
ಕೊಲಂಬೋ – ಶ್ರೀಲಂಕಾದ ನೌಕಾದಳವು ಅವರ ಸಮುದ್ರ ಕ್ಷೇತ್ರದಲ್ಲಿ ಕಾನೂನ ಬಾಹಿರವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ಸಮಯದಲ್ಲಿ ಶ್ರೀಲಂಕಾದ ನೌಕಾದಳವು ಈ ಮೀನುಗಾರರ ಎರಡು ನೌಕೆಗಳನ್ನು ವಶಕ್ಕೆ ಪಡೆದಿದೆ. ಈ ಎಲ್ಲಾ ಭಾರತೀಯ ಮೀನುಗಾರರು ತಮಿಳುನಾಡಿನವರಾಗಿದ್ದಾರೆ. ಶ್ರೀಲಂಕಾದ ನೌಕಾದಳವು ನಡೆಸಿದ ಒಂದು ವಿಶೇಷ ಅಭಿಯಾನದ ಅಡಿಯಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಿದೆ, ಎಂದು ಹೇಳಲಾಗುತ್ತಿದೆ. ಈ ತಿಂಗಳಲ್ಲಿ ಶ್ರೀಲಂಕಾದ ನೌಕಾದಳದಿಂದ ಭಾರತೀಯ ಮೀನುಗಾರರನ್ನು ಬಂಧಿಸಿರುವುದು ಇದು ಎರಡನೆಯ ಘಟನೆಯಾಗಿದೆ. ಜುಲೈ ೯ ರಂದು ಕಾನೂನ ಬಾಹಿರವಾಗಿ ಶ್ರೀಲಂಕಾದ ಸಮುದ್ರ ಕ್ಷೆತ್ರ ಪ್ರವೇಶ ಮಾಡಿರುವ ಪ್ರಕರಣದಲ್ಲಿ ಶ್ರೀಲಂಕಾದ ನೌಕಾದಳವು ೧೫ ಮೀನುಗಾರರನ್ನು ಬಂಧಿಸಿತ್ತು. ‘ಭಾರತೀಯ ಮೀನುಗಾರರಿಂದ ಅಂತರಾಷ್ಟ್ರೀಯ ಸಮುದ್ರ ಗಡಿಯ ಉಲ್ಲಂಘನೆ ನಡೆಯುತ್ತದೆ’, ಎಂದು ಶ್ರೀಲಂಕಾದ ನೌಕಾದಳದಿಂದ ಆಗಾಗ ಹೇಳಲಾಗುತ್ತದೆ. ಇದರ ಬಗ್ಗೆ ಭಾರತ ಮತ್ತು ಶ್ರೀಲಂಕಾದ ನಡುವೆ ಉನ್ನತಮಟ್ಟದ ಸಭೆ ಆಯೋಜಿಸಲಾಗುತ್ತಿದೆ; ಆದರೆ ಈ ಸಮಸ್ಯೆ ಇಲ್ಲಿಯವರೆಗೆ ಪರಿಹರಿಸಲಾಗಿಲ್ಲ. (ಈ ಸಮಸ್ಯೆ ಪರಿಹಾರವಾಗದೆ ಇರುವ ಕಾರಣ ಏನು? ಹಾಗೂ ಭಾರತೀಯ ಮೀನುಗಾರರು ಅಂತರಾಷ್ಟ್ರೀಯ ಸಮುದ್ರ ಗಡಿಯನ್ನು ನಿಶ್ಚಿತಗೊಳಿಸುವ ಹಿಂದೆ ಏನು ಅಡಚಣೆ ಇದೆ ? ಇದು ಭಾರತೀಯ ಜನರಿಗೆ ತಿಳಿಯಬೇಕು ! – ಸಂಪಾದಕರು)
ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!