‘ಕರ್ನಾಟಕ ಸರಕಾರ ಗೋಳವಲಕರ, ಸಾವರಕರ ಮುಂತಾದ ಹುಸಿ ದೇಶಭಕ್ತರ ಪಾಠವನ್ನು ಕೈಬಿಡಬೇಕಂತೆ ! – ಕನ್ನಡ ಸಾಹಿತಿ ವೀರಭದ್ರಪ್ಪ

ಕನ್ನಡ ಸಾಹಿತಿ ವೀರಭದ್ರಪ್ಪನವರ ವೈಚಾರಿಕ ದಿವಾಳಿತನ !

ಕನ್ನಡ ಸಾಹಿತಿ ವೀರಭದ್ರಪ್ಪ

ಚಾಮರಾಜನಗರ – ಶಾಲಾ ಪಠ್ಯಪುಸ್ತಕದಿಂದ ಗೋಳವಲಕರ, ಸಾವರಕರ ಮುಂತಾದ ಹುಸಿ ದೇಶಭಕ್ತರ ಪಾಠವನ್ನು ಕೈಬಿಡಬೇಕು. ಇಂತಹ ಪಾಠಗಳನ್ನು ಮಕ್ಕಳಿಗೆ ಕಲಿಸಬಾರದು. ಸರಕಾರ ಈ ವಿಷಯದಲ್ಲಿ ಆದೇಶಿಸಬೇಕು ಎಂದು ಕನ್ನಡ ಸಾಹಿತಿ ವೀರಭದ್ರಪ್ಪ ಇವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ಹಿಂದಿನ ಸರಕಾರ ಮಾನವವಿರೋಧಿ, ದೇಶವಿರೋಧಿ ಮತ್ತು ಸಮಾಜವಿರೋಧಿ ಪಠ್ಯಕ್ರಮವನ್ನು ಜಾರಿಗೊಳಿಸಿತು. ಇದು ತಪ್ಪಾಗಿದೆ. ಇದು ನಮ್ಮ ಸಂವಿಧಾನದ ಅಪಮಾನವಾಗಿದೆ. ಹೊಸ ಸರಕಾರವು ಇದನ್ನು ಬದಲಾಯಿಸಬೇಕು’ ಎಂದೂ ಅವರು ಹೇಳಿದರು.

ಸಂಪಾದಕೀಯ ನಿಲುವು

ರಾಷ್ಟ್ರ ಮತ್ತು ಧರ್ಮಗಳ ವಿಷಯದಲ್ಲಿ ಸಾವಿರಾರು ಪುಟಗಳ ಅಜರಾಮರ ಸಾಹಿತ್ಯವನ್ನು ಬರೆಯುವ ಸ್ವಾತಂತ್ರ್ಯವೀರ ಸಾವಕರರ ವಿಷಯದಲ್ಲಿ ಇಂತಹ ಹೇಳಿಕೆ ನೀಡುವ ತಥಾಕಥಿತ ಸಾಹಿತಿಗಳ ಸಾಹಿತ್ಯ ಹೇಗಿರಬಹುದು ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !