ಹಸಿವಿನಿಂದ ಕಂಗಲಾಗಿರುವ ಪಾಕಿಸ್ತಾನದ ಹಗಲುಗನಸು

೧. ಹಸಿವಿನಿಂದ ಕಂಗಲಾಗಿರುವ ಪಾಕಿಸ್ತಾನದ ಹಗಲುಗನಸು

ಆಗಸ್ಟ್ ೧೪ ರಂದು ನೆರವೇರಿದ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ ಮುನೀರ್‌ ಇವರು, ಯಾವ ರೀತಿ ೭೬ ವರ್ಷಗಳ ಹಿಂದೆ ನಮಗೆ ಸ್ವಾತಂತ್ರ್ಯ ದೊರಕಿತೋ, ಅದೇರೀತಿ ಕಾಶ್ಮೀರದ ಜನರಿಗೂ ಅವರನ್ನು ವಶದಲ್ಲಿಟ್ಟಿರುವ ಶಕ್ತಿಗಳಿಂದ ಸ್ವಾತಂತ್ರ್ಯ ಸಿಗಲಿದೆ ಎಂದಿದ್ದಾರೆ.

೨. ಯುರೋಪಿಯನ್‌ ಸಂಸದರಿಗೆ ತಿಳಿದಿರುವ ಪಾಕಿಸ್ತಾನದ ಸತ್ಯ !

‘ಆಗಸ್ಟ್ ೧೪ ಇದು ನೂರಕ್ಕೆ ನೂರರಷ್ಟು ಇಸ್ಲಾಮಿಕ್‌ ಭಯೋತ್ಪಾದಕರ ದೇಶವಾಗಿರುವ ಪಾಕಿಸ್ತಾನದ ಸ್ವಾತಂತ್ರ್ಯ ದಿನವಾಗಿದೆ. ಪಾಕಿಸ್ತಾನ ಇದು ಪೃಥ್ವಿಯ ಮೇಲಿನ ನರಕವಾಗಿದೆ’, ಎಂದು ನೆದರ್ಲ್ಯಾಂಡ್ಸ್ ನ ‘ಪಾರ್ಟಿ ಫಾರ್‌ ಫ್ರೀಡಮ್’ ಈ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ಸಂಸದ ಗೀರ್ಟ ವಿಲ್ಡರ್ಸ್ ಇವರು ಟ್ವೀಟ್‌ ಮಾಡಿದ್ದಾರೆ.

೩. ಇಂತಹ ಹಿಂದೂದ್ವೇಷಿ ಕಾಂಗ್ರೆಸ್‌ನ ಭವಿಷ್ಯ ಅಂಧಃಕಾರಮಯವಾಗಲಿದೆ !

ಇಂದು ಸಂವಿಧಾನದ ಪ್ರತಿಜ್ಞೆಯನ್ನು ಮಾಡಿ ಹುದ್ದೆಯಲ್ಲಿ ಕುಳಿತಿರುವ, ಪ್ರಧಾನಮಂತ್ರಿಗಳು ಒಂದು ವೇಳೆ ಹಿಂದೂ ರಾಷ್ಟ್ರದ ಕುರಿತು ಮಾತನಾಡುತ್ತಿದ್ದರೆ ಅವರು ರಾಜೀನಾಮೆಯನ್ನು ನೀಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ವಿಷ ಕಾರಿದರು.

೪. ಈ ರೀತಿಯ ಧರ್ಮಪ್ರೇಮ ಎಷ್ಟು ಹಿಂದೂಗಳಲ್ಲಿದೆ ?

ಜ್ಞಾನವಾಪಿಯ ಪ್ರಕರಣದಲ್ಲಿ ನಾವು ಯಾವುದೇ ಹೊಂದಾಣಿಕೆ ಮಾಡಲು ಸಿದ್ಧರಿಲ್ಲ. ನಾವು ಮುಸ್ಲಿಂ ಪಕ್ಷಕ್ಕೆ ಒಂದಿಂಚೂ ಭೂಮಿಯನ್ನು ಕೊಡುವುದಿಲ್ಲ ಎಂದು ವಾರಾಣಾಸಿಯ ಹಿಂದೂಪರ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ತಮ್ಮ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ.

೫. ಇಂತಹ ಮದರಸಾಗಳಿಗೆ ಬೀಗ ಜಡಿಯಿರಿ !

ಪ್ರಯಾಗರಾಜದ (ಉತ್ತರಪ್ರದೇಶ) ಗೌಸಿಯಾ ಇಸ್ಲಾಮಿಯಾ ಜಿಂತುಲ್‌ ಉಲುಮ್‌ ಈ ಮದರಸಾದಲ್ಲಿ ರಾಷ್ಟ್ರಧ್ವಜದ ಮೇಲೆ ಉಪಾಹಾರವನ್ನು ಇಟ್ಟಿರುವ ಛಾಯಾ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು ತ್ತಿದ್ದಂತೆಯೇ ಪೊಲೀಸರು ಮದರಸಾದಲ್ಲಿನ ಮುಖ್ಯಸ್ಥನ ಸಹಿತ ೪ ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

೬. ಇಂತಹ ಕೃತಘ್ನ ಮತಾಂಧರನ್ನು ಪಾಕಿಸ್ತಾನಕ್ಕೆ ಕಳುಹಿಸಿ

ಹರದೋಯಿ (ಉತ್ತರಪ್ರದೇಶ)ದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ವೇಳೆ ಮೌಲಾನಾ ಅಬ್ದುರ್ಹಮಾನ ಜಾಮಯಿ ಇವರು ಭಾಷಣ ಮಾಡುವಾಗ ‘ಯಾವ ಸ್ವಾತಂತ್ರ್ಯದಲ್ಲಿ ಮುಸಲ್ಮಾನರಿಗೆ ಅತ್ಯಾಚಾರ ಮಾಡಲಾಗುತ್ತದೆಯೋ ಅಂತಹ ಸ್ವಾತಂತ್ರ್ಯ ನಮಗೆ ಬೇಡ, ಅದನ್ನು ನಾವು ಧಿಕ್ಕರಿಸುತ್ತೇವೆ’, ಎಂದು ಹೇಳಿಕೆ ನೀಡಿದ್ದಾರೆ.

೭. ಇಂತಹ ಭ್ರಷ್ಟಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿರಿ

ಅಲ್ಪಸಂಖ್ಯಾತ ಸಚಿವಾಲಯದ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಕಳೆದ ೫ ವರ್ಷಗಳಲ್ಲಿ ೧೪೪ ಕೋಟಿ ೮೩ ಲಕ್ಷ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ೧ ಸಾವಿರ ೫೭೨ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಪೈಕಿ ೮೩೦ ಸಂಸ್ಥೆಗಳ ನೋಂದಣಿ ಕೇವಲ ಕಾಗದದಲ್ಲಿ ಮಾತ್ರ ಇರುವುದು ಬೆಳಕಿಗೆ ಬಂದಿದೆ.