ಉತ್ತರಾಖಂಡದಲ್ಲಿ ಮುಸ್ಲಿಂ ಮಾರಾಟಗಾರರಿಂದ ತಮ್ಮ ಗುರುತನ್ನು ಮರೆಮಾಚಿ ಹಣ್ಣಿನ ರಸ ಮಾರಾಟ !

ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗರಣಾ ವೇದಿಕೆಯಿಂದ ಆಡಳಿತಕ್ಕೆ ಮನವಿ

ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಲಕ್ಸರ್‌ನಲ್ಲಿ ಹಿಂದೂ ಜನಜಾಗರಣ ವೇದಿಕೆಯಿಂದ ಉಪ ವಿಭಾಗೀಯ ಆಯುಕ್ತರಿಗೆ ಮನವಿ ನೀಡಲಾಗಿದೆ. ಮುಸಲ್ಮಾನರು ತಮ್ಮ ಗುರುತು ಮರೆಮಾಚಿ ಹಣ್ಣಿನ ರಸ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಮಾರಾಟಗಾರರು ಹಣ್ಣಿನ ರಸದಲ್ಲಿ ರಾಸಾಯನಿಕಗಳನ್ನು ಸೇರಿಸುತ್ತಿದ್ದಾರೆ ಎಂಬ ಆರೋಪವೂ ಮಾಡಲಾಗಿದೆ.

ಲಕ್ಸರನ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಜೋಧಸಿಂಹ ಪುಂಡೀರ ಮತ್ತು ಉದ್ಯಮಿ ಅಜಯ ವರ್ಮಾ ಮುಖಂಡತ್ವದಲ್ಲಿ ಮನವಿಯನ್ನು ನೀಡಲಾಗಿದೆ. ಈ ಮನವಿಯಲ್ಲಿ, ಹೊರಗಿನಿಂದ ಬಂದಿರುವ ಜನರು ತಮ್ಮ ಅಂಗಡಿಗಳಿಗೆ ಊರು ಅಥವಾ ಇತರ ಹೆಸರುಗಳನ್ನು ಇಡುವ ಮೂಲಕ ತಮ್ಮ ಗುರುತನ್ನು ಮರೆಮಾಚುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರಿಂದ ಮಾರಾಟ ಮಾಡುವ ಹಣ್ಣಿನ ರಸವನ್ನು ಪರೀಕ್ಷಿಸಬೇಕು. ಹಾಗೆಯೇ ಈ ಮಾರಾಟಗಾರರ ನಿಜವಾದ ಗುರುತನ್ನು ಬಹಿರಂಗಪಡಿಸಬೇಕು ಎಂದು ಹೇಳಲಾಗಿದೆ.

ಸಂಪಾದಕರ ನಿಲುವು

ಹಣ್ಣಿನ ರಸ ಮಾರಾಟ ಮಾಡಲು ಗುರುತನ್ನು ಏಕೆ ಮರೆಮಾಚಬೇಕಾಗುತ್ತಿದೆ ?’, ಎನ್ನುವುದನ್ನು ದೇಶದ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಹೇಳುವರೇ ?