ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಬೆಂಬಲಿಗರಿಂದ ದೇಶವಿರೋಧಿ ಘೋಷಣೆ !

ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ ವಾಲೆಯವರ ಭಿತ್ತಿಪತ್ರ ರಾರಾಜಿಸಿತು !

ಅಮೃತಸರ (ಪಂಜಾಬ) – 1984ರಲ್ಲಿ ನಡೆಸಲಾಗಿದ್ದ `ಆಪರೇಶನ ಬ್ಲೂ ಸ್ಟಾರ’ ಕಾರ್ಯಾಚರಣೆಗೆ 39 ವರ್ಷಗಳು ಪೂರ್ಣಗೊಂಡಿರುವ ನಿಮಿತ್ತದಿಂದ ಇಲ್ಲಿಯ ಸ್ವರ್ಣ ಮಂದಿರದಲ್ಲಿ ಖಲಿಸ್ತಾನದ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಗುಂಪುಗೂಡಿದ್ದ ಜನರಿಂದ ಖಲಿಸ್ತಾನಿ ಭಯೋತ್ಪಾದಕ ಜರ್ನೆಲ್ ಸಿಂಹ ಭಿಂದ್ರನ್ ವಾಲೆಯ ಭಿತ್ತಿಪತ್ರವನ್ನು ಕೂಡ ತೋರಿಸಿದರು. ಸೈನ್ಯದ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಮರಣ ಹೊಂದಿದ್ದನು. ಸ್ವರ್ಣಮಂದಿರದಲ್ಲಿ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸರು ಮತ್ತು ಸರಕಾರ ಜಾಗರೂಕರಾಗಿದ್ದು, ಈ ಘಟನಾವಳಿಗಳ ಮೇಲೆ ಸರಕಾರ ಸೂಕ್ಷ್ಮವಾಗಿ ಗಮನವಿಟ್ಟಿದೆ.

ಘೋಷಣೆಯ ನೀಡುವಾಗ ಶ್ರೀ ಅಕಾಲ ತಃಖ್ತೆದಾರ (ಪ್ರಮುಖ) ಜ್ಞಾನಿ ಹರಪ್ರೀತ ಸಿಂಹ ಇವರು ಸಿಖ್ಖ ಸಮುದಾಯವನ್ನು ಸಂಬೋಧಿಸುವಾಗ, ಸಧ್ಯಕ್ಕೆ ನಮ್ಮ ಸಮಾಜ ಮತ್ತು ಧಾರ್ಮಿಕ ಸಂಘಟನೆಗಳು ಎರಡು ಭಾಗವಾಗಲಿದೆ. ಅವರು ಶ್ರೀ ಅಕಾಲ ತಃಖ್ತ ಮುಖಂಡತ್ವದಲ್ಲಿ ಒಂದುಗೂಡುವುದು ಕಾಲದ ಆವಶ್ಯಕತೆಯಾಗಿದೆಯೆಂದು ಹೇಳಿದರು.

ಸಂಪಾದಕೀಯ ನಿಲುವು

ಖಲಿಸ್ತಾನಿ ಕ್ರಿಮಿಗಳು ಇದುವರೆಗೂ ನಾಶವಾಗಿಲ್ಲ. ಅದನ್ನು ನಾಶಗೊಳಿಸಲು ಈಗಲೇ ಕಠಿಣ ಉಪಾಯೋಜನೆಯನ್ನು ಮಾಡುವುದು ಆವಶ್ಯಕವಾಗಿದೆ !