ಕೇರಳದಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸೆಯ ವಿಭಾಗಕ್ಕೆ ಹಿಜಾಬ್ ತೊಟ್ಟು ಹೋಗಲು ಮುಸ್ಲಿಂ ವಿದ್ಯಾರ್ಥಿನೀಯರಿಂದ ಬೇಡಿಕೆ

ಮಹಾವಿದ್ಯಾಲಯವು ಬೇಡಿಕೆಯನ್ನು ತಿರಸ್ಕರಿಸುತ್ತಾ ಸಮಿತಿ ರಚನೆ !

ಸಾಂಧರ್ಭಿಕ ಚಿತ್ರ

ತಿರುವನಂತಪುರಂ (ಕೇರಳ) – ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿನ ೭ ಎಂ.ಬಿ.ಬಿ.ಎಸ್ ವಿದ್ಯಾರ್ಥಿನೀಯರು ಆಪರೇಷನ್ ಥಿಯೇಟರ್ ನಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿದ್ದಾರೆ. ಇದು ಧಾರ್ಮಿಕ ಸಂಪ್ರದಾಯ ಎಂದು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಆದರೆ, ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಕಾಲೇಜು ಆಡಳಿತ ಮಂಡಳಿಯವರು ಈ ಬೇಡಿಕೆಯನ್ನು ತಿರಸ್ಕರಿಸಿದೆ.

ಪ್ರಾಂಶುಪಾಲ ಡಾ. ಲಿನೆಟ್ ಜೆ. ಮೋರಿಸ್ ಅವರು, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೋಂಕು ತಗಲಬಾರದೆಂದು ವೈದ್ಯರು ತಮ್ಮ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಹಾಗಾಗಿ ವಿದ್ಯಾರ್ಥಿನೀಯರ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಈ ಬೇಡಿಕೆಯನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನು ರಚಿಸಲಾಗಿದೆ.

(ಸೌಜನ್ಯ – NDTV)

ಸಂಪಾದಕೀಯ ನಿಲುವು

ಇಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸ್ವಂತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ತೋರಿಸುವ ಪ್ರಯತ್ನವಾಗಿದೆ. ಅನೇಕ ಹಿಂದೂ ವಿದ್ಯಾರ್ಥಿನಿಯರು ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದಿಲ್ಲ, ಅವರು ಎಂದಾದರೂ ಇಂತಹ ಧರ್ಮಾಭಿಮಾನವನ್ನು ತೋರಿಸುತ್ತಾರೆಯೇ ?