ಪ್ರಭು ಶ್ರೀರಾಮ ಮತ್ತು ಮಹಾರಾಣಾ ಪ್ರತಾಪ್‌ ಇವರ ಅವಮಾನ : ಮೊಹಮ್ಮದ್‌ ಶಾಕಿಬ್‌ ಅಹಮದ್‌ ನ ಬಂಧನ !


ವೈಶಾಲಿ (ಬಿಹಾರ) – ‘ಇನ್ಸ್ಟಾಗ್ರಾಮ್‌’ ಮೂಲಕ ಪ್ರಭು ಶ್ರೀರಾಮಚಂದ್ರ ಮತ್ತು ಮಹಾರಾಣಾ ಪ್ರತಾಪ್‌ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ ಮೊಹಮ್ಮದ್‌ ಶಾಕಿಬ್‌ ಅಹ್ಮದ್‌ ನನ್ನು ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಬಂಧಿಸಲಾಗಿದೆ. ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಜರಂಗದಳ ಹಾಗೂ ಇತರೆ ಹಿಂದೂಪರ ಸಂಘಟನೆಗಳು ಪೋಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದವು. ಕೊನೆಗೆ ಜುಲೈ ೨೫ ರಂದು ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ೨೩ ವರ್ಷದ ಮೊಹಮ್ಮದ್‌ ಒಂದು ವಾರದ ಹಿಂದೆ ಈ ಬರಹವನ್ನು ಪ್ರಸಾರ ಮಾಡಿದ್ದಾನೆ ಎಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ.

ಸಂಪಾದಕೀಯ ನಿಲುವು

ಬೇರೆ ಪಂಥಗಳ ಶ್ರದ್ಧಾ ಸ್ಥಳಗಳಿಗೆ ಈ ರೀತಿಯ ಅವಹೇಳನ ಮಾಡಿದ್ದರೆ, ಪೋಲೀಸರು ತಾವಾಗಿಯೇ ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದರು ! ಬಹುಸಂಖ್ಯಾತ ಹಿಂದೂಗಳು ಪೊಲೀಸ್‌ ಮತ್ತು ಸರಕಾರಿ ವ್ಯವಸ್ಥೆಯ ನಡುವೆ ಇಂತಹ ಭಯವನ್ನು ಯಾವಾಗ ಸೃಷ್ಠಿಸುತ್ತಾರೆ ?