ಹಿಂದೂ ಅಂಗಡಿದಾರನ ೧೦ ಲಕ್ಷ ರೂಪಾಯಿ ಬಟ್ಟೆಗಳನ್ನು ಲೂಟಿ ಮಾಡಿ ಅಂಗಡಿಗೆ ಬೆಂಕಿ ಹಚ್ಚಿದರು !

ಜುಲೈ ೩೧ ರಂದು ನೂಹದಲ್ಲಿ ಮತಾಂಧ ಮುಸಲ್ಮಾನರ ಹಿಂಸಾಚಾರದಲ್ಲಿನ ಒಂದು ಹೃದಯವಿದ್ರಾವಕ ಘಟನೆ ಬೆಳಕಿಗೆ !

ನೂಹ (ಹರಿಯಾಣ) – ಹಿಂದುಗಳ ಜಲಾಭಿಷೇಕ ಯಾತ್ರೆಯ ಮೇಲೆ ದಾಳಿ ನಡೆಸಿರುವ ಘಟನೆಗೆ ಈಗ ಎಂಟು ದಿನ ಕಳೆದಿದ್ದು ಮತಾಂಧ ಮುಸಲ್ಮಾನರ ಕುಕೃತ್ಯದ ಘಟನೆಗಳು ಹೊರ ಬರುತ್ತಿದೆ. ಈ ದಾಳಿಗಳು ಪೂರ್ವಯೋಜಿತವಾಗಿರುವ ಸಾಕ್ಷಿಗಳು ಕೂಡ ಪೊಲೀಸರ ಕೈ ಸೇರುತ್ತಿವೆ. ಇಂತಹದರಲ್ಲಿ ಜುಮ್ಮಾ ಬಜಾರ್ ನಲ್ಲಿರುವ ಬಟ್ಟೆ ಅಂಗಡಿಯ ಮಾಲಿಕ ಓಂಕೇಶ ಕುಮಾರ ಇವರು ದಾಖಲಿಸಿರುವ ದೂರು ಪ್ರಸಾರ ಮಾಧ್ಯಮಗಳಲ್ಲಿ ಚರ್ಚಿಸಲಾಗುತ್ತಿದೆ. ಕುಮಾರ ಇವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಜುಲೈ ೩೧ ರಂದು ಮಧ್ಯಾಹ್ನ ೩ ಗಂಟೆಗೆ ಮುಸಲ್ಮಾನರ ಒಂದು ಗುಂಪು ಮುಚ್ಚಿರುವ ಅಂಗಡಿಯ ಬೀಗ ಒಡೆದರು. ಅಂಗಡಿಯಲ್ಲಿದ್ದ ೯ – ೧೦ ಲಕ್ಷ ರೂಪಾಯಿಯ ಬಟ್ಟೆಗಳನ್ನು ಲೂಟಿ ಮಾಡಿ ಅಂಗಡಿಗೆ ಬೆಂಕಿ ಹಚ್ಚಿದರು. ಇದರಲ್ಲಿ ಅಂಗಡಿ ಸುಟ್ಟು ಭಸ್ಮವಾಯಿತು. ಅಂಗಡಿಯ ಎರಡು ಬದಿಯಲ್ಲಿ ಇರುವ ಸಿಸಿಟಿವಿ ಫೋಟೋಸ್ ಸಮೀಕ್ಷೆ ನಡೆಸುಲು ಕುಮಾರ ಇವರು ಪೊಲೀಸರಿಗೆ ವಿನಂತಿಸಿದ್ದಾರೆ.