ಹಿಮಾಚಲ ಪ್ರದೇಶದಲ್ಲಿ ಹಿಂದೂಗಳ ಮತಾಂತರಕ್ಕೆ ಪ್ರಯತ್ನಿಸಿದ ೧೧ ಕ್ರೈಸ್ತ ಮಿಶನರಿಗಳ ಬಂಧನ

ರಾಮಪುರ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ರಾಮಪುರ ನಗರದಲ್ಲಿ ಕ್ರೈಸ್ತ ಮಿಶನರಿಗಳು ಶಿಬಿರಗಳನ್ನು ಆಯೋಜಿಸಿ ಹಿಂದೂಗಳ ಮತಾಂತರಕ್ಕೆ ಪ್ರಯತ್ನಿಸಲು ಪ್ರಾರಂಭಿಸಿದ್ದರು. ಹಿಂದೂ ಸಂಘಟನೆಗಳ ಜಾಗರೂಕತೆಯಿಂದ ಇದು ಬಹಿರಂಗವಾಯಿತು. ಪೋಲೀಸರು ಈ ಪ್ರಕರಣದಲ್ಲಿ ೧೧ ಮಿಶನರಿಗಳನ್ನು ಬಂಧಿಸಿದ್ದು, ಅವರಲ್ಲಿ ಕೆಲವರು ನೇಪಾಳನ ನಾಗರಿಕರಿದ್ದಾರೆಂದು ಹೇಳಲಾಗುತ್ತಿದೆ.

ಸಂಪಾದಕರ ನಿಲುವು

* ಕಠಿಣ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಇಂತಹವರಿಗೆ ಯಾರ ಹೆದರಿಕೆಯಿಲ್ಲದಂತಾಗಿದೆ !