ಬಾಗೇಶ್ವರಧಾಮದಲ್ಲಿ ನಾಡ ಪಿಸ್ತುಲ ಹಿಡಿದು ನುಗ್ಗಿದ ರಜ್ಜನ ಖಾನ್ ನ ಬಂಧನ !

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಭದ್ರತೆಯಲ್ಲಿ ಹೆಚ್ಚಳ !

ಛತರಪುರ (ಮಧ್ಯಪ್ರದೇಶ) – ಇಲ್ಲಿಯ ಬಾಗೇಶ್ವರಧಾಮದಲ್ಲಿ ಕಾನೂನು ಬಾಹಿರ ಶಸ್ತ್ರ ಹಿಡಿದು ನುಗ್ಗಿರುವ ರಜ್ಜನ ಖಾನ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅವನಿಂದ ಒಂದು ನಾಡ ಪಿಸ್ತುಲ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯ ನಂತರ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಲ್ಲಿ ಕೆಲವು ಭಕ್ತರು ಪ್ರದಕ್ಷಿಣೆ ಹಾಕುವಾಗ ಒಬ್ಬ ಯುವಕನು ಕೈಯಲ್ಲಿ ನಾಡಪಿಸ್ತುಲ ಹಿಡಿದಿರುವುದು ಕಂಡಿತು . ಇದರ ಮಾಹಿತಿಯನ್ನು ಪೊಲೀಸರಿಗೆ ನೀಡಲಾಯಿತು. ಪೊಲೀಸರು ಅಲ್ಲಿ ಬಂದಿರುವಾಗ ಅವರನ್ನು ನೋಡಿ ರಜ್ಜನ ಖಾನ ಓಡಿ ಹೋದನು. ಪೊಲೀಸರು ಬೆನ್ನಟ್ಟಿ ಅವನನ್ನು ಹಿಡಿದರು. ಅವನು ಶಿವಪುರಿಯಲ್ಲಿನ ಇಂದ್ರಪುರಿ ಸಂಕುಲದ ನಿವಾಸಿಯಾಗಿದ್ದು ಅವನು ಅಲ್ಲಿಗೆ ಏಕೆ ಬಂದಿದ್ದನು ? ಎಂದು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರಿಗೆ ಮಧ್ಯಪ್ರದೇಶ ಸರಕಾರದಿಂದ ವೈ ಶ್ರೇಣಿಯ ಭದ್ರತಾ ವ್ಯವಸ್ಥೆ ಈ ಹಿಂದೆಯೆ ನೀಡಲಾಗಿದೆ.

(ಸೌಜನ್ಯ – VK News)

ಸಂಪಾದಕರ ನಿಲುವು

ಇತರ ಧರ್ಮೀಯರ ಧಾರ್ಮಿಕ ಸ್ಥಳಕ್ಕೆ ಯಾರಾದರೊಬ್ಬ ಹಿಂದೂ ಯಾವತ್ತಾದರೂ ಶಸ್ತ್ರ ಹಿಡಿದು ಹೋದದ್ದು ಮತ್ತು ಅವನು ಏನಾದರೂ ಅಯೋಗ್ಯ ಕೃತಿ ಮಾಡಿದ ಘಟನೆ ಯಾವತ್ತೂ ನಡೆದಿಲ್ಲ ; ಆದರೆ ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ, ಹಾಗೂ ಸಾಧು ಸಂತರ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆದಿರುವ ಅಸಂಖ್ಯಾತ ಘಟನೆಗಳು ನಡೆದಿದೆ, ಎಂಬುದನ್ನು ಗಮನದಲ್ಲಿಡಿ !