ತಾನು ಮುಸಲ್ಮಾನನೆಂಬುದನ್ನು ಮರೆಮಾಚಿ ಹಿಂದೂ ಹುಡುಗಿಯನ್ನು ವಂಚಿಸಿ ಬಲಾತ್ಕಾರ ಮಾಡಿದ ಶಾರುಖ ಬಂಧನ

ದೆಹಲಿಯ ಲವ್ ಜಿಹಾದ ಘಟನೆ

ನವ ದೆಹಲಿ- ರಾಜಧಾನಿ ದೆಹಲಿಯ ಸಾಕ್ಷಿ ಹೆಸರಿನ ಹಿಂದೂ ಹುಡುಗಿಯನ್ನು ಅವಳ ಮುಸಲ್ಮಾನ ಪ್ರಿಯಕರನು ಮಾಡಿರುವ ಅಮಾನವೀಯ ಹತ್ಯೆ ಹಸಿರಾಗಿರುವಾಗಲೇ ಅಲ್ಲಿ ಲವ್ ಜಿಹಾದ್ ನ ಮತ್ತೊಂದು ಪ್ರಕರಣ ಬಹಿರಂಗವಾಗಿದೆ. ಇನ್‌ಸ್ಟಾಗ್ರಾಮ್ ಮೂಲಕ ತನ್ನ ಸುಳ್ಳು ಪರಿಚಯವನ್ನು ಹೇಳಿ ಹಿಂದೂ ಹುಡುಗಿಯನ್ನು ಮೋಸಗೊಳಿಸಿದ ಶಾರೂಖ ಈ ಲವ್ ಜಿಹಾದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವನ ವಿರುದ್ಧ ಬಲಾತ್ಕಾರದ ದೂರನ್ನು ದಾಖಲಿಸಲಾಗಿದೆ.

ಶಾರೂಖನು 2020 ರಲ್ಲಿ ಒಬ್ಬ ಹಿಂದೂ ಹುಡುಗಿಯನ್ನು ತಾನು ಹಿಂದೂ ಆಗಿದ್ದಾನೆಂದು ತೋರಿಸಿ ಪ್ರೇಮದ ಜಾಲದಲ್ಲಿ ಸೆಳೆದಿದ್ದಾನೆ. ತದನಂತರ ಅವಳ ಮೇಲೆ ಬಲಾತ್ಕಾರ ಮಾಡಿ ಅವಳ ಅಶ್ಲೀಲ ಛಾಯಾಚಿತ್ರಗಳನ್ನು ಪ್ರಸಾರ ಮಾಡುವ ಬೆದರಿಕೆ ಹಾಕತೊಡಗಿದನು. ಜನವರಿ 2023 ರಲ್ಲಿ ಹುಡುಗಿಗೆ ಅವನು ಮುಸಲ್ಮಾನನಾಗಿದ್ದು, ಅವನ ಹೆಸರು ಶಾರೂಖ ಆಗಿದೆಯೆಂದು ಗಮನಕ್ಕೆ ಬಂದಾಗ ಅವಳು ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಇದರಿಂದ ಶಾರೂಖ ಅವಳಿಗೆ ಮತ್ತು ಅವಳ ಕುಟುಂಬದವರಿಗೆ ಜೀವಬೆದರಿಕೆ ಹಾಕತೊಡಗಿದನು. ಆಕೆ ಧೈರ್ಯ ತೋರಿಸಿ ಶಾರೂಖನ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದಳು. ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿದ್ದು, ಮುಂದಿನ ಕ್ರಮ ಕೈಕೊಳ್ಳುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಲವ್ ಜಿಹಾದ್ ಅನ್ನು ಕಟ್ಟುಕಥೆ ಎನ್ನುವವರು ಈಗ ಈ ಘಟನೆಯ ಬಗ್ಗೆ ಏನು ಹೇಳುತ್ತಾರೆ?
  • `ಪ್ರೇಮಕ್ಕೆ ಧರ್ಮದ ಬಂಧನವಿಲ್ಲ’ ಎಂದು ಹಿಂದುತ್ವನಿಷ್ಠರಿಗೆ ಗದರಿಸುವ ಜಾತ್ಯತೀತವಾದಿಗಳು ತಮ್ಮ ಮುಸಲ್ಮಾನ ಪರಿಚಯವನ್ನು ಮರೆಮಾಚಿ ಹಿಂದೂ ಹುಡುಗಿಯನ್ನು ಮೋಸಗೊಳಿಸುವ ಲವ್ ಜಿಹಾದ್‌ ವಿರುದ್ಧ ಎಂದಿಗೂ ಚಕಾರವೆತ್ತುವುದಿಲ್ಲ ಎನ್ನುವುದನ್ನು ಅರಿಯಿರಿ.