ತಮಿಳುನಾಡುನಲ್ಲಿ ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣು; ಮುಸಲ್ಮಾನ ಹುಡುಗರನ್ನು ಪ್ರೀತಿಸುತ್ತಿದ್ದರು !

ತಿರುಚಿರಾಪಲ್ಲಿ (ತಮಿಳುನಾಡು) – ಇಲ್ಲಿ ಇಬ್ಬರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿರುಚಿರಾಪಲ್ಲಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ೨೧ ವರ್ಷದ ವಿದ್ಯಾ ಮತ್ತು ೨೩ ವರ್ಷದ ಗಾಯಿತ್ರಿ ಇವರ ಶವವು ವಲನಾಡು ಗ್ರಾಮದ ಒಂದು ಬಾವಿಯಲ್ಲಿ ಕಂಡು ಬಂದಿದೆ. ಪೊಲೀಸರು ಎರಡೂ ಶವಗಳನ್ನು ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ಇಬ್ಬರೂ ಸಹೋದರಿಯರು ಇಬ್ಬರು ಮುಸಲ್ಮಾನ ಹುಡುಗರನ್ನು ಪ್ರೀತಿಸುತ್ತಿದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಸ್ಥಳೀಯ ಪ್ರಸಾರ ಮಾಧ್ಯಮಗಳ ಪ್ರಕಾರ ಇಬ್ಬರು ಸಹೋದರಿಯರು ಕೊಯಿಮತ್ತೂರು ಹತ್ತಿರ ಇರುವ ಕಾಂಗೆಯಂ ಇಲ್ಲಿಯ ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲಸ ಮಾಡುವ ಇಬ್ಬರೂ ಮುಸಲ್ಮಾನ ಹುಡುಗರ ಜೊತೆ ಅವರ ಸ್ನೇಹ ಬೆಳೆಯಿತು. ಈ ಸ್ನೇಹದ ರೂಪಾಂತರ ಪ್ರೀತಿಯಲ್ಲಿ ಆಯಿತು. ಇಬ್ಬರೂ ಸಹೋದರಿಯರು ಅವರ ಪ್ರಿಯಕರನ ಜೊತೆ ಮೊಬೈಲ್ ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಅವರ ತಾಯಿಯು ಇದರ ಬಗ್ಗೆ ಕೇಳಿದಾಗ ಅವರು, ಗಿರಣಿಯಲ್ಲಿ ಕೆಲಸ ಮಾಡುವ ಇಬ್ಬರೂ ಮುಸಲ್ಮಾನ ಹುಡುಗರ ಮೇಲೆ ಅವರ ಪ್ರೇಮವಿದೆ ಎಂದು ಹೇಳಿದರು. ಇಬ್ಬರೂ ಮುಸಲ್ಮಾನ ಇರುವುದು ತಿಳಿದ ನಂತರ ತಾಯಿ-ತಂದೆಯರು ಅದನ್ನು ತಿರಸ್ಕರಿಸಿದ್ದರು.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು, ಇಬ್ಬರೂ ಸಹೋದರಿಯರು ಧಾರ್ಮಿಕ ಮರ್ಯಾದೆ ದಾಟಿ ಪ್ರೇಮ ಮತ್ತು ಸಂಬಂಧದ ಬಗ್ಗೆ ಸಂಭ್ರಮದಲ್ಲಿ ಇದ್ದರು. ಇಬ್ಬರು ತಮ್ಮ ಮೂಲ ಗ್ರಾಮದ ದೇವಸ್ಥಾನದ ಉತ್ಸವದಲ್ಲಿ ಸಹಭಾಗಿ ಆಗುವದಕ್ಕಾಗಿ ಮನೆಗೆ ಬಂದಿದ್ದರು. ಜೂನ್ ೬ ರಂದು ಅವರ ಶವ ಗ್ರಾಮದ ಬಾವಿಯಲ್ಲಿ ಕಂಡು ಬಂದಿದೆ. (ಇದರಿಂದ ಇಬ್ಬರೂ ಸಹೋದರಿಯ ಮೇಲೆ ವಿವಾಹ ಮತ್ತು ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದರೆ, ಇದರ ತನಿಖೆ ನಡೆಯುವುದು ಅವಶ್ಯಕ ! – ಸಂಪಾದಕರು)

ಸಂಪಾದಕೀಯ ನಿಲುವು

ದೇಶಾದ್ಯಂತ ನಡೆಯುತ್ತಿರುವ ಘಟನೆಗಳು ನೋಡಿದರೆ ಇದು ಲವ್ ಜಿಹಾದ್ ಪ್ರಕರಣ ಎಂಬುದು ಅಲ್ಲಗಳೆಯಲು ಸಾಧ್ಯವಿಲ್ಲ ?