ಮತಾಂಧರು ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿದರು, ಆದರೆ `ಜುಬೆರ ಖಾನ’ ಎಂಬ ಕೆಲಸಗಾರನ ಔಷಧಾಲಯಕ್ಕೆ ಯಾವುದೇ ಹಾನಿ ಮಾಡಲಿಲ್ಲ !

ನೂಂಹ (ಹರಿಯಾಣ) – ನೂಂಹನಲ್ಲಿ ಜುಲೈ 31 ರಂದು ಮತಾಂಧ ಮುಸಲ್ಮಾನರು ನಡೆಸಿದ ಹಿಂಸಾಚಾರದಲ್ಲಿ ಅಪಾರ ಹಾನಿಯಾಗಿದೆ. ಇಲ್ಲಿನ ಅಲವರ ಆಸ್ಪತ್ರೆಯ ಮೇಲೆಯೂ ಆಕ್ರಮಣ ಮಾಡಲಾಗಿತ್ತು. ಆಗ ಆಸ್ಪತ್ರೆಯಲ್ಲಿದ್ದ ಭಗವಾನ ಶ್ರೀಕೃಷ್ಣ ಮತ್ತು ಶ್ರೀರಾಮರ ಮೂರ್ತಿಗಳನ್ನೂ ಖಡ್ಗಗಳಿಂದ ಧ್ವಂಸಗೊಳಿಸಲಾಯಿತು, ಎಂಬ ಮಾಹಿತಿಯನ್ನು ಪ್ರತ್ಯಕ್ಷದರ್ಶಿ ಹಿಂದೂಗಳು ಒಂದು ವಾರ್ತಾಸಂಕೇತಸ್ಥಳಕ್ಕೆ ನೀಡಿದ್ದಾರೆ. ವಿಶೇಷವೆಂದರೆ ಆಸ್ಪತ್ರೆಯಲ್ಲಿ `ಜುಬೆರ ಖಾನ’ ಎಂದು ಬರೆದಿದ್ದ ಔಷಧಾಲಯ (ಮೆಡಿಕಲ್ ಸ್ಟೋರ್) ಇದೆ. ಸಂಪೂರ್ಣ ಆಸ್ಪತ್ರೆಯನ್ನು ಧ್ವಂಸಗೊಳಿಸಿದರೂ ಈ ಔಷಧಾಲಯವು ಸುಸ್ಥಿತಿಯಲ್ಲಿದೆ.
1. ಈ ಸಮಯದಲ್ಲಿ ಆಸ್ಪತ್ರೆಯಲ್ಲಿನ ಗರ್ಭಿಣಿ ಮಹಿಳೆಯರಿಗಾಗಿ ಇದ್ದ ವಿಭಾಗದ ಮೇಲೆಯೂ ಆಕ್ರಮಣ ಮಾಡಲಾಯಿತು. ಆದುದರಿಂದ ಅಲ್ಲಿನ ಗರ್ಭಿಣಿಯರು ಜೀವವನ್ನು ಕೈಯಲ್ಲಿ ಹಿಡಿದು ಕ್ಷಣ ಕಳೆಯಬೇಕಾಯಿತು.
2. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಯಲ್ಲಿ ಸೇರಿಸಿರುವ ಬಗ್ಗೆ ದಂಗೆಕೊರರಿಗೆ ತಿಳಿದಿದ್ದರಿಂದ ಅವರು ಆ ವಿಭಾಗದ ಮೇಲೆಯೂ ಆಕ್ರಮಣ ಮಾಡಿದರು. ಅಲ್ಲಿನ ಸಿಸಿಟಿವಿ ಕ್ಯಾಮರಾ ನಾಶ ಮಾಡಲಾಗಿದೆ.
3. ಸಂಪೂರ್ಣ ಆಸ್ಪತ್ರೆಯಲ್ಲಿ ಖಡ್ಗದಿಂದ ಆಕ್ರಮಣ ಮಾಡಿ ಅನೇಕ ಬಾಗಿಲುಗಳನ್ನು ಮುರಿದಿರುವುದು ಕಂಡುಬರುತ್ತದೆ. ಅನೇಕ ಜಾಗಗಳಲ್ಲಿ ಗಾಜು ಒಡೆಯಲಾಗಿದೆ. ಇದರಲ್ಲಿ ಅತಿದಕ್ಷತಾ ವಿಭಾಗವೂ ಇದೆ.
Lord Ram’s portraits desecrated by Muslim mobs, counters with Zubair written over them unscathed: The truth of Alwar hospital Rajdeep Sardesai wants to hide (@STVRahul reports)https://t.co/PNmimc6uCK
— OpIndia.com (@OpIndia_com) August 9, 2023
ಸಂಪಾದಕೀಯ ನಿಲುವು* ದಂಗೆಕೊರರ ಮತಾಂಧತೆಯನ್ನು ಅರಿಯಿರಿ ! `ಗಂಗಾ ಜಮುನಿ ತಹಜೀಬ’ನ ಹೆಸರಿನಲ್ಲಿ ಹಿಂದೂಗಳಿಗೆ ಉಪದೇಶಗಳ ಮಳೆಗರೆಯುವವರು ಈ ದಂಗೆಕೊರರ ವಿರುದ್ಧ ಚಕಾರವೆತ್ತುವುದಿಲ್ಲ, ಎಂಬುದನ್ನು ಅರಿಯಿರಿ ! ** ರಾಜದೀಪ ಸರದೇಸಾಯಿಯಂತಹ ಕಥಿತ ಜಾತ್ಯಾತೀತವಾದಿ ಪತ್ರಕರ್ತರಿಂದ ಇಂತಹ ಘಟನೆಗಳನ್ನು ಪರದೆಯ ಹಿಂದೆ ಸರಿಸುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೂಗಳಿಗೆ ಪಟ್ಟುಹಿಡಿಯುವುದು ಮತ್ತು ಮತಾಂಧರ ಕೃತ್ಯಗಳನ್ನು ದುರ್ಲಕ್ಷಿಸುವವರ ಮೇಲೆ ಸರಕಾರವು ಅತ್ಯಂತ ಕಠೋರ ಕಾರ್ಯಾಚರಣೆಯನ್ನು ಮಾಡಬೇಕು ! (ಗಂಗಾ-ಜಮುನಿ ತಹಜೀಬ ಅಂದರೆ ಗಂಗಾ ಮತ್ತು ಯಮುನಾ ನದಿಗಳ ತೀರದಲ್ಲಿ ವಾಸಿಸುವ ಹಿಂದೂ ಹಾಗೂ ಮುಸಲ್ಮಾನರ ನಡುವೆ ದರ್ಶಿಸಲಾಗುವ ಕಥಿತ ಐಕ್ಯತೆಯ ಸಂಸ್ಕೃತಿ) |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed