ಲಡಾಖನಲ್ಲಿ ಭಾರತೀಯ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿ ೯ ಸೈನಿಕರ ಸಾವು

ಲಡಾಖ – ಆಗಸ್ಟ್ ೧೯ ರಂದು ಇಲ್ಲಿ ಸಂಜೆ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿದ್ದರಿಂದ ೯ ಸೈನಿಕರು ಸಾವನ್ನಪ್ಪಿದ್ದಾರೆ. ಮೃತ ಸೈನಿಕರಲ್ಲಿ ಓರ್ವ ಅಧಿಕಾರಿಯ ಸಮಾವೇಶ ಕೂಡ ಇದೆ. ಕೆಲವು ಸೈನಿಕರು ಗಾಯಗೊಂಡಿದ್ದಾರೆ. ಭಾರತೀಯ ಸೈನಿಕರು ಕಾರು ಗರಿಸನ್ ಇಲ್ಲಿಂದ ಲೇಹ ಹತ್ತಿರ ಇರುವ ಕ್ಯಾರಿನಗರಕ್ಕೆ ಹೋಗುತ್ತಿದ್ದರು. ಆ ಸಮಯದಲ್ಲಿ ಈ ಘಟನೆ ನಡೆದಿದೆ.

ಈ ಅಪಘಾತದ ಬಗ್ಗೆ ರಕ್ಷಣಾ ಸಚಿವರಾದ ರಾಜನಾಥ ಸಿಂಹ ಇವರು ಸಂತಾಪ ಸೂಚಿಸಿದ್ದಾರೆ. ಸಿಂಹ ಇವರು ಟ್ವೀಟ್ ಮಾಡುತ್ತಾ, ‘ಲಡಾಖ್ ನ ಲೇಹ ಹತ್ತಿರ ನಡೆದಿರುವ ಭಾರತೀಯ ಸೈನಿಕರ ಸಾವಿನಿಂದಾಗಿ ನಾನು ಬಹಳ ದುಃಖಿತನಾಗಿದ್ದೇನೆ. ದೇಶಕ್ಕಾಗಿ ಅವರು ನೀಡಿರುವ ಕೊಡುಗೆ ಯಾರು ಮರೆಯಲು ಸಾಧ್ಯವಿಲ್ಲ. ಸೈನಿಕರ ಕುಟುಂಬದ ದುಃಖದಲ್ಲಿ ನಾನು ಸಹಭಾಗಿ ಇದ್ದೇನೆ. ಗಾಯಗೊಂಡ ಸೈನಿಕರ ಆರೋಗ್ಯ ಆದಷ್ಟು ಬೇಗನೆ ಸುಧಾರಿಸಲಿ, ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿತಿಳಿಸಿದ್ದಾರೆ.