕಾ, ಕೆನಡಾ, ದುಬೈ, ಪಾಕಿಸ್ತಾನ ಸಹಿತ ಇತರ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಈಗ ಈ ಎಲ್ಲ ಪರಾರಿಯಾಗಿರುವ ಭಯೋತ್ಪಾದಕರ ಆಸ್ತಿಯನ್ನು ಕಾನೂನು ಬಾಹಿರ ಕಾರ್ಯಾಚರಣೆ ಪ್ರತಿಬಂಧಕ ಕಾಯಿದೆ ಕಲಂ ೩೩ (೫) ರ ಅನ್ವಯ ಜಪ್ತು ಮಾಡಲಾಗುವುದು.