ಜುನಾಗಡ (ಗುಜರಾತ) ಇಲ್ಲಿ ಅನಧಿಕೃತ ದರ್ಗಾ ನೆಲಸಮ ಮಾಡುವ ನೋಟಿಸ್ ನೀಡಿದ ನಂತರ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ !

  • ಓರ್ವ ಸಾವು, ಅನೇಕರಿಗೆ ಗಾಯ

  • ಪೊಲೀಸ್ ಉಪಾಧೀಕ್ಷಕ ಸಹಿತ 4 ಪೊಲೀಸರಿಗೆ ಗಾಯ

(ದರ್ಗಾ ಎಂದರೆ ಮುಸಲ್ಮಾನರ ಗೊರಿಯ ಸುತ್ತಲಿನ ಕಟ್ಟಡ)

ಜುನಾಗಡ (ಗುಜರಾತ) – ಇಲ್ಲಿ ಅನಧಿಕೃತವಾಗಿ ಕಟ್ಟಿರುವ ದರ್ಗಾದ ವಿರುದ್ಧ ನಗರ ಪಾಲಿಕೆyu ನೋಟಿಸ್ ಜಾರಿ ಮಾಡಿದ್ದರಿಂದ ೩೦೦ ಕ್ಕಿಂತಲೂ ಹೆಚ್ಚಿನ ಮತಾಂಧ ಮುಸಲ್ಮಾನರು ಜೂನ್ ೧೫ ರಂದು ರಾತ್ರಿ ಭಯಂಕರ ಹಿಂಸಾಚಾರ ನಡೆಸಿದರು. ಅವರು ಪೊಲೀಸ ಠಾಣೆ ಗುರಿ ಮಾಡುತ್ತಾ ಪೊಲೀಸರ ಮೇಲೆ ದಾಳಿ ನಡೆಸಿದರು ಇದರಲ್ಲಿ ನಾಲ್ಕು ಪೊಲೀಸರು ಗಾಯಗೊಂಡರು. ಅವರ ವಾಹನಗಳನ್ನು ನಾಶ ಮಾಡಿದರು. ಹಾಗೂ ಇತರ ವಾಹನಗಳು ಸುಟ್ಟಿ ಹಾಕಿದರು. ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಾಟ ಕೂಡ ಮಾಡಲಾಯಿತು. ಈ ಸಮಯದಲ್ಲಿ ಮತಾಂಧ ಮುಸಲ್ಮಾನರಿಂದ ‘ಅಲ್ಲಾಹು ಅಕ್ಬರ್’ (ಅಲ್ಲಾ ಮಹಾನನಾಗಿರುವನು) ಘೋಷಣೆ ನೀಡಲಾಗುತ್ತಿತ್ತು. ಪೊಲೀಸರು ಇದರಿಂದ ಪಾರಾಗಲು ಅಶ್ರು ವಾಯುವಿನ ಉಪಯೋಗ ಮಾಡಲಾಯಿತು. ಈ ಹಿಂಸಾಚಾರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಹಿಂಸಾಚಾರದ ಪ್ರಕರಣದಲ್ಲಿ ಇಲ್ಲಿಯವರೆಗೆ ೧೭೪ ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ದರ್ಗಾ ತೆರವುಗೊಳಿಸುವುದಕ್ಕಾಗಿ ಐದು ದಿನದ ಸಮಯ ಅವಕಾಶ ನೀಡಲಾಗಿತ್ತು. ನೋಟಿಸಿಗೆ ಪ್ರತಿಕ್ರಿಯೆ ದೊರೆಯಲಿಲ್ಲ. ತದನಂತರ ಸರಕಾರವು ಕ್ರಮ ಕೈಗೊಳ್ಳಲು ನಿರ್ಧರಿಸಿತು. ಜೂನ್ ೧೬ ರಂದು ಸಂಜೆ ಮಹಾಪಾಲಿಕೆಯಿಂದ ದರ್ಗಾ ನೆಲೆಸಮಾಡುವ ನೋಟಿಸ್ ಅಂಟಿಸಲು ತಲುಪಿದಾಗ, ಅದರ ವಿರೋಧದಲ್ಲಿ ಮತಾಂಧ ಮುಸಲ್ಮಾನರು ಗದ್ದಲ ಸೃಷ್ಟಿಸಿದರು. ಅವರು ರಸ್ತೆಯಲ್ಲಿ ಹೋಗುವ ಬಸ್ಸಿನ ಗಾಜುಗಳು ಒಡೆದರು. ಅದರ ನಂತರ ಪೊಲೀಸರ ವಾಹನಗಳನ್ನು ಧ್ವಂಸ ಮಾಡಿದರು ಮತ್ತು ಬೈಕುಗಳನ್ನು ಸುಟ್ಟು ಹಾಕಿದರು.

ಅನಧಿಕೃತ ಕಟ್ಟಡ ನಿರ್ಮಿಸಿ ಮತ್ತೆ ಅಧಿಕಾರ ಚಲಾಯಿಸುವವರಿಗೆ ಕಾನೂನಿನ ಭಯ ಉಳಿದಿಲ್ಲ ಇದರಿಂದ ಗಮನಕ್ಕೆ ಬರುತ್ತದೆ !

ಅನಧಿಕೃತ ಕಟ್ಟಡ ನಿರ್ಮಿಸುವಾಗಲೇ ಕ್ರಮ ಏಕೆ ಕೈಗೊಳ್ಳುವುದಿಲ್ಲ, ಇದನ್ನು ಕೂಡ ನೋಡುವ ಅವಶ್ಯಕತೆ ಇದೆ !

ಗುಜರಾತದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರಿಗೆ ಹಿಂಸಾಚಾರ ನಡೆಸುವ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !