ಖಲಿಸ್ತಾನಿಗಳಿಗೆ ನಿಮ್ಮ ದೇಶವನ್ನು ಬಳಸಲು ಅನುಮತಿಸಿದರೆ, ಸಂಬಂಧಗಳು ಹದಗೆಡುತ್ತವೆ !

  • ಸಚಿವ ಜೈಶಂಕರ್ ಇವರಿಂದ ಕೆನಡಾ ಸಹಿತ ಇತರ ದೇಶಗಳಿಗೆ ವಿದೇಶಾಂಗ ಎಚ್ಚರಿಕೆ !

  • ಕೆನಡಾದಲ್ಲಿ ಖಲಿಸ್ತಾನಿಗಳಿಂದ ಭಾರತ ವಿರೋಧಿ ಪೋಸ್ಟರ್‌ಗಳನ್ನು ಪ್ರಸಾರ

  • ಜುಲೈ 8 ರಂದು ಭಾರತೀಯ ರಾಯಭಾರ ಕಚೇರಿಯಲ್ಲಿ ಮೆರವಣಿಗೆ

ನವದೆಹಲಿ – ಕೆನಡಾದಲ್ಲಿ ಖಲಿಸ್ತಾನಿಗಳು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಈ ಕುರಿತ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಜುಲೈ 8 ರಂದು ಮೆರವಣಿಗೆ ನಡೆಸುವುದಾಗಿಯೂ ಹೇಳಲಾಗಿದೆ. ಈ ಕುರಿತು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು, ನಾವು ಕೆನಡಾ, ಅಮೆರಿಕಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ತಮ್ಮ ದೇಶವನ್ನು ಖಲಿಸ್ತಾನಿಗಳಿಗೆ ಬಳಸದಂತೆ ವಿನಂತಿಸಿದ್ದಾರೆ. ಹಾಗೆ ಮಾಡಿದರೆ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಭಿತ್ತಿಚಿತ್ರದ ಸೂತ್ರವನ್ನು ಕೆನಡಾ ಸರಕಾರಕ್ಕೆ ಪ್ರಸ್ತುತಪಡಿಸಲಾಗುವುದು’ ಎಂದು ಅವರು ಹೇಳಿದರು.

ಭಿತ್ತಿಪತ್ರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ‘ಹುತಾತ್ಮ’ ಎಂದು ಬಣ್ಣಿಸಲಾಗಿದೆ. ಅಲ್ಲದೆ, ಭಾರತದ 2 ರಾಜತಾಂತ್ರಿಕ ಅಧಿಕಾರಿಗಳನ್ನು ‘ಕೊಲೆಗಾರರು’ ಎಂದು ಕರೆಯಲಾಗಿದೆ. ಕಳೆದ ತಿಂಗಳು ಕೆನಡಾದಲ್ಲಿ ನಿಜ್ಜರ್‌ನನ್ನು ಅಪರಿಚಿತ ದುಷ್ಕರ್ಮಿಗಳು ಕೊಂದಿದ್ದರು. ಅಲ್ಲದೆ, ಈ ಭಿತ್ತಿಪತ್ರದಲ್ಲಿ ಕೆನಡಾದ ರಾಜಧಾನಿ ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನರ್ ಸಂಜಯ ಕುಮಾರ್ ವರ್ಮಾ ಮತ್ತು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅಧಿಕಾರಿ ಅಪೂರ್ವ ಶ್ರೀವಾಸ್ತವ ಅವರಿಗೆ ಬೆದರಿಕೆ ಹಾಕಲಾಗಿದೆ. ಅಲ್ಲದೆ ಜುಲೈ 8 ರಂದು ‘ಖಾಲಿಸ್ತಾನ್ ಫ್ರೀಡಂ ರ್ಯಾಲಿ’ ಹೆಸರಿನಲ್ಲಿ ಮೆರವಣಿಗೆ ನಡೆಯಲಿದೆ. ಇದನ್ನು ಭಾರತೀಯ ರಾಯಭಾರ ಕಚೇರಿಯ ಮುಂದೆ ನಡೆಯಲಿದೆ.