ರಾಜ್ ಕೋಟ (ಗುಜರಾತ್)ನಲ್ಲಿ ಮತಾಂಧರಿಂದ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸುವ ಹಿಂದೂ ಕುಟುಂಬದ ಮೇಲೆ ದಾಳಿ !

ಶ್ರೀ ಗಣೇಶ ಮೂರ್ತಿಗಳ ಧ್ವಂಸ !

(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು)

ರಾಜ್ ಕೋಟ (ಗುಜರಾತ) – ಇಲ್ಲಿ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸುವ ಕಿಶನ್ ರಾಥೋಡ್ ಅವರ ಮನೆ ಮೇಲೆ ಮೂವರು ಮುಸ್ಲಿಮರು ದಾಳಿ ನಡೆಸಿ ಶ್ರೀ ಗಣೇಶ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಅಮೀನ್ ಹಬೀಬ್ ಸಮಾ, ರಫೀಕ್ ಇಸ್ಮಾಯಿಲ್ ಮನ್ಸೂರಿ ಮತ್ತು ಸಮೀರ್ ಯೂಸುಫ್ ಶಾಹಮದಾರ್ ಅವರನ್ನು ಬಂಧಿಸಿದ್ದಾರೆ.

ಇರ್ಫಾನ್ ಸಿದ್ದಿಕಿ ಎಂಬುವರ ಮನೆಯಲ್ಲಿ ಕಿಶನ್ ರಾಥೋಡ್ ಇವರು ಬಾಡಿಗೆ ವಾಸವಾಗಿದ್ದರು. ಅವರು ಈ ಸ್ಥಳದಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಇದಕ್ಕಾಗಿ ಕೆಲ ದಿನಗಳಿಂದ ದಾಳಿಕೋರರು ಕಿರುಕುಳ ನೀಡುತ್ತಿದ್ದರು. ಈ ಹಿಂದೆಯೂ ನಿಂದಿಸುವುದು, ಕಲ್ಲು ತೂರಾಟ ಮಾಡುವುದು ಮುಂತಾದವು ಮಾಡಿದ್ದರು. ಅಲ್ಲದೇ ಒಬ್ಬ ಕುಶಲಕರ್ಮಿಯ ಮೇಲೆಯೂ ಹಲ್ಲೆ ಮಾಡಿದ್ದರು. ಸಿದ್ದಿಕಿಯವರ ಸ್ಥಳದಲ್ಲಿ ವಿಗ್ರಹಗಳನ್ನು ನಿರ್ಮಿಸುವುದನ್ನು ಅವರು ವಿರೋಧಿಸುತ್ತಿದ್ದರು.

ಸಂಪಾದಕರ ನಿಲುವು

* ಗುಜರಾತ್ ನಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆ ನಡೆಯಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !

* ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂ ದೇವತೆಗಳ ಮೂರ್ತಿಗಳನ್ನು ಧ್ವಂಸ ಮಾಡಲು ಮತಾಂಧ ಮುಸ್ಲಿಮರು ಧೈರ್ಯ ಮಾಡುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !

* ‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’, ಎಂದು ಹೇಳುವವರು ಯಾವತ್ತೂ ‘ಭಾರತದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ’, ಎಂದು ಹೇಳುವುದಿಲ್ಲ. ಇದನ್ನು ಗಮನಿಸಬೇಕು !