ಉತ್ತರಾಖಂಡದಲ್ಲಿ ಆಕ್ರೋಶಗೊಂಡ ಗುಂಪು ಲವ್ ಜಿಹಾದಿಯನ್ನು ಥಳಿಸಿ ಅವನ ಮೆರವಣಿಗೆ ಮಾಡಿದರು !

ಲವ್ ಜಿಹಾದಿಯು ಹಿಂದೂ ಯುವತಿಯ ಅಶ್ಲೀಲ ಛಾಯಾಚಿತ್ರವನ್ನು ತೆಗೆದು ಅವಳನ್ನು ಬೆದರಿಸಿದ್ದ !

ಡೆಹರಾಡೂನ – ಇಲ್ಲಿನ ಜಾಲಿ ಗ್ರ್ಯಾಂಟ್ ಪ್ರದೇಶದಲ್ಲಿ ಗುಂಪೊಂದು ಓರ್ವ ಲವ್ ಜಿಹಾದಿಯನ್ನು ಹಿಡಿದು ಧರ್ಮದೇಟು ನೀಡಿ ಮೆರವಣಿಗೆ ತೆಗೆದರು. ಬಳಿಕ ಪೊಲೀಸ ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದರು. ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಹಿಂದೂ ವಿದ್ಯಾರ್ಥಿನಿಯು ಓರ್ವ ಮುಸಲ್ಮಾನ ಯುವಕನನ್ನು, `ಮುಸಲ್ಮಾನನು ನನ್ನೊಂದಿಗೆ ಸ್ನೇಹ ಬೆಳೆಸಿ ನನ್ನ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು. ನಾನು ಮತಾಂತರಗೊಳ್ಳಬೇಕು ಅದಕ್ಕಾಗಿ ಛಾಯಾಚಿತ್ರಗಳನ್ನು ತೋರಿಸಿ ನನಗೆ ಬೆದರಿಕೆ ಹಾಕುತ್ತಿದ್ದನು’ ಎಂದು ಆರೋಪಿಸಿದ್ದಾಳೆ. ಈ ಘಟನೆಯ ಮಾಹಿತಿ ಸಿಗುತ್ತಲೇ ಜನರಲ್ಲಿ ಆಕ್ರೋಶ ಭುಗಿಲೆದ್ದಿತು ಮತ್ತು ಬಳಿಕ ಸಂಬಂಧಪಟ್ಟ ಯುವಕನ ಮೆರವಣಿಗೆ ತೆಗೆದರು. ಜನರು ಮುಸಲ್ಮಾನನಿಗೆ ಚೆನ್ನಾಗಿ ಥಳಿಸಿದ್ದರಿಂದ ಅವನ ಬಟ್ಟೆ ಹರಿಯಿತು. ಒಂದು ಸುದ್ದಿಯನುಸಾರ ಈ ಮುಸಲ್ಮಾನ ಯುವಕನು 3 ಹಿಂದೂ ವಿದ್ಯಾರ್ಥಿನಿಯರ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹಿಂದೂಗಳು ಆರೋಪಿಸಿದ್ದಾರೆ. ಸಂಬಂಧಪಟ್ಟ ಮುಸಲ್ಮಾನ ಈ ಹಿಂದೂ ಯುವತಿಯರಿಗೆ ಮಾದಕ ವಸ್ತುವನ್ನು ತಿನ್ನಿಸಿ, ಅವರೊಂದಿಗೆ ಸಂಬಂಧ ಬೆಳೆಸಿ ಅವರ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದನು.

ಮುಸಲ್ಮಾನ ಯುವಕನಿಗೆ ಥಳಿಸುತ್ತಿರುವ ಮಾಹಿತಿ ಸಿಗುತ್ತಲೇ ಇತರೆ ಮುಸಲ್ಮಾನರು ಘಟನಾಸ್ಥಳವನ್ನು ತಲುಪಿದರು. `ಯುವಕನೊಂದಿಗೆ ನಮ್ಮನ್ನೂ ಥಳಿಸಿದರು’ ಎಂದು ಮುಸಲ್ಮಾನರು ಆರೋಪಿಸಿದರು. ತದನಂತರ ಎರಡೂ ಗುಂಪುಗಳ ಜನರು ಪೊಲೀಸ ಠಾಣೆಯನ್ನು ತಲುಪಿದರು. ಆ ಸಮಯದಲ್ಲಿ ಎರಡೂ ಗುಂಪುಗಳಲ್ಲಿ ವಾಗ್ವಾದ ನಡೆಯಿತು. ಪೊಲೀಸರು ಅವರನ್ನು ಶಾಂತಗೊಳಿಸಿದರು.

ಉತ್ತರಾಖಂಡದಲ್ಲಿ ಲವ್ ಜಿಹಾದ ಘಟನೆಗಳಲ್ಲಿ ಹೆಚ್ಚಳ

ಉತ್ತರಾಖಂಡದಲ್ಲಿ ಲವ್ ಜಿಹಾದ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. 2022 ರಲ್ಲಿ ಲವ್ ಜಿಹಾದ್ ನ 76 ಪ್ರಕರಣಗಳು ಬಹಿರಂಗವಾಗಿತ್ತು. ಈ ವರ್ಷ ಮೇ 2023 ವರೆಗೆ ಲವ್ ಜಿಹಾದ್ ನ 50 ಪ್ರಕರಣಗಳು ಬೆಳಕಿಗೆ ಬಂದಿದೆ. ಇದರಲ್ಲಿ ಬಹಳಷ್ಟು ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯರಿದ್ದಾರೆ.

ಸಂಪಾದಕರ ನಿಲುವು

ಕೇವಲ ಉತ್ತರಾಖಂಡ ಮಾತ್ರವಲ್ಲ, ಭಾರತಾದ್ಯಂತ ಲವ್ ಜಿಹಾದ್ ತಡೆಗಟ್ಟಲು ಸರಕಾರ ವಿಫಲಗೊಂಡರೆ, ಜನರು ಕಾನೂನನ್ನು ಕೈಗೆತ್ತಿಕೊಂಡು ಲವ್ ಜಿಹಾದಿಗಳಿಗೆ ಪಾಠ ಕಲಿಸುತ್ತಾರೆ ಎನ್ನುವುದು ಇಂತಹ ಘಟನೆಗಳಿಂದ ಕಂಡು ಬರುತ್ತದೆ !