ಬಗಾಹಾ (ಬಿಹಾರ)ದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಮುಸ್ಲಿಮರಿಂದ ಕಲ್ಲುತೂರಾಟ !

ಬಗಾಹಾ (ಬಿಹಾರ) – ಇಲ್ಲಿಯ  ರತನಮಾಲಾ ಪ್ರದೇಶದಲ್ಲಿ ಆಗಸ್ಟ್ ೨೧ ರಂದು ನಾಗರಪಂಚಮಿಯ ದಿನದಂದು ಹಿಂದುಗಳ ಮೆರವಣಿಗೆ ಮಸೀದಿಯ ಹತ್ತಿರ ಹೋಗುವುದನ್ನು ಮುಸಲ್ಮಾನರು ವಿರೋಧಿಸಿದ್ದರಿಂದ ೨ ಗುಂಪಿನಲ್ಲಿ ಹೊಡೆದಾಟ ನಡೆಯಿತು. ಎರಡು ಕಡೆಯಿಂದ ಕಲ್ಲು ತೂರಾಟ, ವಿದ್ವಾಂಸಕ ಕೃತ್ಯ ಮತ್ತು ಅಗ್ನಿ ಅನಾಹುತ ನಡೆಯಿತು. ಇದರ ನಂತರ ಬಗಾಹಾ ಮತ್ತು ಮೋತಿಹಾರಿ ಪ್ರದೇಶದಲ್ಲಿ ಹಿಂಸಾಚಾರ ನಡೆಯಿತು. ಈ ಹಿಂಸಾಚಾರದಲ್ಲಿ ೨ ಪೋಲಿಸ ಮತ್ತು ಒಬ್ಬ ಪತ್ರಕರ್ತನ ಸಹಿತ ೧೨ ಜನರು ಗಾಯಗೊಂಡರು. ಈ ಘಟನೆಯ ಮಾಹಿತಿ ದೊರೆಯುತ್ತಲೇ ಜಿಲ್ಲಾಧಿಕಾರಿ ದಿನೇಶ ರಾಯ ಇವರು ಘಟನಾ ಸ್ಥಳಕ್ಕೆ ತಲುಪಿದರು. ರತನಮಾಲಾ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನೇಮಕ ಮಾಡಲಾಗಿದೆ. (ಮುಸಲ್ಮಾನರೆ ಮೊದಲು ಹಿಂಸಾಚಾರ ನಡೆಸುತ್ತಾರೆ ಮತ್ತು ತದ್ವಿರುದ್ಧ ಭಾರತದಲ್ಲಿ ಮುಸಲ್ಮಾನರ ಅಸ್ತಿತ್ವಕ್ಕೆ ಅಪಾಯ ಇದೆ ಎಂದು ಅವರೇ ಬೊಬ್ಬೆ ಹಾಕುತ್ತಾರೆ ! – ಸಂಪಾದಕರು)

೧. ೪೦೦ ಕ್ಕಿಂತಲೂ ಹೆಚ್ಚು ಭಕ್ತರ ಸಮಾವೇಶ ಇರುವ ಮೆರವಣಿಗೆ ಮಸೀದಿಯ ಹತ್ತಿರ ಬಂದ ನಂತರ ೨೦೦ ಕ್ಕೂ ಹೆಚ್ಚಿನ ಮುಸಲ್ಮಾನರು ಅದನ್ನು ವಿರೋಧಿಸಿದರು. ‘ಇಲ್ಲಿಂದ ಮೆರವಣಿಗೆ ಹೋಗಲು ಸಾಧ್ಯವಿಲ್ಲ’, ಎಂದು ಅವರು ಹೇಳಿದರು. ಆದ್ದರಿಂದ ಮೆರವಣಿಗೆಯಲ್ಲಿ ಸಹಭಾಗಿ ಆಗಿರುವ ಭಕ್ತರು ಆಕ್ರೋಶಗೊಂಡರು. ಅದರ ನಂತರ ಎರಡೂ ಕಡೆಯಿಂದ ಕಲ್ಲು ತೂರಾಟ ಮತ್ತು ವಿದ್ವಾಂಸ ಆರಂಭವಾಯಿತು ಹಾಗೂ ಬೈಕುಗಳನ್ನು ಸುಡಲಾಯಿತು.

೨. ಈ ಹೊಡೆದಾಟದಲ್ಲಿ ಅಮಿತ ಕುಮಾರ, ಆಯುಷ ಕುಮಾರ, ಪಹಾವರಿ ಪ್ರಸಾದ, ರಾಧೆಶಾಮ ಮಾಂಜಿ, ಗೋಲು ಕುಮಾರ, ಭಗವಾನ ಚೌದರಿ, ಪತ್ರಕರ್ತ ಮುನ್ನಾ ರಾಜ, ಪೋಲಿಸ ಸಿಪಾಯಿ ಹರೀಶ ರಾಮ ಮತ್ತು ನಾಗಿನ ಯಾದವ ಇವರು ಗಾಯಗೊಂಡರು.

೩. ರತನಮಾಲಾ ಇಲ್ಲಿಯ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಪೊಲೀಸ ಅಧಿಕಾರಿ ಅಶೋಕ ಚೌದರಿ ಇವರು ಹೇಳಿದರು.

ಸಂಪಾದಕೀಯ ನಿಲುವು

ಹಿಂದುಗಳು ಮೆರವಣಿಗೆ ನಡೆಸುವುದು ಮತ್ತು ಮುಸಲ್ಮಾನರು ಅದನ್ನು ವಿರೋಧಿಸುವುದು, ಇದು ಈಗ ದಿನನಿತ್ಯ ನಡೆಯುತ್ತಿದೆ. ಇದನ್ನು ತಡೆಯುವುದಿದ್ದರೆ, ಪರಿಣಾಮಕಾರಿ ಹಿಂದೂ ಸಂಘಟನೆಯೊಂದೇ ಪರ್ಯಾಯ !