೬೩ ನಿಮಿಷದಲ್ಲಿ ಪೃಥ್ವಿಯ ಕಕ್ಷೆ ತಲುಪಿತು !
೧೬ ದಿನದ ನಂತರ ಸೂರ್ಯನತ್ತ ಪಯಣ !

ಬೆಂಗಳೂರು – ಭಾರತದ ಸೂರ್ಯ ಅಭಿಯಾನದ ಅಡಿಯಲ್ಲಿ ‘ಆದಿತ್ಯ ಎಲ್ 1’ ಈ ಯಾನ ಸಪ್ಟೆಂಬರ್ ೨ ರಂದು ಬೆಳಿಗ್ಗೆ ೧೧.೫೦ ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದಲ್ಲಿನ ಶ್ರೀಹರಿಕೋಟದಿಂದ ಕ್ಯಾಪ್ಟನ್ ಸತೀಶ್ ಧವನ ಬಾಹ್ಯಕಾಶ ಕೇಂದ್ರದಿಂದ ಈ ಯಾನ ‘ಪಿ.ಎಸ್’ಎಲ್’ವಿ.ಸಿ. 57’ ಈ ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ಅದರ ನಂತರ ೬೩ ನಿಮಿಷದಲ್ಲಿ ಈ ಯಾನ ಪೃಥ್ವಿಯ ಕಕ್ಷೆಗೆ ತಲುಪಿತು. ಅಲ್ಲಿ ಈ ಯಾನ ೧೬ ದಿನ ಉಳಿಯುವುದು. ಅದರ ನಂತರ ಅದು ಸೂರ್ಯನ ಕಡೆಗೆ ಮಾರ್ಗಕ್ರಮಣ ಮಾಡಲಿದೆ. ಪೃಥ್ವಿ ಮತ್ತು ಸೂರ್ಯನ ಮಧ್ಯ ಪೃಥ್ವಿಯಿಂದ ೧೫ ಲಕ್ಷ ಕಿಲೋಮೀಟರ್ ಅಂತರದಲ್ಲಿರುವ ‘ಲಾಂಗ್ರಾಜ್ ಪಾಯಿಂಟ್ 1’ ಇಲ್ಲಿ ೪ ತಿಂಗಳ ನಂತರ ಈ ಯಾನ ತಲುಪುವುದು ಮತ್ತು ಅಲ್ಲಿ ಸ್ಥಿರವಾಗುವುದು. ಅಲ್ಲಿ ಮುಂದಿನ ೫ ವರ್ಷಗಳ ಕಾಲ ಉಳಿದು ‘ಆದಿತ್ಯ ಎಲ್ 1’ ಸೂರ್ಯನ ಅಧ್ಯಯನ ಮಾಡುವುದು. ಆದ್ದರಿಂದ ಸೂರ್ಯನಲ್ಲಾಗುವ ಬದಲಾವಣೆ ಪೃಥ್ವಿಯ ಮೇಲಿನ ಆಕಾಶ ಮತ್ತು ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ? ಇದನ್ನು ತಿಳಿದುಕೊಳ್ಳಬಹುದು. ‘ಇಸ್ರೋ’ದಿಂದ ಈ ಅಭಿಯಾನಕ್ಕಾಗಿ ಸುಮಾರು ೪೦೦ ಕೋಟಿ ರೂಪಾಯಿ ಖರ್ಚು ಮಾಡಿದೆ. ‘ಆದಿತ್ಯ ಎಲ್ 1’ ರ ಮೂಲಕ ಯಾವ ರೀತಿ ಎಲ್ಲಾ ಗ್ರಹಗಳು ಸೂರ್ಯನಿಗೆ ವ್ಯವಸ್ಥಿತವಾಗಿ ಪ್ರದಕ್ಷಿಣೆ ಹಾಕುತ್ತವೆ ? ಸೂರ್ಯನ ನಿರ್ಮಿತಿ ಹೇಗೆ ಆಯಿತು? ಪೃಥ್ವಿಯ ಉತ್ಪತ್ತಿ ಎಲ್ಲಿಂದ ಆಯಿತು? ಸಂಪೂರ್ಣ ಸೌರ ಮಂಡಲ ಸೂರ್ಯನಿಂದ ನಿರ್ಮಾಣವಾಗಿದೆಯೇ ? ಅಥವಾ ಪೃಥ್ವಿ ಸಹಿತ ಸೌರ ಮಂಡಲದಲ್ಲಿನ ಗ್ರಹಗಳು ಎಲ್ಲಿಂದ ಬಂದಿದೆ? ಈ ಎಲ್ಲಾ ವಿಷಯದ ಅಧ್ಯಯನ ಮಾಡಲಾಗುವುದು. ‘ಆದಿತ್ಯ ಎಲ್ 1’ ಇದರ ಸಂಪೂರ್ಣ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಲಿದೆ.
Aditya-L1 started generating the power.
The solar panels are deployed.The first EarthBound firing to raise the orbit is scheduled for September 3, 2023, around 11:45 Hrs. IST pic.twitter.com/AObqoCUE8I
— ISRO (@isro) September 2, 2023
ಚೀನಾದ ಸೂರ್ಯ ಅಭಿಯಾನದಕ್ಕಿಂತಲೂ ಭಾರತದ ಅಭಿಯಾನ ಹೆಚ್ಚು ಪ್ರಭಾವಶಾಲಿ !
ಭಾರತಕ್ಕಿಂತ ಮೊದಲ ಚೀನಾ ಸೂರ್ಯ ಅಭಿಯಾನ ನಡೆದಿದೆ. ಚೀನಾ ಅಕ್ಟೋಬರ್ ೮, ೨೦೨೨ ರಂದು ‘ಎ. ಎಸ್.ಓ.ಎಸ್.’ ಈ ಯಾನದ ಉಡಾವಣೆ ನಡೆಸಿತ್ತು. ಅದು ಸೂರ್ಯನ ಕಡೆಗೆ ಹೋಗದೆ ಪೃಥ್ವಿಯಿಂದ ೭೨೦ ಕಿಲೋಮೀಟರ್ ಎತ್ತರದಲ್ಲಿ ಉಳಿದು, ಎಂದರೆ ಪೃಥ್ವಿಯ ಕಕ್ಷೆಯಲ್ಲಿಯೇ ಉಳಿದು ಸೂರ್ಯನ ಅಧ್ಯಯನ ನಡೆಸುತ್ತಿದೆ. ಅದರ ತುಲನೆಯಲ್ಲಿ ಭಾರತದ ‘ಆದಿತ್ಯ ಎಲ್ 1’ ಈ ಯಾನ ಪೃಥ್ವಿಯಿಂದ ೧೫ ಲಕ್ಷ ಕಿಲೋಮೀಟರ್ ದೂರದವರೆಗೆ ಹೋಗಿ ಸೂರ್ಯನ ಅಧ್ಯಯನ ನಡೆಸುವುದು. ಭಾರತದ ಈ ಯಾನದ ತೂಕ ಕೇವಲ ೪೦೦ ಕಿಲೋ ಹಾಗೂ ಚೀನಾದ ಯಾನದ ತೂಕ ೮೮೮ ಕಿಲೋ ದಷ್ಟು ಇದೆ. ಭಾರತದ ಯಾನ ಸುಮಾರು ೪೦೦ ಕೋಟಿ ರೂಪಾಯಿಯಲ್ಲಿ ತಯಾರಾಗಿದೆ, ಹಾಗೂ ಚೀನಾದಿಂದ ಅದರ ಯಾನದ ಮೇಲೆ ಭಾರತದಕ್ಕಿಂತಲೂ ಹೆಚ್ಚಿನ ಹಣ ಖರ್ಚು ಮಾಡಿದೆ.
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!