ಹರಿಯಾಣ ಪೊಲೀಸರ ಹಿಂದೂ ದ್ವೇಷ : ‘ತ್ರಿಶೂಲ’ವನ್ನು ‘ಮಾರಕಾಸ್ತ್ರ’ ಎಂದು ಹೇಳಿದರು !

ನುಹ್ (ಹರಿಯಾಣ) ನಲ್ಲಿ ಹಿಂಸಾಚಾರದ ಪ್ರಕರಣ

ಬಿಟ್ಟು ಬಜರಂಗಿ ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖ !

ಭಜರಂಗಿಯ ಮೇಲೆ ಅನುಮತಿಯಿಲ್ಲದೆ ತ್ರಿಶೂಲ ಮತ್ತು ಖಡ್ಗ ಇಟ್ಟುಕೊಂಡ ಆರೋಪ !

ಬಿಟ್ಟು ಬಜರಂಗಿ

ನುಹ್ (ಹರಿಯಾಣ) – ಜುಲೈ 31 ರಂದು ಹಿಂದೂಗಳ ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರು ದಾಳಿ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹಚ್ಚಿದ್ದರು. ಈ ಸಮಯದಲ್ಲಿ ಕೆಲವು ಹಿಂದೂಗಳು ಮತ್ತು ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಕೊಲ್ಲಲಾಯಿತು. ಈ ವೇಳೆ ಮತಾಂಧ ಮುಸಲ್ಮಾನರು ‘ಗೋರಕ್ಷಕ ಬಿಟ್ಟು ಬಜರಂಗಿ ಇವರು ಫೇಸ್ ಬುಕ್ ನಲ್ಲಿ ಮುಸ್ಲಿಮರನ್ನು ಪ್ರಚೋದಿಸಿದ್ದರಿಂದ ಹಿಂಸಾಚಾರ ನಡೆದಿದೆ’ ಎಂದು ಕಿಡಿಕಾರಿದ್ದಾರೆ. ಆದ್ದರಿಂದ ಪೊಲೀಸರು ಆಗಸ್ಟ್ 16 ರಂದು ಬಜರಂಗಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಬಜರಂಗಿ ವಿರುದ್ಧದ ಎಫ್ಐಆರ್ ನಲ್ಲಿ, ಬಿಟ್ಟು ಬಜರಂಗಿ ಮತ್ತು ಇತರ 15 ರಿಂದ 20 ಮಂದಿ ಯಾತ್ರೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಅವಕಾಶವಿಲ್ಲದಿದ್ದರೂ ‘ತ್ರಿಶೂಲ’ ಮತ್ತು ‘ಕತ್ತಿ’ಯಂತಹ ‘ಮಾರಕ ಆಯುಧ’ಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಪೊಲೀಸರು ಹಿಂದೂಗಳಿಂದ ಈ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರವೂ ಬಜರಂಗಿ ಮತ್ತು ಅವನ ಸಹಚರರು ಅವುಗಳನ್ನು ಪೊಲೀಸ್ ವಾಹನದಿಂದ ಬಲವಂತವಾಗಿ ತೆಗೆದುಕೊಂಡು ಹೋದರು. ಈ ವೇಳೆ ಅಲ್ಲಿದ್ದ ಪೊಲೀಸರೊಂದಿಗೂ ವಾಗ್ವಾದ ನಡೆಸಿದರು. ಈ ಹಿನ್ನೆಲೆಯಲ್ಲಿ ಬಿಟ್ಟು ಬಜರಂಗಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಸಂಪಾದಕರ ನಿಲುವು

* ಹಿಂದೂಗಳಿಗೆ ಪವಿತ್ರವಾಗಿರುವ ತ್ರಿಶೂಲವನ್ನು ಅವಮಾನಿಸಿದ ಹರಿಯಾಣ ಪೊಲೀಸರಿಂದ ಹಿಂದೂಗಳಿಗೆ ಎಂದಾದರೂ ನ್ಯಾಯ ಸಿಗುವುದೇ ?
* ಇತರ ಪಂಥಗಳ ಶ್ರದ್ಧಾಸ್ಥಾನಗಳ ಬಗ್ಗೆ ಪೊಲೀಸರು ಅಂತಹ ಹೇಳಿಕೆಯನ್ನು ನೀಡಲು ಎಂದಿಗೂ ಧೈರ್ಯ ಮಾಡುವುದಿಲ್ಲ, ಎಂಬುದನ್ನು ಗಮನಿಸಿ !