ಸರಕಾರಿ ಶಾಲೆಯಲ್ಲಿ ಶ್ರೀ ಗಣೇಶನ ಪೂಜೆ ಮಾಡಿದ ವಿದ್ಯಾರ್ಥಿನಿಯ ಕೈ ಮುರಿದ ಶಿಕ್ಷಕಿ !

ಶಿಕ್ಷಕಿಯ ಮೇಲೆ ಕ್ರಮಕೈಗೊಳ್ಳುತ್ತಾ ಅಮಾನತು

ಬೆಂಗಳೂರು – ಕೆ.ಜಿ.ಎಫ್. ತಾಲೂಕಿನಲ್ಲಿನ ಅಲ್ಲಿಕಲ್ಲಿ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯು ತರಗತಿಯಲ್ಲಿ ಶ್ರೀ ಗಣೇಶನ ಪೂಜೆ ಮಾಡಿದ್ದರಿಂದ ಮುಖ್ಯ ಶಿಕ್ಷಕಿ ಹೇಮಲತಾ ಇವರು ವಿದ್ಯಾರ್ಥಿನಿಯ ಕೈಯನ್ನೇ ಮುರಿದು ಹಾಕಿದ್ದಾರೆ. ಈ ಕುರಿತು ಆಕೆಯ ಪೋಷಕರು ಶಾಲೆಗೆ ಬಂದು ಪ್ರಶ್ನಿಸಿದ್ದಾರೆ. ಇದರ ನಂತರ ಆ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಇದರ ಜೊತೆಗೆ ಆ ವಿದ್ಯಾರ್ಥಿನಿಗೆ ಚಿಕಿತ್ಸೆಯ ವೆಚ್ಚ ಕೂಡ ನೀಡಲು ಶಿಕ್ಷಕಿಗೆ ಆದೇಶಿಸಲಾಗಿದೆ.