|

ಚಂಡೀಗಡ – ಹರಿಯಾಣದ ನೂಹ್ನಲ್ಲಿ ನಡೆದ ಹಿಂಸಾಚಾರದ ನಂತರ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂಗಳಲ್ಲಿ ಆಕ್ರೋಶದ ಭಾವನೆ ಮೂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಹೇಂದ್ರಗಢ, ಜಜ್ಜರ್ ಮತ್ತು ರೇವಾಡಿ ಈ 3 ಜಿಲ್ಲೆಗಳ 14 ಗ್ರಾಮಗಳು ಮುಸ್ಲಿಮರನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಈ ಗ್ರಾಮಗಳಲ್ಲಿ ಗ್ರಾಮಸಭೆ ಆಯೋಜಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನೂಹ್ ಹಿಂಸಾಚಾರದಿಂದ ಈ 3 ಜಿಲ್ಲೆಗಳ ಹಿಂದೂಗಳು ಹೆಚ್ಚು ತೊಂದರೆಗೀಡಾಗಿದ್ದಾರೆ. ಈ 14 ಗ್ರಾಮಗಳಲ್ಲಿನ ಹಿಂದೂಗಳು ಮುಸ್ಲಿಮರಿಗೆ ಬಾಡಿಗೆ ಮನೆ ನೀಡದಿರಲು ಮತ್ತು ಮುಸ್ಲಿಮರಿಗೆ ನೌಕರಿ ನೀಡದಿರಲು ನಿರ್ಧರಿಸಿದ್ದಾರೆ.
महापंचायत में युवकों की गिरफ्तारी से आक्रोशित गांव वालों ने चारों युवकों को रिहा करने की मांग की. साथ ही इस महापंचायत में मुसलमानों का पूर्ण बहिष्कार करने का आह्वान किया@Abhisheknayan81 #NuhViolence #Mahapanchayat #Haryana https://t.co/C8mlX8K5i2
— ABP News (@ABPNews) August 7, 2023
ಗುರುಗ್ರಾಮದ ತಿಘರಾ ಗ್ರಾಮದಲ್ಲಿ ಮಹಾಪಂಚಾಯತ್
ನೂಹ್ ಹಿಂಸಾಚಾರದ ಹಿನ್ನೆಲೆಯಲ್ಲಿ ಗುರುಗ್ರಾಮದ ತಿಘರಾ ಗ್ರಾಮದಲ್ಲಿ ಹಿಂದೂ ಸಮಾಜದಿಂದ ಮಹಾ ಪಂಚಾಯತಅನ್ನು ಕರೆಯಲಾಗಿತ್ತು. ಈ ಮಹಾಪಂಚಾಯತಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಹಿಂದೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಹಿಂದೂಗಳು ಮುಸ್ಲಿಮರ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದರು. ಈ ಸಮಯದಲ್ಲಿ ಗ್ರಾಮದ ಸೆಕ್ಟರ್-57 ರಲ್ಲಿರುವ ಅಂಜುಮನ್ ಮಸೀದಿಯನ್ನು ಕೆಡವುವಂತೆ ಮಹಾಪಂಚಾಯಿತಿಯಲ್ಲಿ ಕೇಳಿಬಂದಿತ್ತು. ಮಹಾಪಂಚಾಯತಿಯಲ್ಲಿದ್ದ ಜನರು ‘ಈ ಪ್ರದೇಶ ಹಿಂದೂಬಹುಸಂಖ್ಯಾತವಿರುವ ಪ್ರದೇಶವಾಗಿರುವುದರಿಂದ ಇಲ್ಲಿ ಮಸೀದಿ ಇರಬಾರದು’ ಎಂದು ಆಗ್ರಹಿಸುತ್ತಿದ್ದರು.
ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ನನ್ನು ಏಕೆ ಬಂಧಿಸಿಲ್ಲ ?
ನೂಹ್ನಲ್ಲಿ ನಡೆದ ಹಿಂಸಾಚಾರದ ನಂತರ, ಅದರ ಬಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ತಟ್ಟಿತು. ಗುರುಗ್ರಾಮದಲ್ಲೂ ಹಿಂಸಾಚಾರ ನಡೆಯಿತು. ಇದಕ್ಕೆ ಪೊಲೀಸರೇ ಹೊಣೆ; ಆದರೆ ಅದನ್ನು ಹಿಂದೂಗಳ ಮೇಲೆ ಹೊರಿಸಲಾಯಿತು ಎಂದು ಮಹಾಪಂಚಾಯತಿಯಲ್ಲಿ ಪಾಲ್ಗೊಂಡಿದ್ದ ಹಿಂದೂಗಳು ಹೇಳಿದ್ದಾರೆ. ಮುಸ್ಲಿಮರು ಹಿಂಸಾಚಾರವನ್ನು ಪೂರ್ವಯೋಜಿಸಿದ್ದರು; ಆದರೆ ಗುರುಗ್ರಾಮದಲ್ಲಿ ಪೊಲೀಸರು 4 ಹಿಂದೂ ಹುಡುಗರನ್ನು ಬಂಧಿಸಿದ್ದಾರೆ. ಆದರೆ, ಇದೇ ಪೊಲೀಸರು ನೂಹ್ ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವನನ್ನು ಮಾತ್ರ ಬಂಧಿಸಲಿಲ್ಲ. ಪೊಲೀಸರು ಈ ಗಲಭೆ ಪ್ರಕರಣದಲ್ಲಿ ಬಂಧಿಸಿರುವ ಅಮಾಯಕ ಹಿಂದೂಗಳನ್ನು ಬಿಡುಗಡೆ ಮಾಡಲು ಪೊಲೀಸರು 7 ದಿನಗಳ ಕಾಲಾವಕಾಶ ಕೇಳಿದ್ದಾರೆ. 7 ದಿನದೊಳಗೆ ಬಿಡುಗಡೆ ಮಾಡದಿದ್ದಲ್ಲಿ ಮಹಾಪಂಚಾಯತ್ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಮಹಾಪಂಚಾಯತ್ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಗಲಭೆ ಪ್ರಕರಣಗಳಲ್ಲಿ ಅಮಾಯಕ ಹಿಂದೂಗಳನ್ನು ಪೊಲೀಸರು ಬಂಧಿಸುತ್ತಿರುವ ಬಗ್ಗೆ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಮುಸ್ಲಿಮರನ್ನು ಬಹಿಷ್ಕರಿಸುವುದರಿಂದ ಸರ್ವಧರ್ಮಸಮಭಾವಿಗಳು ಸೆಟೆದು ಎದ್ದು ಹಿಂದೂಗಳನ್ನು ‘ಮತಾಂಧರು’ ಎಂದು ದೂಷಿಸುತ್ತಾರೆ; ಆದರೆ ಹಿಂದೂಗಳಿಗೆ ಈ ಸಮಯ ಏಕೆ ಬಂದಿದೆ ?’ ಎಂಬುದನ್ನು ಜಾತ್ಯತೀತವಾದಿಗಳು, ಸಮಾಜವಾದಿಗಳು ವಿಚಾರ ಮಾಡುತ್ತಾರೆಯೇ ? |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed