ರಾಜಸ್ಥಾನದಲ್ಲಿ ೯೩ ವರ್ಷದ ಮಹಂತ ಸಿಯಾರಾಮ ದಾಸ ಇವರ ಹತ್ಯೆ

ಕೆಲವು ದಿನಗಳ ಹಿಂದೆಯೇ ನಡೆದಿತ್ತು ಓರ್ವ ಮಹಂತರ ಹತ್ಯೆ

ಜೈಪುರ (ರಾಜಸ್ಥಾನ) – ರಾಜಸ್ಥಾನದ ಟೋಂಕನಲ್ಲಿ ಶ್ರೀ ಮಹಾದೇವ ದೇವಸ್ಥಾನದ ಮಹಂತ ಸಿಯಾರಾಮ ದಾಸ ಬಾಬಾ ಬುರಿಯ (ವಯಸ್ಸು ೯೩ ವರ್ಷ) ಇವರ ತಲೆಗೆ ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯ ನಂತರ ಪರಿಸರದಲ್ಲಿ ಆತಂಕ ನಿರ್ಮಾಣವಾಯಿತು. ಜನರು ತಕ್ಷಣ ಪೊಲೀಸರಿಗೆ ಘಟನೆಯ ಮಾಹಿತಿ ನೀಡಿದರು. ಪೊಲೀಸರು ಶವವನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.

ಮಹಂತ ಸಿಯಾರಾಮ ದಾಸ ಬಾಬಾ ಬುರಿಯ ಇವರು ಕಳೆದ ೫೦ ವರ್ಷಗಳಿಂದ ಶ್ರೀ ಮಹದೇವ ದೇವಸ್ಥಾನದಲ್ಲಿ ಪೂಜಾರ್ಚನೆ ಮಾಡುತ್ತಿದ್ದರು. ಅವರ ಹತ್ಯೆಯಿಂದ ಸಂತ ಸಮಾಜದಲ್ಲಿ ಅಸಮಧಾನ ಮೂಡಿದೆ. ಈ ಘಟನೆಯನ್ನು ನಿಷೇಧಿಸಲು ನಗರವಾಸಿಯರು ಮಾರುಕಟ್ಟೆಯನ್ನು ಮುಚ್ಚಿದರು. ಕೆಲವು ದಿನಗಳ ಹಿಂದೆಯೇ ರಾಜಸ್ಥಾನದ ಡಿಡವಾನ ಕುಚಾಮಣ ಜಿಲ್ಲೆಯಲ್ಲಿನ ಸಂತ ಮೋಹನದಾಸ ಇವರ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ರಾಜಸ್ಥಾನದಲ್ಲಿನ ಅಪರಾಧಿಗಳು ಋಷಿಮುನಿಗಳನ್ನು ಗುರಿ ಮಾಡುತ್ತಿದ್ದಾರೆ ! – ಭಾಜಪ

ಭಾಜಪದ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಹ ಶೇಖಾವತ್ ಇವರು ‘ಮಹಂತ ಸಿಯಾರಾಮ ದಾಸ ಬಾಬಾ ಇವರ ಬರ್ಬರ ಹತ್ಯೆ ನಡೆಯುವುದು, ಇದು ಬಹಳ ದುಃಖದ ಘಟನೆಯಾಗಿದೆ’, ಎಂದು ಅವರು ಹೇಳಿದರು. ಶೇಖಾವತ್ ಇವರು ಕಾಂಗ್ರೆಸ್ ಸರಕಾರವನ್ನು ಟೀಕಿಸುತ್ತಾ ರಾಜಸ್ಥಾನದಲ್ಲಿ ಅಪರಾಧಿಗಳಿಂದ ಋಷಿಮುನಿಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ಆಡಳಿತದಲ್ಲಿ ಸಾಧು ಸಂತರು ಅಸುರಕ್ಷಿತ !