|

ಚಂಡೀಗಡ – ಹರಿಯಾಣದ ನೂಹ್ನಲ್ಲಿ ನಡೆದ ಹಿಂಸಾಚಾರದ ನಂತರ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂಗಳಲ್ಲಿ ಆಕ್ರೋಶದ ಭಾವನೆ ಮೂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಹೇಂದ್ರಗಢ, ಜಜ್ಜರ್ ಮತ್ತು ರೇವಾಡಿ ಈ 3 ಜಿಲ್ಲೆಗಳ 14 ಗ್ರಾಮಗಳು ಮುಸ್ಲಿಮರನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಈ ಗ್ರಾಮಗಳಲ್ಲಿ ಗ್ರಾಮಸಭೆ ಆಯೋಜಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನೂಹ್ ಹಿಂಸಾಚಾರದಿಂದ ಈ 3 ಜಿಲ್ಲೆಗಳ ಹಿಂದೂಗಳು ಹೆಚ್ಚು ತೊಂದರೆಗೀಡಾಗಿದ್ದಾರೆ. ಈ 14 ಗ್ರಾಮಗಳಲ್ಲಿನ ಹಿಂದೂಗಳು ಮುಸ್ಲಿಮರಿಗೆ ಬಾಡಿಗೆ ಮನೆ ನೀಡದಿರಲು ಮತ್ತು ಮುಸ್ಲಿಮರಿಗೆ ನೌಕರಿ ನೀಡದಿರಲು ನಿರ್ಧರಿಸಿದ್ದಾರೆ.
महापंचायत में युवकों की गिरफ्तारी से आक्रोशित गांव वालों ने चारों युवकों को रिहा करने की मांग की. साथ ही इस महापंचायत में मुसलमानों का पूर्ण बहिष्कार करने का आह्वान किया@Abhisheknayan81 #NuhViolence #Mahapanchayat #Haryana https://t.co/C8mlX8K5i2
— ABP News (@ABPNews) August 7, 2023
ಗುರುಗ್ರಾಮದ ತಿಘರಾ ಗ್ರಾಮದಲ್ಲಿ ಮಹಾಪಂಚಾಯತ್
ನೂಹ್ ಹಿಂಸಾಚಾರದ ಹಿನ್ನೆಲೆಯಲ್ಲಿ ಗುರುಗ್ರಾಮದ ತಿಘರಾ ಗ್ರಾಮದಲ್ಲಿ ಹಿಂದೂ ಸಮಾಜದಿಂದ ಮಹಾ ಪಂಚಾಯತಅನ್ನು ಕರೆಯಲಾಗಿತ್ತು. ಈ ಮಹಾಪಂಚಾಯತಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಹಿಂದೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಹಿಂದೂಗಳು ಮುಸ್ಲಿಮರ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದರು. ಈ ಸಮಯದಲ್ಲಿ ಗ್ರಾಮದ ಸೆಕ್ಟರ್-57 ರಲ್ಲಿರುವ ಅಂಜುಮನ್ ಮಸೀದಿಯನ್ನು ಕೆಡವುವಂತೆ ಮಹಾಪಂಚಾಯಿತಿಯಲ್ಲಿ ಕೇಳಿಬಂದಿತ್ತು. ಮಹಾಪಂಚಾಯತಿಯಲ್ಲಿದ್ದ ಜನರು ‘ಈ ಪ್ರದೇಶ ಹಿಂದೂಬಹುಸಂಖ್ಯಾತವಿರುವ ಪ್ರದೇಶವಾಗಿರುವುದರಿಂದ ಇಲ್ಲಿ ಮಸೀದಿ ಇರಬಾರದು’ ಎಂದು ಆಗ್ರಹಿಸುತ್ತಿದ್ದರು.
ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ನನ್ನು ಏಕೆ ಬಂಧಿಸಿಲ್ಲ ?
ನೂಹ್ನಲ್ಲಿ ನಡೆದ ಹಿಂಸಾಚಾರದ ನಂತರ, ಅದರ ಬಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ತಟ್ಟಿತು. ಗುರುಗ್ರಾಮದಲ್ಲೂ ಹಿಂಸಾಚಾರ ನಡೆಯಿತು. ಇದಕ್ಕೆ ಪೊಲೀಸರೇ ಹೊಣೆ; ಆದರೆ ಅದನ್ನು ಹಿಂದೂಗಳ ಮೇಲೆ ಹೊರಿಸಲಾಯಿತು ಎಂದು ಮಹಾಪಂಚಾಯತಿಯಲ್ಲಿ ಪಾಲ್ಗೊಂಡಿದ್ದ ಹಿಂದೂಗಳು ಹೇಳಿದ್ದಾರೆ. ಮುಸ್ಲಿಮರು ಹಿಂಸಾಚಾರವನ್ನು ಪೂರ್ವಯೋಜಿಸಿದ್ದರು; ಆದರೆ ಗುರುಗ್ರಾಮದಲ್ಲಿ ಪೊಲೀಸರು 4 ಹಿಂದೂ ಹುಡುಗರನ್ನು ಬಂಧಿಸಿದ್ದಾರೆ. ಆದರೆ, ಇದೇ ಪೊಲೀಸರು ನೂಹ್ ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವನನ್ನು ಮಾತ್ರ ಬಂಧಿಸಲಿಲ್ಲ. ಪೊಲೀಸರು ಈ ಗಲಭೆ ಪ್ರಕರಣದಲ್ಲಿ ಬಂಧಿಸಿರುವ ಅಮಾಯಕ ಹಿಂದೂಗಳನ್ನು ಬಿಡುಗಡೆ ಮಾಡಲು ಪೊಲೀಸರು 7 ದಿನಗಳ ಕಾಲಾವಕಾಶ ಕೇಳಿದ್ದಾರೆ. 7 ದಿನದೊಳಗೆ ಬಿಡುಗಡೆ ಮಾಡದಿದ್ದಲ್ಲಿ ಮಹಾಪಂಚಾಯತ್ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಮಹಾಪಂಚಾಯತ್ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಗಲಭೆ ಪ್ರಕರಣಗಳಲ್ಲಿ ಅಮಾಯಕ ಹಿಂದೂಗಳನ್ನು ಪೊಲೀಸರು ಬಂಧಿಸುತ್ತಿರುವ ಬಗ್ಗೆ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಮುಸ್ಲಿಮರನ್ನು ಬಹಿಷ್ಕರಿಸುವುದರಿಂದ ಸರ್ವಧರ್ಮಸಮಭಾವಿಗಳು ಸೆಟೆದು ಎದ್ದು ಹಿಂದೂಗಳನ್ನು ‘ಮತಾಂಧರು’ ಎಂದು ದೂಷಿಸುತ್ತಾರೆ; ಆದರೆ ಹಿಂದೂಗಳಿಗೆ ಈ ಸಮಯ ಏಕೆ ಬಂದಿದೆ ?’ ಎಂಬುದನ್ನು ಜಾತ್ಯತೀತವಾದಿಗಳು, ಸಮಾಜವಾದಿಗಳು ವಿಚಾರ ಮಾಡುತ್ತಾರೆಯೇ ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !